ಗುಬ್ಬಿ | ದಲಿತರಿಗೆ ಕ್ಷೌರ ಮಾಡುವುದಿಲ್ಲವೆಂಬ ಅಸ್ಪೃಶ್ಯತೆ ಆಚರಣೆ; ತೆರೆ ಎಳೆದ ಗುಬ್ಬಿ ತಹಶೀಲ್ದಾರ್

Date:

ದಲಿತರಿಗೆ ಕ್ಷೌರ ಮಾಡುವುದಿಲ್ಲವೆಂಬ ವಿಚಾರ ಪೊಲೀಸರು ಮತ್ತು ದಲಿತರ ಕುಂದು ಕೊರತೆಗಳ ಸಭೆಯಲ್ಲಿ ಚರ್ಚೆಯಾದ ಹಿನ್ನಲೆಯಲ್ಲಿ ತಹಶೀಲ್ದಾರ್ ಬಿ ಆರತಿ ಹಾಗೂ ಸಿಪಿಐ ಗೋಪಿನಾಥ್ ಸ್ಥಳಕ್ಕೆ ಧಾವಿಸಿ ಕ್ಷೌರಿಕರಿಗೆ ಬುದ್ಧಿ ಹೇಳಿ ಕೂಡಲೇ ಅಸ್ಪೃಶ್ಯತೆಯ ಮೌಢ್ಯವನ್ನು ಅಳಿಸಿದ್ದು, ದಲಿತರಿಗೆ ಕ್ಷೌರ ಮಾಡಿಸಿದ ಘಟನೆ ತಾಲೂಕಿನ ಕಸಬ ಹೋಬಳಿ ಅಮ್ಮನಘಟ್ಟ ಗ್ರಾಮದಲ್ಲಿ ನಡೆದಿದೆ.

ಅಮ್ಮನಘಟ್ಟ ಗ್ರಾಮದಲ್ಲಿ ಕ್ಷೌರಿಕನೊಬ್ಬ ನಮ್ಮ ಪೂರ್ವಜರು ದಲಿತರಿಗೆ ಕಟ್ಟಿಂಗ್ ಹಾಗೂ ಶೇವಿಂಗ್ ಮಾಡುತ್ತಿರಲಿಲ್ಲ. ಅದೇ ಪದ್ಧತಿ ಮುಂದುವರೆಸಿದ್ದ ಹಿನ್ನಲೆ ಈ ಬಗ್ಗೆ ದಲಿತರ ಸಭೆಯಲ್ಲಿ ಮುಖಂಡರು ಖಂಡಿಸಿ ಚರ್ಚಿಸಿದ್ದರು. ಎಷ್ಟು ಬಾರಿ ಹೇಳಿದ್ದರೂ ಹಟಕ್ಕೆ ಬಿದ್ದಂತೆ ದಲಿತರನ್ನು ಅಂಗಡಿಗೆ ಬಾರದಂತೆ ಮಾಡಿದ್ದ ಹಿನ್ನಲೆ ಸಭೆಯ ವಿಚಾರ ಗಂಭೀರ ಸ್ವರೂಪ ಪಡೆದು ತಹಶೀಲ್ದಾರ್ ಹಾಗೂ ಸಿಪಿಐ ಸ್ಥಳಕ್ಕೆ ಭೇಟಿ ನೀಡಿ ಬುದ್ಧಿವಾದ ಹೇಳಿ ಕಾನೂನು ಬಗ್ಗೆ ಅರಿವು ಮೂಡಿಸಿ ತಕ್ಷಣ ದಲಿತರಿಗೆ ಶೇವಿಂಗ್ ಮಾಡುವಂತೆ ಹೇಳಿ ಸ್ಥಳದಲ್ಲೇ ಎಲ್ಲಾ ಮೌಢ್ಯತೆಗೆ ತೆರೆ ಎಳೆದರು.

ಶಿರಾದಲ್ಲಿ ನಡೆದ ಡಿವೈಎಸ್ಪಿ ದಲಿತರ ಕುಂದು ಕೊರತೆ ಸಭೆಯಲ್ಲಿ ಈ ವಿಚಾರ
ಪ್ರಸ್ತಾಪವಾದ ಹಿನ್ನಲೆ ತಹಶೀಲ್ದಾರ್ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿದೆ. ತಂಡದಲ್ಲಿ ಕಂದಾಯ ನಿರೀಕ್ಷಕ ಕುಮಾರ್, ಪಿಎಸ್ಐ ಸುನೀಲ್ ಕುಮಾರ್ ಸೇರಿದಂತೆ ಗ್ರಾಮ ಲೆಕ್ಕಿಗರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...