ಗುಬ್ಬಿ | ನೂತನ ಧ್ವಜಕಟ್ಟೆ ನಿರ್ಮಿಸಿದ ತಹಶೀಲ್ದಾರ್ ಗೆ ನಾಗರಿಕರ ಸನ್ಮಾನ

Date:

ಸ್ವಾಂತಂತ್ರ್ಯ ದಿನಾಚರಣೆ ಮುನ್ನ ನಡೆದ ಪೂರ್ವಭಾವಿ ಸಭೆಯಲ್ಲಿ ನೂತನ ಧ್ವಜಕಟ್ಟೆ ನಿರ್ಮಾಣಕ್ಕೆ ನಾಗರೀಕರ ಆಗ್ರಹ ಬಂದ ಹಿನ್ನಲೆ ಕೂಡಲೇ ಸಮ್ಮತಿಸಿದ ತಹಶೀಲ್ದಾರ್ ವೈಯಕ್ತಿಕವಾಗಿ ತಾವೇ ನಿರ್ಮಿಸಿಕೊಡುವುದಾಗಿ ತಿಳಿಸಿ ಹತ್ತು ದಿನದಲ್ಲಿ ಸುಂದರ ಧ್ವಜಕಟ್ಟೆ ನಿರ್ಮಿಸಿಕೊಟ್ಟ ಹಿನ್ನಲೆ ಕೃತಜ್ಞತೆ ಸಲ್ಲಿಸಿದ ಗುಬ್ಬಿ ಜನತೆ ನಾಗರೀಕ ಸನ್ಮಾನ ನೆರವೇರಿಸಿದರು

79 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಂತರ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಪಟ್ಟಣದ ನಾಗರೀಕರು ತಾಲ್ಲೂಕು ದಂಡಾಧಿಕಾರಿ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾದ ಆರತಿ.ಬಿ ಅವರಿಗೆ ಸನ್ಮಾನ ನೆರವೇರಿಸಿದರು. ಆರು ದಶಕದ ಧ್ವಜಕಟ್ಟೆ ಬದಲಾಗಿ ಆಧುನಿಕ ಸ್ಪರ್ಶದ ಸ್ಟೀಲ್ ಧ್ವಜ ಸ್ತಂಭ ಸುಂದರವಾಗಿ ಗ್ರಾನೆಟ್ ಕಟ್ಟೆ ನಿರ್ಮಿಸಿ ಜೂನಿಯರ್ ಕಾಲೇಜು ಮೈದಾನಕ್ಕೆ ಅತ್ಯಕರ್ಶಕವಾಗಿ ಜನರನ್ನು ಸೆಳೆದಿದೆ. ಈ ಕಾರಣ ತಹಶೀಲ್ದಾರ್ ಆರತಿ.ಬಿ ಮೇಡಂ ಅವರಿಗೆ ಗುಬ್ಬಿ ಜನರ ಪರವಾಗಿ ನಾಗರೀಕ ಸನ್ಮಾನ ನೆರವೇರಿಸಿದ್ದೇವೆ ಎಂದು ಶ್ರೀ ಚನ್ನಬಸವೇಶ್ವರ ಯುವಕ ಸಂಘದ ಸಂಸ್ಥಾಪಕ ಕಾರ್ಯದರ್ಶಿ ಸಿ.ಆರ್.ಶಂಕರ್ ಕುಮಾರ್ ತಿಳಿಸಿದರು.

ಈ ಸಂದರ್ಭದಲ್ಲಿ ಪಪಂ ಸದಸ್ಯ ಜಿ.ಸಿ.ಕೃಷ್ಣಮೂರ್ತಿ, ಗುಬ್ಬಿ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷ ಎಚ್.ಡಿ.ಯಲ್ಲಪ್ಪ, ಸಲೀಂಪಾಷ, ಜಿ.ಆರ್.ರಮೇಶ್, ಗೋಪಾಲ್ ಅರಸ್, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಕಾಂತರಾಜ್ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...