ಗುಬ್ಬಿ | ಮಾರಕ ಎನಿಸಿದ ರಸ್ತೆಬದಿಯ ಜಂಗಲ್ : ಮಾರ್ಗವನ್ನೇ ಆವರಿಸಿದ ಗಿಡಬಳ್ಳಿ ತೆರವಿಗೆ ಆಗ್ರಹ

Date:

ಗುಬ್ಬಿ ತಾಲ್ಲೂಕಿನ ಬಹುತೇಕ ಗ್ರಾಮೀಣ ರಸ್ತೆಯಲ್ಲಿ ಬೆಳೆದು ನಿಂತ ಜಂಗಲ್ ಬೈಕ್ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಆತಂಕ ಮೂಡಿಸಿದೆ. ಏಕಕಾಲದಲ್ಲಿ ಎರಡು ವಾಹನ ಸಂಚಾರ ಕಷ್ಟವಾದ ಈ ಜಂಗಲ್ ಮಳೆಗಾಲದಲ್ಲಿ ಆರೇಳು ಅಡಿಗಳ ಎತ್ತರದ ಬೆಳೆದು ರಸ್ತೆಯ ಅಂಚಿನ ಎರಡು ಅಡಿ ಕಬಳಿಸಿದೆ. ಈ ಜಂಗಲ್ ತೆರವು ಕೂಡಲೇ ಮಾಡದಿದ್ದರೆ ಆಗುವ ಅಪಘಾತ, ಜೀವ ಹಾನಿಗೆ ಲೋಕೋಪಯೋಗಿ ಇಲಾಖೆ ಜವಾಬ್ದಾರಿ ಹೊರಬೇಕಿದೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

ಗ್ರಾಮೀಣ ರಸ್ತೆಯಲ್ಲಿ ಬೆಳೆದ ಗಿಡಮರಗಳ ನಡುವೆ ರೈತರು ತಮ್ಮ ಜಾನುವಾರು ಕಟ್ಟುತ್ತಿದ್ದು ವಾಹನ ಸವಾರರಿಗೆ ಕಣ್ಣಿಗೆ ಕಾಣದ ದನಕರುಗಳು ವಾಹನ ಶಬ್ದಕ್ಕೆ ಏಕಾಏಕಿ ರಸ್ತೆಗೆ ಬಂದು ವಾಹನ ಅಪಘಾತಕ್ಕೀಡಾಗಿದೆ. ಬೈಕ್ ಸವಾರರು ಬಿದ್ದು ಮೂಳೆ ಮುರಿದುಕೊಂಡ ನಿದರ್ಶನ ಸಾಕಷ್ಟಿದೆ. ಕೆಲ ಗ್ರಾಮದಲ್ಲಿ ರಸ್ತೆ ಬದಿ ಮುಂಜಾನೆ ಮತ್ತು ಸಂಜೆ ವೇಳೆ ವಾಯುವಿಹಾರ ಮಾಡುವ ಸಾಕಷ್ಟು ಮಂದಿಗೆ ಜಂಗಲ್ ಕಿರಿಕಿರಿ ಉಂಟು ಮಾಡಿದೆ. ವಾಹನಗಳು ಬಂದರೆ ಪಾದಚಾರಿಗೆ ರಸ್ತೆಯೇ ಇಲ್ಲ. ಎಲ್ಲವೂ ಗಿಡ ಬಳ್ಳಿಗಳೇ ಆವರಿಸಿಕೊಂಡಿದೆ. ಈ ನಿತ್ಯ ಸಂಕಟವನ್ನು ಸ್ಥಳೀಯ ಗ್ರಾಮಸ್ಥರು ಹೇಳುತ್ತಾರೆ.

WhatsApp Image 2024 09 19 at 15.15.19 f20c80f2 1

ಹೆಬ್ಬೂರು ರಸ್ತೆ, ಕಕ್ಕೇನಹಳ್ಳಿ ರಸ್ತೆ, ಸಿ.ಎಸ್.ಪುರ ರಸ್ತೆ, ಸೇರಿದಂತೆ ಚೇಳೂರು, ಹಾಗಲವಾಡಿ ಹೋಬಳಿಯ ಗ್ರಾಮೀಣ ರಸ್ತೆಗಳ ಜಂಗಲ್ ತೆರವು ಕಾರ್ಯಾಚರಣೆ ತುರ್ತು ನಡೆಯಬೇಕಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿದಾಗ ಒಂದು ತಿಂಗಳಲ್ಲಿ ಕೆಲಸ ಮಾಡುವ ಮಾತುಗಳಾಡಿದರು. ಆದರೆ ತಿಂಗಳಾದರೂ ಕೆಲಸ ಮಾಡುವ ಲಕ್ಷಣವೇ ಕಾಣುತ್ತಿಲ್ಲ ಎಂದು ದೂರಿದ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್ ರಸ್ತೆಯ ಪಕ್ಕ ಜಂಗಲ್ ತೆರವಿಗೆ ಸ್ಥಳೀಯ ಗ್ರಾಮ ಪಂಚಾಯಿತಿ ಕೂಡಾ ಜವಾಬ್ದಾರಿ ವಹಿಸಬೇಕಿದೆ. ನಮ್ಮಿಂದ ಪಡೆಯುವ ತೆರಿಗೆ ಹಣದಲ್ಲಿ ಸಾರ್ವಜನಿಕ ಹಿತಾಸಕ್ತಿ ಹಿನ್ನಲೆ ಜಂಗಲ್ ತೆರವು ಮಾಡಬೇಕು. ಗ್ರಾಮಠಾಣಾ ವ್ಯಾಪ್ತಿಯಲ್ಲಿ ಇಂದಿಗೂ ಜಂಗಲ್ ತೆಗೆಯದ ಹಿನ್ನಲೆ ಸೊಳ್ಳೆಗಳ ಕಾಟ ಉಪಟಳವಾಗಿದೆ. ಮಾರಕ ರೋಗಕ್ಕೆ ಈ ಜಂಗಲ್ ಕೂಡಾ ನೇರ ಕಾರಣವಾಗಿದೆ ಎಂದು ಆರೋಪಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...


ಮಳೆಗಾಲದಲ್ಲಿ ರಸ್ತೆ ಬದಿ ಜಂಗಲ್ ಬೆಳೆದಿದೆ. ಪ್ರತಿ ವರ್ಷದಂತೆ ಮಳೆಗಾಲದ ಎರಡು ತಿಂಗಳ ಸಮಯದಲ್ಲಿ ಜಂಗಲ್ ತೆರವು ಮಾಡುತ್ತೇವೆ. ಅದೇ ರೀತಿ ಸರ್ಕಾರ ಅನುದಾನ ನೀಡಿದ್ದು ಗುತ್ತಿಗೆ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಹದಿನೈದು ದಿನದಲ್ಲಿ ಜಂಗಲ್ ತೆರವು ತಾಲ್ಲೂಕಿನ ರಸ್ತೆಗಳಲ್ಲಿ ನಡೆಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಎಇಇ ಯೋಗೀಶ್ ಹೇಳಿದರು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...