ಗುಬ್ಬಿ | ಶೀತ, ಕೆಮ್ಮು, ಜ್ವರ ಹೆಚ್ಚಳ ತಂದ ಆತಂಕ : ಹೊರ ರೋಗಿಗಳ ಸಂಖ್ಯೆ ಹೆಚ್ಚಳ

Date:

ಕಳೆದ ಹದಿನೈದು ದಿನದಿಂದ ಶೀತ ಜ್ವರ ನಂತರ ದೀರ್ಘಾವಧಿ ಕೆಮ್ಮುವ ರೋಗಿಗಳ ಸಂಖ್ಯೆ ಉಲ್ಬಣವಾಗಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಮುಂದೆ ಸಾಲು ಸರದಿಯಲ್ಲಿ ಕುಳಿತ ರೋಗಿಗಳ ಸಂಖ್ಯೆ ಕೂಡಾ ಅಧಿಕವಾಗಿ ವೈದ್ಯರು ಪುರುಸೊತ್ತಿಲ್ಲದೆ ಚಿಕಿತ್ಸೆಯಲ್ಲಿ ತೊಡಗಿರುವ ದೃಶ್ಯ ಕಾಣುತ್ತಿದೆ.

ವಾತಾವರಣ ಬದಲಾವಣೆ ಒಮ್ಮೆ ಮಳೆ, ಬಿಸಿಲು ಕಾಣಿಸುವ ಈ ಹವಾಮಾನದಲ್ಲಿ ಕಾಣುವ ಈ ವೈರಲ್ ಫೀವರ್ ಬಹುಬೇಗ ಹರಡುತ್ತದೆ. ನೆಗಡಿಯಿಂದ ಆರಂಭವಾಗಿ ಕಫ, ಜ್ವರ, ಮೈಕೈ ನೋವು ಹೆಚ್ಚಾಗಿ ಮೂರರಿಂದ ಐದು ದಿನಗಳ ಕಾಲ ಮಲಗಿಸುತ್ತಿದೆ. ಈ ಸಾಂಕ್ರಾಮಿಕ ವೈರಾಣು ಶೀತ ಸೀನುವಿಕೆಯಿಂದ ಬೇಗ ಹರಡುತ್ತದೆ. ಕೋವಿಡ್ ಭೀತಿ ಇರುವ ಈ ಸಮಯದಲ್ಲಿ ವೈರಲ್ ಫೀವರ್ ಮತ್ತಷ್ಟು ಭಯ ತಂದಿರುವುದಂತೂ ಸತ್ಯ.

ಗುಬ್ಬಿ ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್ ಗಳಲ್ಲಿ ನಿತ್ಯ ಇರುತ್ತಿದ್ದ ಹೊರ ರೋಗಿಗಳ ಸಂಖ್ಯೆ ಶೇಕಡಾ 20 ರಷ್ಟು ಹೆಚ್ಚಳವಾಗಿದೆ. ಗ್ರಾಮೀಣ ಭಾಗದಲ್ಲಿ ಸಹ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ವೈರಲ್ ಫೀವರ್ ಹೆಸರಿಗೆ ತಕ್ಕಂತೆ ಬೇಗ ಹರಡುತ್ತಿರುವ ಈ ಸಮಯದಲ್ಲಿ ರೋಗಿಗಳು ಮುನ್ನೆಚ್ಚರಿಕೆ ಕ್ರಮ ಅನುಸರಿಸುವುದು ಸೂಕ್ತ. ಮಾಸ್ಕ್ ಬಳಕೆ, ಶೀತ ಕಾಣಿಸಿಕೊಂಡ ತಕ್ಷಣ ತಾವೇ ವೈದ್ಯಕೀಯ ನಡೆಸದೆ ನೇರ ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆ ಪಡೆಯುವುದು ಒಳ್ಳೆಯದು. ಸುದೀರ್ಘ ಕಾಲ ಕಾಣುವ ಕೆಮ್ಮು ಬಗ್ಗೆ ಎಚ್ಚರವಹಿಸಬೇಕು. ಒಣ ಕೆಮ್ಮು ಇದ್ದಲ್ಲಿ ಸೂಕ್ತ ಔಶಧೋಪಚಾರ ಅಗತ್ಯ. ಬಿಸಿ ನೀರು ಕುಡಿಯುವುದು, ಶೀತ ಪದಾರ್ಥ ಸೇವಿಸದೆ ಬಿಸಿ ಆಹಾರ ತಿನ್ನುವುದು ಇದಕ್ಕೆ ಮದ್ದು. ಕೆಮ್ಮು ಜೊತೆ ಕಫ ಇದ್ದಲ್ಲಿ ಖಂಡಿತಾ ವೈದ್ಯರ ಬಳಿ ತಪಾಸಣೆ ಮಾಡಿಸುವುದು ಸೂಕ್ತ ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ಕ್ರಮ ಸೂಚಿಸುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಮಳೆಗಾಲದ ಈ ಸಂದರ್ಭದಲ್ಲಿ ವೈರಲ್ ಫೀವರ್ ಹರಡುವಿಕೆ ಕಾಣಸಿಗುತ್ತದೆ. ನೆಗಡಿಯಿಂದ ಆರಂಭವಾಗಿ ಜ್ವರ ಬರುತ್ತದೆ. ಜ್ವರ ಬಿಟ್ಟರೂ ಕೆಮ್ಮು ನಿರಂತರ ಕಾಣುತ್ತದೆ. ವೈರಾಣು ಕಾಟಕ್ಕೆ ನಿತ್ಯ ಹೊರ ರೋಗಿಗಳ ಸಂಖ್ಯೆ ಸರ್ಕಾರಿ ಆಸ್ಪತ್ರೆಯಲ್ಲಿ ಶೇಕಡಾ 10 ರಷ್ಟು ಹೆಚ್ಚಿದೆ. ಮಳೆಗಾಲದಲ್ಲಿ ಹೆಚ್ಚಾಗಿ ಅಲರ್ಜಿ ಮೂಲಕ ಹರಡುವ ಈ ವೈರಾಣು ಗಾಳಿ, ನೀರು ಹಾಗೂ ಧೂಳು ಅಲರ್ಜಿ ಎನಿಸುತ್ತದೆ. ಸಾಂಕ್ರಾಮಿಕ ವೈರಾಣು ಹರದಂತೆ ಎಚ್ಚರಿಕೆ ಕ್ರಮ ಮಾಸ್ಕ್ ಬಳಕೆ ಉತ್ತಮ ಹಾಗೂ ಸೂಕ್ತ ಚಿಕಿತ್ಸೆ, ಬಿಸಿ ಆಹಾರ, ನೀರು ಬಳಕೆ, ನಿರಂತರ ಕೆಮ್ಮು ಇದ್ದಲ್ಲಿ ವೈದ್ಯರ ಭೇಟಿ ಉತ್ತಮ” ಎಂದು ಗುಬ್ಬಿ ತಾಲ್ಲೂಕು ವೈದ್ಯಾಧಿಕಾರಿ ಡಾ.ಬಿಂದುಮಾಧವ ತಿಳಿಸಿದ್ದಾರೆ.


WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...