ಗುಬ್ಬಿ | ರಾಷ್ಟ್ರೀಯ ಯುವ ದಿನ ಅಂಗವಾಗಿ ಅಯೋಡಿನ್ ಕೊರತೆ ಅಸ್ಪಷ್ಟತೆ ಬಗ್ಗೆ ಜಾಗೃತಿ ಅಧಿವೇಶನ

Date:

ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನ ಅಂಗವಾಗಿ ನಿಟ್ಟೂರು ಹೋಬಳಿ ಕುಂದರನಹಳ್ಳಿ ಗೇಟ್ ಬಳಿಯ ಶ್ರೀ ರಂಗನಾಥ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಅಯೋಡಿನ್ ಕೊರತೆ ಅಸ್ಪಷ್ಟತೆ ಕುರಿತು ಅಧಿವೇಶನ ಆಯೋಜಿಸಲಾಗಿತ್ತು.

ಬೆಂಗಳೂರಿನ ಐಜಿಡಿ ಸಂಸ್ಥೆ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನ ಹಾಗೂ ಅಯೋಡಿನ್ ಕೊರತೆ ಅಸ್ಪಷ್ಟತೆ ಅಧಿವೇಶನದಲ್ಲಿ ನೂರಾರು ಮಕ್ಕಳು ಆರೋಗ್ಯ ಜಾಗೃತಿ ಬಗ್ಗೆ ಸಾಕ್ಷಷ್ಟು ಮಾಹಿತಿ ಹಾಗೂ ಅಯೋಡಿನ್ ಕೊರತೆಯಿಂದ ಆಗುವ ದುಷ್ಪರಿಣಾಮ ಬಗ್ಗೆ ತಿಳಿಯಲಾಯಿತು.

ಐಜಿಡಿ ಸಂಸ್ಥೆಯ ಡಾ.ಸುಷ್ಮಾ ಮಾತನಾಡಿ ಮಾನಸಿಕ ಆರೋಗ್ಯಕ್ಕೆ ಸಮಸ್ಯೆ ನೀಡುವ ಅಯೋಡಿನ್ ಕೊರತೆ ಮನುಷ್ಯನಲ್ಲಿ ನಾನಾ ರೋಗಗಳಿಗೆ ಮೂಲವಾಗಿದೆ. ಅಸ್ಪಷ್ಟತೆ ಬಗ್ಗೆ ಡಾಕ್ಟರ್ ಸಲಹೆ ಅತ್ಯಗತ್ಯ. ಮೈಕ್ರೋ ನ್ಯೂಟ್ರಿನ್ ಅವಶ್ಯಕತೆ ಬಗ್ಗೆ ಸಹ ಮಕ್ಕಳು ತಿಳಿಯಬೇಕು ಎಂದ ಅವರು ಉಪ್ಪಿನ ದ್ರಾವಣ ಅಂಶ ಸೇವನೆ ಕಡಿಮೆಯಾಗದಂತೆ ಗಮನಹರಿಸಬೇಕು. ಕೆಲ ಪ್ರದೇಶದಲ್ಲಿ ಮಣ್ಣಿನಲ್ಲಿ ಅಯೋಡಿನ್ ಕಡಿಮೆ ಇದ್ದು ಅಲ್ಲಿನ ಬೆಳೆಗಳ ತಿನ್ನುವರಲ್ಲಿ ಅಯೋಡಿನ್ ಕೊರತೆ ಕಾಣುತ್ತದೆ. ಸಮುದ್ರಾಹಾರ ಸೇವನೆ ಮಾಡುವುದು ಉತ್ತಮ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಶಿಕ್ಷಕಿ ಪೂರ್ಣಿಮಾ ಮಾತನಾಡಿ ಸ್ವಾಮಿ ವಿವೇಕಾನಂದರ ಜಯಂತಿ ದಿನವನ್ನು ರಾಷ್ಟ್ರೀಯ ದಿನಾಚರಣೆಯಾಗಿ ಆಚರಿಸುವ ಹಿನ್ನಲೆ ಮುಂದಿನ ಪೀಳಿಗೆಗೆ ಆರೋಗ್ಯ ಕಾಳಜಿ ಬಗ್ಗೆ ತಿಳಿಸಬೇಕಿದೆ. ವೀರ ಸನ್ಯಾಸಿ ಎಂದೇ ವಿಶ್ವ ಖ್ಯಾತಿ ಪಡೆದ ವಿವೇಕಾನಂದರ ವಾಣಿ ಎಂದಿಗೂ ಯುವ ಜಾಗೃತಿ ಮೂಡಿಸುತ್ತದೆ. ಅಧ್ಯಾತ್ಮಿಕ ಚಿಂತಕರಾಗಿ ಪ್ರಭಾವಿಗಳಾಗಿ ವಿಶ್ವವೇ ನಿಬ್ಬೆರಗಾಗುವ ಮಾತುಗಳು ವಿಶ್ವ ಸಮ್ಮೇಳನದಲ್ಲಿ ಆಡಿದ್ದರು. ಅವರ ಪ್ರಕಾರ ಆರೋಗ್ಯವಂತ ಯುವಕರು ಆರೋಗ್ಯ ಸಮಾಜಕ್ಕೆ ಮಾರ್ಗಸೂಚಿ ಎಂದರು.

ಐಜಿಡಿ ಸಂಸ್ಥೆಯ ಕ್ಷೇತ್ರ ಮಾರ್ಗದರ್ಶಕ ಶಿವರಾಜ್ ಮಾತನಾಡಿ ಗ್ರಾಮೀಣ ಭಾಗದ ಮಕ್ಕಳಲ್ಲಿ ಆರೋಗ್ಯ ಅರಿವು ಅತೀ ಮುಖ್ಯವಾಗಿದೆ. ದೈಹಿಕ ಸ್ವಾಸ್ಥ್ಯ ಕುರಿತು ಅಯೋಡಿನ್ ಕೊರತೆಯಿಂದ ಆಗುವ ದುಷ್ಪರಿಣಾಮ ಬಗ್ಗೆ ತಿಳಿಯುವುದು ಅವಶ್ಯವಿದೆ. ವಿವೇಕಾನಂದ ಜಯಂತಿ ದಿನವೇ ಯುವ ಜನಾಂಗಕ್ಕೆ ಆರೋಗ್ಯ ಜಾಗೃತಿ ಮೂಡಿಸುವ ಕೆಲಸ ಸಂಸ್ಥೆ ನಿರಂತರ ನಡೆಸಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ನಟರಾಜು, ಶಿಕ್ಷಕರಾದ ಎಸ್.ಡಿ.ಕುಮಾರ್, ತನುಜ್ ಕುಮಾರ್, ಐಜಿಡಿ ಸಂಸ್ಥೆಯ ಜಿಲ್ಲಾ ಸಂಯೋಜಕರಾದ ರಾಜಶ್ರೀ, ಎಚ್ ಆರ್ ನವೀನ್ ಕುಮಾರ್ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...