ಗುಬ್ಬಿ | ರೈತನ ಕೃಷಿ ಚಟುವಟಿಕೆಗೆ ಜೇನು ಸಾಕಾಣಿಕೆ ವರದಾನ : ಪುಷ್ಪಲತಾ

Date:

ರೈತರು ತಮ್ಮ ಕೃಷಿ ಚಟುವಟಿಕೆಯಲ್ಲಿ ಪ್ರಮುಖ ಘಟವಾದ ಪರಾಗಸ್ಪರ್ಶ ಕ್ರಿಯೆಗೆ ಜೇನು ಸಾಕಾಣಿಕೆ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಈ ಹಿನ್ನಲೆ ರೈತರು ಹೆಚ್ಚು ಜೇನು ಸಾಕಾಣಿಕೆ ತರಬೇತಿ ಪಡೆಯಿರಿ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಪುಷ್ಪಲತಾ ಕರೆ ನೀಡಿದರು.

ಗುಬ್ಬಿ ಪಟ್ಟಣದ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ನಡೆದ ಜೇನು ಸಾಕಾಣಿಕೆ ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು ಜೇನು ಹುಳು ಗಿಡದಿಂದ ಗಿಡಕ್ಕೆ ಪರಾಗಸ್ಪರ್ಶ ಕ್ರಿಯೆ ಅತ್ಯುತ್ತಮವಾಗಿ ನಡೆಸುತ್ತದೆ. ಈ ಹಿನ್ನಲೆ ಬೆಳೆ ಇಳುವರಿ ಹೆಚ್ಚಲಿದೆ. ಈಗಾಗಲೇ ತೆಂಗು ಅಡಿಕೆ ಬೆಳೆ ಇಳುವರಿ ಕುಸಿತ ಕಾಣುತ್ತಿದೆ. ಈ ಸಮಯ ಜೇನುಕೃಷಿ ಉತ್ತಮ ಸಲಹೆ ಎಂದರು.

ಪ್ರತಿ ವರ್ಷ ಬೆಳೆಗಳಿಗೆ ಹೊಸ ರೋಗಗಳು ಕಾಣಿಸಿಕೊಳ್ಳುತ್ತದೆ. ಪರಾಗಸ್ಪರ್ಶ ಎನ್ನುವುದು ಕಡಿಮೆಯಾಗಿರುವುದು ಸಹ ಇದಕ್ಕೆ ಒಂದು ಕಾರಣ ಎನ್ನುವುದು. ಜೇನು ಕೃಷಿಗೆ ಕಡಿಮೆ ಸಮಯ ವ್ಯಯ ಮಾಡಿದರೆ ಸಾಕು. ಕೃಷಿ ಮಧ್ಯೆ ನಡೆಯುವ ಹುಳು ಸಾಕಾಣಿಕೆ ಉತ್ತಮ ಜೇನುತುಪ್ಪ ಸಹ ಸಿಗಲಿದೆ. ಇದಕ್ಕೂ ಮಾರುಕಟ್ಟೆಯಲ್ಲಿ ಬೇಡಿಕೆಯ ಮೊತ್ತ ಸಿಗಲಿದೆ. ಕೆಜಿಗೆ 500 ರಿಂದ ಮಾರಾಟ ಆಗುತ್ತದೆ. ಮರದಿಂದ ಮರಕ್ಕೆ ಹಾರುವ ಜೇನುಹುಳು ಹೂವಿನಲ್ಲಿ ತುಪ್ಪ ಹೀರುವ ಜೊತೆ ಹೂವಿನ ಪರಾಗಸ್ಪರ್ಶ ಮಾಡುತ್ತದೆ. ಈ ಬಗ್ಗೆ ತರಬೇತಿ ಶಿಬಿರದಲ್ಲಿ ಪಾಲ್ಗೊಂಡ ರೈತರಿಂದ ಮಾಹಿತಿ ಸಿಗುತ್ತದೆ. ಸರ್ಕಾರ ಜೇನು ಕೃಷಿಗೆ ಸಬ್ಸಿಡಿ ನೀಡುತ್ತಿದೆ. ಹೆಚ್ಚಿನ ಮಾಹಿತಿ ತೋಟಗಾರಿಕೆ ಇಲಾಖೆಯಲ್ಲಿ ಪಡೆಯಬಹುದಾಗಿದೆ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಜೇನು ಸಾಕಾಣಿಕೆ ತರಬೇತಿದಾರ ಶ್ರೀಧರ್ ಮಾತನಾಡಿ ಜೇನುಹುಳು ಸಾಕಾಣಿಕೆ ಭಯ ಪಡುವ ಅಗತ್ಯವಿಲ್ಲ. ತೋಟದಲ್ಲಿ ಸ್ವಲ್ಪ ಜಾಗ ನಿಗದಿ ಮಾಡಬೇಕಿದೆ. ಸ್ವಚ್ಛತೆ ಕಾಪಾಡಿದರೆ ಜೇನುಕೃಷಿ ಅಚ್ಚುಕಟ್ಟಾಗಿ ನಡೆಸಬಹುದು. ತುಡುವೆ ಜೇನು ನಮ್ಮಲ್ಲಿ ಬಹು ಬೇಡಿಕೆಯ ಸಾಕಾಣಿಕೆ ಹುಳು. ಪ್ರತಿ ನಿತ್ಯ ಅರ್ಧ ಗಂಟೆ ಸಮಯ ಸಾಕಾಣಿಕೆಗೆ ನೀಡಿದರೆ ನಿಮ್ಮ ತೋಟದಲ್ಲಿ ವರ್ಷದಲ್ಲೇ ಉತ್ತಮ ಇಳುವರಿ ನೋಡಬಹುದಾಗಿದೆ. ಜೇನು ಕೃಷಿಗೆ ಸರ್ಕಾರ ಸಾಕಾಣಿಕೆ ಪೆಟ್ಟಿಗೆಗೆ ಸಬ್ಸಿಡಿ ನೀಡುತ್ತದೆ. ಇಚ್ಛೆಯುಳ್ಳ ರೈತರು ಪೆಟ್ಟಿಗೆ ಖರೀದಿಗೆ ತೋಟಗಾರಿಕೆ ಇಲಾಖೆಯಲ್ಲಿ ಅರ್ಜಿ ಪಡೆದು ಜೇನು ಸಾಕಾಣಿಕೆ ಮಾಡಬಹುದು. ತರಬೇತಿ ಪಡೆದ ರೈತರು ನಮ್ಮ ಜಿಲ್ಲೆಯಲ್ಲಿ ಬಹಳ ಮಂದಿ ಇದ್ದಾರೆ. ಯಶಸ್ಸು ಕಂಡ ರೈತರು ಸಹ ಇದ್ದಾರೆ. ತುಪ್ಪ ಸಹ ಬೇಡಿಕೆ ಇದೆ. ಆಸಕ್ತ ರೈತರು ತೋಟಗಾರಿಕೆ ಇಲಾಖೆ ಮೂಲಕ ಸಂಪರ್ಕಿಸಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಫಲಾನುಭವಿ ರೈತರಿಗೆ ಜೇನು ಪೆಟ್ಟಿಗೆ ವಿತರಣೆ ಮಾಡಲಾಯಿತು. ವೇದಿಕೆಯಲ್ಲಿ ತೋಟಗಾರಿಕೆ ಅಧಿಕಾರಿಗಳಾದ ಜಗದೀಶ್, ಗವಿರಂಗಸ್ವಾಮಿ, ಐಡಿಎಫ್ ಸಂಸ್ಥೆಯ ಗಿರೀಶ್ ಸೇರಿದಂತೆ ತರಬೇತಿಗೆ ನೂರಾರು ರೈತರು ಆಗಮಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...