ಗುಬ್ಬಿ | ಹೇಮಾವತಿ ಹೋರಾಟಕ್ಕೆ ಸಂಸದ ವಿ.ಸೋಮಣ್ಣ ಆಗಮಿಸುವಂತೆ ರೈತರಿಂದ ಒಕ್ಕೊರಲಿನ ಒತ್ತಾಯ

Date:

ತುಮಕೂರು ಜಿಲ್ಲೆಯ ರೈತರಿಗೆ ಬದುಕು ಕಟ್ಟಿಕೊಟ್ಟ ಹೇಮಾವತಿ ನೀರು ಮತ್ತೊಂದು ಜಿಲ್ಲೆಗೆ ಹರಿಸಿಕೊಳ್ಳಲು ಸಿದ್ಧವಾದ ಅವೈಜ್ಞಾನಿಕ ಪೈಪ್ ಲೈನ್ ಕಾಮಗಾರಿ ವಿರೋಧದ ನಡುವೆ ಅಧಿಕಾರ ಬಳಸಿ ನಡೆಸುತ್ತಿರುವುದನ್ನು ವಿರೋಧಿಸಿ ಇದೇ ತಿಂಗಳ 31 ರಂದು ನಡೆಯುವ ಸಾವಿರಾರು ರೈತರ ಬೃಹತ್ ಪ್ರತಿಭಟನೆಯಲ್ಲಿ ಸಂಸದ ವಿ.ಸೋಮಣ್ಣ ಆಗಮಿಸಿ ಕಾಮಗಾರಿ ಸ್ಥಗಿತಗೊಳಿಸಲು ಮುಂದಾಗಬೇಕು ಎಂದು ರೈತರು ಒಕ್ಕೊರಲಿನ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ವಿರೋಧ ಸಮಿತಿ ನಡೆಸಿದ ಪ್ರತಿಭಟನಾ ಪೂರ್ವಭಾವಿ ಸಭೆಯಲ್ಲಿ ರೈತ ಸಂಘ ಹಾಗೂ ಹಲವು ರಾಜಕೀಯ ಮುಖಂಡರ ಮುಂದೆ ನಡೆದ ಚರ್ಚೆಯಲ್ಲಿ ನಮ್ಮ ಪರ ಸಂಸದರು ನಿಲ್ಲಲೇಬೇಕು. ಹಾಗಾಗಿ ಈ ಹೋರಾಟದಲ್ಲಿ ಪಾಲ್ಗೊಂಡು ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಲಿ ಎಂದು ಮನವಿ ಮಾಡಿದರು.

ಸಭೆಯನ್ನುದ್ದೇಶಿಸಿ ಬಿಜೆಪಿ ಮುಖಂಡ ದಿಲೀಪ್ ಕುಮಾರ್ ಮಾತನಾಡಿ ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯಿತಿ ಪ್ರವಾಸ ಕೈಗೊಂಡು ಮನೆಯಿಂದ ಒಬ್ಬರಂತೆ ರೈತರು ಹೋರಾಟಕ್ಕೆ ಬರುವಂತೆ ಮನವಿ ಮಾಡಲಾಗುತ್ತಿದೆ. ಹೋಬಳಿ ಮಟ್ಟದ ಮುಖಂಡರನ್ನು ಒಗ್ಗೂಡಿಸಿ ಪಂಚಾಯಿತಿ ಪ್ರವಾಸ ಎರಡು ದಿನದಲ್ಲಿ ನಡೆಸುತ್ತೇವೆ. ರೈತರು ಉದಾಸೀನತೆ ತೋರಬೇಡಿ. ಅಲ್ಲಲ್ಲೇ ನಿಂತು ನೆಗೆಟಿವ್ ಮಾತುಗಳನ್ನಾಡಬೇಡಿ. ಹೋರಾಟವನ್ನು ಎಬಿಸಿ ಎಂದು ಮೂರು ಭಾಗದಲ್ಲಿ ನಡೆಸಬೇಕಿದೆ. ಇಲ್ಲಿ ಎಲ್ಲರೂ ಮುಖಂಡರೇ ಆಗಬೇಕು. ಸಾವಿರಾರು ರೈತರನ್ನೂ ಅರೆಸ್ಟ್ ಮಾಡಲಿ. ಮಠಾಧೀಶರು, ಶಾಸಕರು ಬರಲಿದ್ದಾರೆ. ಮುಖಂಡರ ಗೃಹ ಬಂಧನ ಮಾಡುವ ಪ್ರಯತ್ನ ನಡೆದರೆ ಉಳಿದ ರೈತರು ತಾಲ್ಲೂಕಿನ ಹೆದ್ದಾರಿಯನ್ನು ಎಲ್ಲೆಂದರಲ್ಲಿ ಬಂದ್ ಮಾಡಿ ಬಿಸಿ ಮುಟ್ಟಿಸಬೇಕು ಎಂದು ಕರೆ ನೀಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಮಾತನಾಡಿ ಚುನಾವಣೆ ಬಂದಾಗ ಪಕ್ಷ ಚಟುವಟಿಕೆ ಸಾಮಾನ್ಯವಾಗಿ ನಡೆಯುತ್ತದೆ. ಆದರೆ ಈ ಹೋರಾಟ ಹೇಮಾವತಿ ನೀರಿಗಾಗಿ ನಡೆಸಬೇಕಿದೆ. ನಮ್ಮ ಬದುಕು ಉಳಿವಿನ ಪ್ರಶ್ನೆಯಾಗಿದೆ. ಇಲ್ಲಿ ಪಕ್ಷಾತೀತ, ಜಾತ್ಯತೀತ ನಿಲುವು ಕಾಣುತ್ತಿದೆ. ವೈ.ಕೆ.ರಾಮಯ್ಯ ಅವರ ಹೋರಾಟದ ಮಾದರಿಯಲ್ಲಿ ಸಾವಿರಾರು ರೈತರು ನಮ್ಮ ನೀರಿನ ಹಕ್ಕು ಪ್ರತಿಪಾದಿಸಬೇಕು. ಪೊಲೀಸರ ಬಗ್ಗೆ ಭಯ ಬೇಕಿಲ್ಲ. ಅರೆಸ್ಟ್, ಕೇಸ್ ಏನೇ ಎದುರಾದರೂ ನಿಮ್ಮೊಂದಿಗೆ ನಾವು ಇರುತ್ತೇವೆ ಎಂದು ಧೈರ್ಯ ತುಂಬಿದ ಅವರು ತೋಟ ಜಮೀನು ಅಳತೆಯಲ್ಲಿ ಒಂದಿಂಚು ಬಿಡದ ರೈತರು ನಮ್ಮ ನೀರು ಬೇರೆಯವರು ಕಿತ್ತುಕೊಂಡರೆ ಸುಮ್ಮನೆ ಇರಬೇಕಿದೆಯೇ, ಹಾಗಾಗಿ ರೈತರು ಒಗ್ಗೂಡಿ ಹೋರಾಟಕ್ಕೆ ಪ್ರತಿ ಪಂಚಾಯಿತಿಯಿಂದ ಒಂದು ಸಾವಿರದಂತೆ ಸಂಖ್ಯೆಯಲ್ಲಿ ಆಗಮಿಸಲು ಮನವಿ ಮಾಡಿದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್. ವೆಂಕಟೇಗೌಡ ಮಾತನಾಡಿ ಇನ್ನೆರಡು ದಿನದಲ್ಲಿ ರೈತರು ತಮ್ಮ ಊರಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಬೇಕು. ಸರ್ಕಾರ ಏನಾದರೂ ಮಾಡಲಿ. ನಮ್ಮ ನೀರು ನಾವು ಉಳಿಸಿಕೊಳ್ಳಬೇಕು. ಅರೆಸ್ಟ್ ಮಾಡಿದರೆ ಮಾಡಲಿ. ಒಟ್ಟಾಗಿ ಸಾವಿರಾರು ರೈತರನ್ನು ಎಲ್ಲಿ ತುಂಬುತ್ತಾರೆ ಎಂಬುದು ನೋಡೋಣ. ಮಂಡ್ಯ ಜಿಲ್ಲೆಯ ಮಾದರಿಯಲ್ಲಿ ಹೋರಾಟ ಮಾಡೋಣ. ಹೆಣ್ಣು ಮಕ್ಕಳು ಹಾಗೂ ವಿದ್ಯಾರ್ಥಿಗಳು ರಸ್ತೆಗಿಳಿದು ಪ್ರತಿಭಟನೆ ಮಾಡಬೇಕಿದೆ. ಈ ಹೋರಾಟಕ್ಕೆ ಸಂಸದರು ಅತೀ ಬುದ್ಧಿವಂತಿಕೆ ತೋರದೆ ರೈತರೊಂದಿಗೆ ಕುಳಿತು ಹೋರಾಟ ನಡೆಸಬೇಕು ಎಂದು ಆಗ್ರಹಿಸಿದರು.

ಜೆಡಿಎಸ್ ಮುಖಂಡ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ ಜಿಲ್ಲೆಗೆ ಮರಣ ಶಾಸನವಾದ ಈ ಲಿಂಕ್ ಕೆನಾಲ್ ಕಾಮಗಾರಿ ಅವೈಜ್ಞಾನಿಕ ಹಾಗೂ ಅಕ್ರಮವಾಗಿದೆ. ಬೇರೆ ಜಿಲ್ಲೆಗೆ ನೀರು ಹರಿದರೆ ಅತೀ ಹೆಚ್ಚು ನಷ್ಟ ಗುಬ್ಬಿ ತಾಲ್ಲೂಕು ರೈತರಿಗೆ ಆಗಲಿದೆ. ಮುಖ್ಯನಾಲೆಯಿಂದ ನೀರು ಹರಿಸುವುದು ಕಾನೂನು ಬಾಹಿರ. ತಾಂತ್ರಿಕ ಸಮಸ್ಯೆಯಿಂದ ಕೂಡಿದ ಪೈಪ್ ಲೈನ್ ಕಾಮಗಾರಿಗೆ ಅಧಿಕಾರಿಗಳ ರಕ್ಷಣೆ ಸಿಕ್ಕಿರುವುದು ರೈತ ವಿರೋಧಿ ನೀತಿ ಆಗಿದೆ. ಕುಣಿಗಲ್ ತಾಲ್ಲೂಕು ಉಳಿಸಲು ಉಳಿದ ಏಳು ತಾಲ್ಲೂಕು ಬರಡು ಮಾಡುವ ಈ ಯೋಜನೆ ಕೈ ಬಿಡಬೇಕು. ಮುಂದಿನ ದಿನದಲ್ಲಿ ಕೃಷಿ ತೊರೆಯುವ ಕಾಲ ಬರುವ ಮುನ್ನ ರೈತರು ಎಚ್ಚೆತ್ತು ಹೋರಾಟಕ್ಕೆ ತಂಡೋಪತಂಡವಾಗಿ ಆಗಮಿಸಬೇಕು ಎಂದು ಕರೆ ನೀಡಿದರು.

ಬಿಜೆಪಿ ಮುಖಂಡ ಎಚ್.ಟಿ.ಭೈರಪ್ಪ ಮಾತನಾಡಿ ಜಿಲ್ಲೆಗೆ ಹೇಮಾವತಿ ನೀರು ತರಲು ವೈ.ಕೆ.ರಾಮಯ್ಯ ಅವರ ನೇತೃತ್ವದ ಹೋರಾಟ ತಿಂಗಳುಗಟ್ಟಲೆ ನಡೆದಿತ್ತು. ಅಂತಹ ಹೋರಾಟ ಮತ್ತೊಮ್ಮೆ ನಡೆಸಬೇಕಿದೆ. ಕಾಂಗ್ರೆಸ್ ಇಡೀ ಜಿಲ್ಲೆಯ ನೀರನ್ನು ಕಸಿಯುತ್ತಿದೆ. ಜಿಲ್ಲೆಯ ಇಬ್ಬರು ಸಚಿವರು ವಿರೋಧಿಸಬೇಕಿದೆ. ಚುನಾಯಿತ ಪ್ರತಿನಿಧಿಗಳು ಸಹ ಪಕ್ಷ ಬೇದ ಬಿಟ್ಟು ಹೋರಾಟಕ್ಕೆ ಬಂದು ನಮ್ಮ ರೈತರನ್ನು ಉಳಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಜಿ.ಎನ್. ಬೆಟ್ಟಸ್ವಾಮಿ, ಹೊನ್ನಗಿರಿಗೌಡ, ಯೋಗಾನಂದಕುಮಾರ್, ಅ.ನ.ಲಿಂಗಪ್ಪ, ಸಾಗರನಹಳ್ಳಿ ವಿಜಯಕುಮಾರ್, ಜಿ.ಆರ್.ಶಿವಕುಮಾರ್, ಬಿ.ಎಸ್.ಪಂಚಾಕ್ಷರಿ, ಸಿ.ಆರ್.ಶಂಕರಕುಮಾರ್, ಜಿ.ಡಿ.ಸುರೇಶಗೌಡ, ಕಾಡಶೆಟ್ಟಿಹಳ್ಳಿ ಸತೀಶ್, ರೈತಸಂಘದ ಶಿವಕುಮಾರ್, ಸಿ.ಜಿ.ಲೋಕೇಶ್, ಅಜ್ಜಪ್ಪ, ಬ್ಯಾಟರಂಗೇಗೌಡ, ಪಾರ್ಥಸಾರಥಿ, ಎನ್.ಬಿ.ರಾಜಶೇಖರ್, ಎಪಿಕೆ ರಾಜು ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...