ಕೊಡಗು ಜಿಲ್ಲೆ, ಸೋಮವಾರ ಪೇಟೆ ತಾಲ್ಲೂಕು, ಶನಿವಾರ ಸಂತೆ ಹೋಬಳಿಯ ಹಂಡ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಎಸ್. ಸುಧಾ ಈರೇಶ್ ಲಂಚ ಪಡೆವಾಗ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ಕಾಮಗಾರಿ ವೆಚ್ಚ ₹14,70,000 ರೂಪಾಯಿ ಬಿಲ್ ಮಾಡಲು ಗುತ್ತಿಗೆದರಾರು ಕೋರಿದಾಗ, ಸಹಿ ಹಾಕಲು ₹25,000 ರೂಪಾಯಿ ನೀಡುವಂತೆ ಬೇಡಿಕೆಯಿಟ್ಟಿದ್ದಾರೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಎಂ. ಸುಧಾ ಈರಯ್ಯ.
ಗುತ್ತಿಗೆದಾರರ ಸಹಾಯಕ ಭರತ್ ದಿನಾಂಕ-06-10-2025 ರಂದು ಲೋಕಾಯುಕ್ತ ಠಾಣೆಗೆ ಭೇಟಿ ನೀಡಿ ದೂರು ನೀಡಿದ್ದಾರೆ. ಖಚಿತ ಮಾಹಿತಿ ಅನುಸರಿಸಿ, ಅಪರ ಪೊಲೀಸ್ ಮಹಾ ನಿರ್ದೇಶಕರಾದ ಮನೀಶ್ ಬಿ. ಕರ್ಬಿಕರ್, ಪೊಲೀಸ್ ಮಹಾ ನಿರೀಕ್ಷಕರಾದ ಸುಬ್ರಮಣ್ಯರಾವ್ ಹಾಗೂ ಮೈಸೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಟಿ. ಜೆ. ಉದೇಶ್ ರವರ ಮಾರ್ಗದರ್ಶನದಲ್ಲಿ ಮಡಿಕೇರಿ ಲೋಕಾಯುಕ್ತ ಡಿವೈಎಸ್ಪಿ ದಿನಕರ್ ಶೆಟ್ಟಿ ಅವರ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಲೋಕೇಶ್, ವೀಣಾ ನಾಯಕ್ ಹಾಗೂ ಸಿಬ್ಬಂದಿಯೊಡನೆ ದಾಳಿ ನಡೆಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಸೌಜನ್ಯ ಕೊಲೆ ಪ್ರಕರಣ; ‘ನ್ಯಾಯಕ್ಕಾಗಿ ಜನಾಗ್ರಹ’
ಇದೇ ವೇಳೆ ಗುತ್ತಿಗೆದಾರ ಹಮೀದ್ ರವರಿಂದ ₹25,000 ರೂಪಾಯಿ ಲಂಚ ಪಡೆವಾಗ ಹಣದ ಸಮೇತ ಲೋಕಾಯುಕ್ತ ಪೊಲೀಸರು ಅಧ್ಯಕ್ಷೆ ಸುಧಾ ಈರೇಶ್ ಅವರನ್ನು ವಶಕ್ಕೆ ಪಡೆದು ಅಪರಾಧ ಸಂಖ್ಯೆ 04/2025 ಕಲಂ 7(ಚಿ) 7ಓ ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988 ರೀತ್ಯಾ ಪ್ರಕರಣ ದಾಖಲಿಸಿದ್ದಾರೆ.





