ಗುಬ್ಬಿ | ಜಾತಿ ಕಾಡು ಗೊಲ್ಲ, ಧರ್ಮ ಬುಡಕಟ್ಟು ಬರೆಸಿ : ಡಾ. ಬಸವ ರಮಾನಂದ ಸ್ವಾಮೀಜಿ

Date:

ಪರಿಶಿಷ್ಟ ಪಂಗಡಕ್ಕೆ ಸೇರಬೇಕಾದ ಕಾಡು ಗೊಲ್ಲ ಜನಾಂಗ ವಿಶಿಷ್ಟ ಆಚರಣೆ ವಿಚಾರ ಮೂಲಕ ಅಲೆಮಾರಿಗಳಾಗಿ ಬುಡಕಟ್ಟು ಸಂಸ್ಕೃತಿ ಹೊಂದಿರುವ ಹಿನ್ನಲೆ ಕಾಡು ಗೊಲ್ಲ ಜನಾಂಗದವರು ಜಾತಿ ಗಣತಿದಾರರ ನಮೂನೆಯ 541 ಕಾಲಂ ನಲ್ಲಿ ಜಾತಿಯನ್ನು ಕಾಡು ಗೊಲ್ಲ, ಉಪ ಜಾತಿಯನ್ನು ಕಾಡು ಗೊಲ್ಲ, ಧರ್ಮ ಬುಡಕಟ್ಟು ಎಂದು ನಮೂದಿಸಿ ಎಂದು ಹೆಗ್ಗುಂದ ವನಕಲ್ಲು ಮಠದ ಡಾ.ಶ್ರೀ ಬಸವ ರಮಾನಂದ ಸ್ವಾಮೀಜಿ ತಿಳಿಸಿದರು.

ಗುಬ್ಬಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಯಾವುದೇ ಜಾತಿ ಪರ ವಿರೋಧ ನಮ್ಮಲ್ಲಿಲ್ಲ. ನಮ್ಮದು ಬುಡಕಟ್ಟು ಸಂಸ್ಕೃತಿ ಪರಂಪರೆ ಬೆಳೆಸಿದ ಕಾಡುಗೊಲ್ಲರು ನಾಗರೀಕ ಸಮಾಜದಿಂದ ದೂರ ಉಳಿದು ಹಟ್ಟಿಗಳ ನಿರ್ಮಾಣ ಮಾಡಿಕೊಂಡು ಪಶುಪಾಲನೆ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಲು ಅರ್ಹತೆ ಪಡೆದರೂ ನಮ್ಮಲ್ಲಿ ಒಗ್ಗಟ್ಟು ಕಾಣದೇ ಯಾವುದೇ ಸವಲತ್ತು ಗಳಿಸಲಾಗಿಲ್ಲ. ಈ ಹಿನ್ನಲೆ ಕಾಡು ಗೊಲ್ಲ ಸಂಸ್ಕೃತಿಯನ್ನು ಪ್ರತ್ಯೇಕವಾಗಿ ಬಿಂಬಿಸಿ ಜಾತಿಗಣತಿಯಲ್ಲಿ ಕಾಡು ಗೊಲ್ಲ ಎಂದೇ ಬರೆಸಿ ಎಂದು ಮನವಿ ಮಾಡಿದರು.

ಮೊದಲಿನಿಂದಲೂ ಕಾಡು ಗೊಲ್ಲ ಜಾತಿಯ ಹೆಸರು ನಮೂದಿಸಲಾಗಿತ್ತು. ದೇಶ ವಿದೇಶಿ ಇತಿಹಾಸಕಾರರ ಬರವಣಿಗೆಯಲ್ಲಿ ಕಾಡು ಗೊಲ್ಲ ಜನಾಂಗ ಹೆಸರು ಕಂಡು ಬಂದಿತ್ತು. 1930 ರಲ್ಲಿ ಮೈಸೂರು ಸಂಸ್ಥಾನ ಯಾದವ ಅಥವಾ ಗೊಲ್ಲ ಹೆಸರು ಪ್ರಸ್ತುತಗೊಂಡಿತ್ತು. ಇದೇ ಕಾಡು ಗೊಲ್ಲ ಅಸ್ಥಿತ್ವಕ್ಕೆ ಬಿದ್ದ ಕೊಡಲಿ ಪೆಟ್ಟು ಇದಾಗಿದೆ. ಧಾರ್ಮಿಕ, ಸಾಮಾಜಿಕ ಆಚಾರ ವಿಚಾರದಲ್ಲಿ ವಿಭಿನ್ನತೆ ಬುಡಕಟ್ಟು ಸಂಸ್ಕೃತಿ ತೋರುತ್ತದೆ. ಈ ಹಿನ್ನಲೆ ಎಸ್ಟಿ ಮೀಸಲಾತಿ ಸವಲತ್ತು ನಮಗೆ ದೊರೆಯಬೇಕಿದೆ. ನಮ್ಮ ಜನಾಂಗದವರು ಕಾಡು ಗೊಲ್ಲ ಎಂದೇ ಬರೆಸಿ ಎಂದು ಮತ್ತೊಮ್ಮೆ ಮನವಿ ಮಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ವಕೀಲ ಬಿ.ದೊಡ್ಡಯ್ಯ ಮಾತನಾಡಿ ಕಾಡು ಗೊಲ್ಲರ ಅಭ್ಯುದಯಕ್ಕೆ ಪ್ರಸ್ತುತ ನಡೆದಿರುವ ಜಾತಿ ಗಣತಿಯಲ್ಲಿ ಕಾಡು ಗೊಲ್ಲ ಎಂದೇ ನಮೂದಿಸಬೇಕಿದೆ. ರಾಜ್ಯದ 12 ಜಿಲ್ಲೆಯ 40 ತಾಲ್ಲೂಕಿನಲ್ಲಿ ವಾಸ್ತವ್ಯ ಕಾಣುವ ಕಾಡು ಗೊಲ್ಲರು ವಿಭಿನ್ನ ವಿಶಿಷ್ಟ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಈಗಾಗಲೇ ಮುಖ್ಯವಾಹಿನಿಯಿಂದ ದೂರ ಉಳಿದ ಕಾಡು ಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಮೀಸಲಾತಿ ಸೌಲಭ್ಯ ಕೂಡಾ ಸಿಕ್ಕಿಲ್ಲ. ಎಸ್ಟಿ ಪಟ್ಟಿಗೆ ಸೇರಿಸಲು ಬಿಡದ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಮಾತಿಗೆ ಗಮನ ಕೊಡದೆ ಜಾತಿ ಗಣತಿ ವೇಳೆ ಕಾಡು ಗೊಲ್ಲ ಎಂದೇ ನಮೂದಿಸಿ ಎಂದು ತಿಳಿಸಿದರು.

ಜಾತಿಗಣತಿ ಜಾಗೃತಿ ಜಿಲ್ಲಾ ಉಸ್ತುವಾರಿ ದೊಡ್ಡೇಗೌಡ ಮಾತನಾಡಿ ಕಾಡು ಗೊಲ್ಲರ ಅಸ್ತಿತ್ವ ಬಗ್ಗೆ ದನಿಯಾದ ರಾಜ್ಯ ಕಾಡು ಗೊಲ್ಲರ ಸಂಘ ಈಗ ಗಣತಿಯ ಜಾಗೃತಿಗೂ ಮುಂದಾಗಿದೆ. ಇದೇ ತಿಂಗಳ 22 ರಿಂದ ಸರ್ಕಾರ ನಡೆಸಿರುವ ಜಾತಿ ಗಣತಿಯಲ್ಲಿ ಜಾತಿ ಕಾಡುಗೊಲ್ಲ, ಉಪಜಾತಿ ಮತ್ತು ಪರ್ಯಾಯ ಜಾತಿ ಕೂಡಾ ಕಾಡು ಗೊಲ್ಲ ಎಂದು ಬರೆಸಿ ಧರ್ಮ ಕಾಲಂ ನಲ್ಲಿ ಬುಡಕಟ್ಟು ಎಂದು ನಮೂದಿಸಲು ಮನವಿ ಮಾಡಿದ ಅವರು ಜಿಲ್ಲೆಯಿಂದ ತಾಲ್ಲೂಕಿನ ಸಂಘ ಜಾಗೃತಿ ಮೂಡಿಸಲು ಸಿದ್ಧವಿದೆ. ಹೋಬಳಿಯಲ್ಲಿ ಸಮಿತಿ ರಚಿಸಿ ಪ್ರತಿ ಹಟ್ಟಿಯಿಂದ ಇಬ್ಬರು ಯುವಕರನ್ನು ನೇಮಿಸಿ ಜಾಗೃತಿ ಕೆಲಸ ಮಾಡಲಾಗುತ್ತಿದೆ ಎಂದರು.

ಮುಖಂಡ ಕಂಬೇರಹಟ್ಟಿ ನಾಗರಾಜು ಮಾತನಾಡಿ ಕಾಡು ಗೊಲ್ಲರ ಮುಂದಿನ ಪೀಳಿಗೆಗೆ ಶಿಕ್ಷಣ ಜೊತೆ ಎಲ್ಲಾ ಸವಲತ್ತು ಒದಗಿಸಲು ಪರಿಶಿಷ್ಟ ಪಂಗಡಕ್ಕೆ ಸೇರುವುದು ನಮ್ಮ ಹಕ್ಕಾಗಿದೆ. ಎಸ್ಟಿ ಪಟ್ಟಿಗೆ ಸೇರಿಸಲು ನಡೆದ ಹೋರಾಟ ತಾರ್ಕಿಕ ಅಂತ್ಯ ಕಾಣಲು ಜಾತಿ ಗಣತಿಯಲ್ಲಿ ಕಾಡು ಗೊಲ್ಲ ಎಂದೇ ನಮೂದಿಸಬೇಕಿದೆ. ಈ ಹಿನ್ನಲೆ ತಾಲ್ಲೂಕಿನ ಪ್ರತಿ ಕಾಡು ಗೊಲ್ಲರ ಹಟ್ಟಿಗೆ ಕರಪತ್ರ ಹಂಚಿ ಪ್ರತಿ ಮನೆಗೂ ತಿಳಿಸಿ ಕಾಡು ಗೊಲ್ಲ ಹೆಸರು ಬರೆಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯೆ ಯಶೋಧಮ್ಮ ಮುಖಂಡರಾದ ಶಿವಣ್ಣ, ಶಿರಾ ಈಶ್ವರಪ್ಪ, ಚಿಕ್ಕನಾಯಕನಹಳ್ಳಿ ಬಸವರಾಜು, ತಿಪಟೂರು ಬಾಲರಾಜು, ತುರುವೇಕೆರೆ ಬಸವರಾಜು, ರವೀಶ್, ನಾಗರಾಜು, ರವೀಶ್, ಅಯ್ಯಣ್ಣ, ಮಂಜುನಾಥ್, ನಿಂಗರಾಜು, ಮಹಾಲಿಂಗಯ್ಯ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...