ಬೆಂಗಳೂರು | ಗಾಂಧಿ ಪ್ರಣೀತ ಸಂಸ್ಥೆಗಳನ್ನು ಉಡುಗಿಸಲು ಸರ್ಕಾರಗಳ ಯತ್ನ; ಆಗಸ್ಟ್‌ 17ರಂದು ಪ್ರತಿಭಟನೆ

Date:

ದೇಶದಲ್ಲಿ ‘ಗಾಂಧಿ ಪ್ರಣೀತ’ ಸಾಮಾಜಿಕ ಸೇವಾ ಸಂಸ್ಥೆಗಳನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಪ್ರವೃತ್ತಿಗಳು ಗಾಂಧಿ ಬಳಗದಲ್ಲಿ ಆತಂಕ ಹುಟ್ಟಿಸುತ್ತಿವೆ. ಈ ದಮನಕಾರಿ ಕೃತ್ಯಗಳ ಮೂಲಕ ಗಾಂಧಿ ಪ್ರಣೀತ ಸಂಸ್ಥೆಗಳ ಅಂತಃಶಕ್ತಿಯನ್ನೇ ಉಡುಗಿಸುವ ಹುನ್ನಾರಗಳನ್ನು ಖಂಡಿಸಿ ಆಗಸ್ಟ್‌ 17ರಂದು ಬೆಂಗಳೂರಿನ ಗಾಂಧಿ ಭವನದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಗಾಂಧಿ ಸ್ಮಾರಕ ನಿಧಿ ತಿಳಿಸಿದೆ.

ಗಾಂಧಿ ತತ್ವಗಳ ದಮನದ ವಿರುದ್ಧದ ಪ್ರತಿಭಟನೆ ಕುರಿತು ಗಾಂಧಿ ಸ್ಮಾಕರ ನಿಧಿ ಪತ್ರಿಕಾ ಪ್ರಕರಣೆ ಬಿಡುಗಡೆ ಮಾಡಿದೆ. “ಗುಜರಾತ್‌ನ ಅಹಮದಾಬಾದ್‌ನಲ್ಲಿ ಗಾಂಧಿ ಅವರು ಸ್ಥಾಪಿಸಿದ್ದ ಸಬರಮತಿ ಆಶ್ರಮವನ್ನು ಗುಜರಾತ್ ಸರ್ಕಾರವು ಅಭಿವೃದ್ಧಿಯ ಹೆಸರಿನಲ್ಲಿ ಒಂದು ವಾಣಿಜ್ಯ ಮತ್ತು ಪ್ರವಾಸಿ ಕೇಂದ್ರವನ್ನಾಗಿ ರೂಪಿಸಿ ಗಾಂಧೀಯವರ ಮೂಲ ಸಬರಮತಿ ಆಶ್ರಮದ ಆಶಯವನ್ನೇ ಹಾಳುಗೆಡವಿದೆ. ‘ಸಬರಮತಿ ಆಶ್ರಮ ಸಂರಕ್ಷಣಾ ಮತ್ತು ಸ್ಮಾರಕ ಟ್ರಸ್ಟ್‘ನ ಆಡಳಿತ ಮಂಡಳಿಯನ್ನು ತನ್ನ ಕೈವಶ ಮಾಡಿಕೊಂಡು ಅಲ್ಲಿಗೆ ತಮ್ಮ ರಾಜಕೀಯ ನಿಲುವು ಒಪ್ಪಿಕೊಂಡಿರುವವರನ್ನು ನಿರ್ದೇಶಕರನ್ನಾಗಿ ನೇಮಿಸಿದೆ. ಇದರ ಜೊತೆಗೆ ಸಬರಮತಿ ಆಶ್ರಮದ ಆರಂಭದಿಂದಲೂ ಅದಕ್ಕೆ ಆರ್ಥಿಕ ನೆರವು ನೀಡಿಕೊಂಡು ಬಂದಿದ್ದ ಗಾಂಧಿ ಸ್ಮಾರಕ ನಿಧಿ ಮತ್ತು ಹರಿಜನ ಸೇವಕ ಸಂಘ ಹಾಗೂ ಇತರೆ ಗಾಂಧೀ ಪ್ರಣೀತ ಟ್ರಸ್ಟ್ ಗಳನ್ನು ಮೂಲೆಗುಂಪು ಮಾಡಲಾಗಿದೆ” ಎಂದು ಕಿಡಿಕಾರಿದೆ.

“ಅಹಮದಾಬಾದ್ ನಗರದಲ್ಲಿ ಗಾಂಧೀಜಿಯವರೇ 1920ರಲ್ಲಿ ಆರಂಭಿಸಿದ ಗುಜರಾತ್ ವಿದ್ಯಾಪೀಠವೂ ಸಹ ಈಗ ರಾಜಕೀಯ ಮೇಲಾಟಕ್ಕೆ ಬಲಿಯಾಗಿದೆ. ದೇಸಿ ಮಾದರಿಯ ಈ ವಿಶ್ವವಿದ್ಯಾಲಯಕ್ಕೆ ಗಾಂಧೀಜಿ ಅನುಯಾಯಿಗಳು ಮತ್ತು ವಿಚಾರವಾದಿಗಳನ್ನು ಮಾತ್ರ ಉಪಕುಲಪತಿ ಹುದ್ದೆಗೆ ನೇಮಿಸುವ ಪರಂಪರೆ ಇತ್ತು. ಗುಜರಾತ್ ಸರ್ಕಾರವು ಈ ಪರಂಪರೆಗೆ ತಿಲಾಂಜಲಿ ನೀಡಿ ತಮ್ಮ ರಾಜಕೀಯ ನಿಲುವಿಗೆ ಬದ್ಧರಾಗಿರುವವರನ್ನು ಉಪಕುಲಪತಿಗಳನ್ನಾಗಿ ನೇಮಿಸಿದೆ” ಎಂದು ಆರೋಪಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸುದ್ದಿ ಓದಿದ್ದೀರಾ?: ಶಿಕ್ಷಣ ಕ್ಷೇತ್ರದ ಸುಧಾರಣೆಯೇ ಸಂವಿಧಾನದ ಗೆಲುವಿಗೆ ಸೋಪಾನ;‌ ಆದರೆ, ಆಗುತ್ತಿರುವುದೇನು?

“ಗಾಂಧೀಜಿಯವರಿಗೆ ಸಂಬಂದಿಸಿದ ಪುಸ್ತಕಗಳ ಪ್ರಕಟಣೆ ಮತ್ತು ಮಾರಾಟಕ್ಕೆಂದೇ ಸ್ಥಾಪಿಸಿದ ನವಜೀವನ ಟ್ರಸ್ಟ್ ಕೂಡಾ ಈಗ ತನ್ನತನವನ್ನು ಕಳೆದುಕೊಂಡು ಒಂದು ಮಾಮೂಲಿ ವ್ಯಾಪಾರೀ ಸಂಸ್ಥೆಯಾಗಿ ಪರಿವರ್ತನೆಗೊಂಡಿದೆ. ಇಲ್ಲಿನ ಆಡಳಿತ ಮಂಡಳಿ ತನ್ನ ಮೂಲ ಕರ್ತವ್ಯವನ್ನು ಮರೆತು ಕೆಫೆಟೇರಿಯಾ ,ಕಲಾ ಗ್ಯಾಲರಿ ಇತ್ಯಾದಿಗಳನ್ನು ನಿರ್ಮಿಸಿಕೊಂಡು ಒಂದು ಸಾಮಾನ್ಯ ಪುಸ್ತಕಗಳ ಮಾರಾಟ ಮಳಿಗೆಯಾಗಿ ಬದಲಾವಣೆಗೊಂಡಿದೆ. ರಾಮ, ಕೃಷ್ಣ ಮತ್ತು ವಿವೇಕಾನಂದ ಇತ್ಯಾದಿ ಸಾಮಾನ್ಯ ಕೃತಿಗಳ ಪ್ರಕಟಣೆ ಮತ್ತು ಮಾರಾಟ ಕೇಂದ್ರವಾಗಿ ನವಜೀವನ ಟ್ರಸ್ಟ್ ನಿಧಾನಕ್ಕೆ ತನ್ನ ಚಹರೆಯನ್ನು ಬದಲಾಯಿಸಿಕೊಂಡಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದೆ.

“ಇತ್ತೀಚೆಗೆ ಉತ್ತರಪ್ರದೇಶದ ವಾರಣಾಸಿಯಲ್ಲಿದ್ದ ಗಾಂಧಿ ಪ್ರಣೀತ ಸಂಸ್ಥೆಯಾದ ‘ಸರ್ವ ಸೇವಾ ಸಂಘ’ದ ಅಸ್ತಿಯು ರೈಲ್ವೆ ಇಲಾಖೆಗೆ ಸೇರಿದ ಆಸ್ತಿ ಎಂದು ದಾಖಲೆ ಸೃಷ್ಟಿಸಿ ನ್ಯಾಯಾಲಯದ ಮೂಲಕ ಯೋಗಿ ಸರ್ಕಾರ ವಶಪಡಿಸಿಕೊಂಡಿದೆ. ಹಲವಾರು ವರ್ಷಗಳಿಂದ ಟ್ರಸ್ಟ್ ನ ಕಟ್ಟಡಗಳಲ್ಲಿ ನೆಲೆಸಿದ್ದವರನ್ನು ಹೊರದಬ್ಬಿ ಆ ಕಟ್ಟಡಗಳನ್ನು ನೆಲಸಮ ಮಾಡಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...