ಗುಬ್ಬಿ | ರಸ್ತೆ ಬದಿಯಲ್ಲಿ ಬಲಿಗಾಗಿ ಕಾದು ನಿಂತ ಬೃಹತ್ ಒಣ ಮರಗಳು : ತೆರವುಗೊಳಿಸದ ಬಗ್ಗೆ ರೈತ ಸಂಘ ಆಕ್ರೋಶ

Date:

ಗುಬ್ಬಿ ತಾಲ್ಲೂಕಿನ ಹಲವು ಪ್ರಮುಖ ರಸ್ತೆಯ ಬದಿಯಲ್ಲಿ ಒಣಗಿ ನಿಂತ ಮರಗಳು ಜೀವ ಬಲಿಗೆ ಕಾದಿವೆ. ಒಣ ಮರಗಳು, ಒಣಗಿದ ಕೊಂಬೆಗಳು ತೆರವು ಮಾಡದಿದ್ದಲ್ಲಿ ಅಮಾಯಕರ ಪ್ರಾಣ ಹಾನಿ ಖಂಡಿತ. ಕೂಡಲೇ ರಸ್ತೆಯ ಎರಡೂ ಬದಿಯಲ್ಲಿ ಒಣಗಿದ ಮರಗಳನ್ನು ತೆರವು ಮಾಡಬೇಕು ಎಂದು ರೈತ ಸಂಘ ಒತ್ತಾಯ ಮಾಡಿದೆ.

ನಿಟ್ಟೂರು ಕಡಬ ಮಾರ್ಗವಾಗಿ ಕಲ್ಲೂರು ಕ್ರಾಸ್ ಮಾರ್ಗ, ಚೇಳೂರು ಹೊಸಕೆರೆ ಮಾರ್ಗ, ನಿಟ್ಟೂರು ಚೇಳೂರು ಮಾರ್ಗ, ಸಿ.ಎಸ್.ಪುರ ಮಾರ್ಗ ಹೀಗೆ ಎಲ್ಲಾ ಪ್ರಮುಖ ರಸ್ತೆಗಳ ಬದಿಯಲ್ಲಿರುವ ನೂರಾರು ವರ್ಷದ ಮರಗಳು ಈಗಾಗಲೇ ಒಣಗಿ ನಿಂತಿವೆ. ರಸ್ತೆ ಬದಿಯಲ್ಲೇ ಸುಮಾರು ಹದಿನೈದು ಇಪ್ಪತ್ತು ಅಡಿ ಎತ್ತರದ ಒಣ ಮರಗಳು ಯಾವ ಕ್ಷಣದಲ್ಲಾದರೂ ರಸ್ತೆಗೆ ಬಿದ್ದು ವಾಹನ ಸವಾರರನ್ನು ಬಲಿ ಪಡೆಯುವುದು ಖಚಿತ. ಈ ವಿಚಾರ ಹಲವು ಬಾರಿ ಅರಣ್ಯ ಮತ್ತು ಲೋಕೋಪಯೋಗಿ ಇಲಾಖೆಗೆ ತಿಳಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್ ದೂರಿದರು.

WhatsApp Image 2024 09 22 at 16.06.22 44d176fe

ನಿಟ್ಟೂರು ಕಲ್ಲೂರು ಕ್ರಾಸ್ ರಸ್ತೆಯೊಂದರಲ್ಲೇ ಇಪ್ಪತ್ತು ಮರಗಳು ಸಂಪೂರ್ಣ ಒಣಗಿ ನಿಂತಿವೆ. ಸರಿ ಸುಮಾರು ಮೂವತ್ತು ನಲವತ್ತು ವರ್ಷ ವಯಸ್ಸಿನ ವಿವಿಧ ಕಾಡು ಜಾತಿಯ ಮರಗಳು ಒಣಗಿರುವ ಕಾರಣ ತೆರವು ಮಾಡಲು ಯಾವ ಕಸುಬುದಾರರು ಮುಂದಾಗಿಲ್ಲ. ಕೇವಲ ಸೌದೆಯಾಗಿ ಬಳಕೆಯಾಗುವ ಮರವನ್ನು ತೆರವು ಮಾಡಲು ಯಾರೋ ಬರುತ್ತಿಲ್ಲ ಎಂಬ ಕಾರಣವನ್ನು ನೆಪ ಮಾಡಿಕೊಂಡು ಅರಣ್ಯ ಇಲಾಖೆ ವಿಳಂಬ ಅನುಸರಿಸಿದೆ. ವಾಸ್ತವದಲ್ಲಿ ಜೋರು ಮಳೆ ಬಂದರೆ ಒಣ ಮರಗಳು ಧರೆಗುರುಳುವುದು ನಿಶ್ಚಿತ. ಉರುಳುವ ವೇಳೆ ಗ್ರಹಚಾರ ಯಾರ ಪ್ರಾಣಬಲಿ ಕಾದಿದೆಯೋ ತಿಳಿಯದು ಎಂದು ಸ್ಥಳೀಯರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
WhatsApp Image 2024 09 22 at 16.04.11 472621fd

ಸಾರ ಕಳೆದುಕೊಂಡು ಒಣಗಿದ ಮರಕ್ಕೆ ಸತ್ವ ಇಲ್ಲದ ಬೇರು ಇರುತ್ತದೆ. ಮಳೆಗಾಲದಲ್ಲಿ ಸಡಿಲವಾಗುವ ಮಣ್ಣು ಬೇರು ಸಹಿತ ಒಣ ಮರ ಬೀಳುತ್ತದೆ. ರಸ್ತೆಗೆ ಬಿದ್ದರೆ ಬಲಿ ಖಚಿತ. ಪಕ್ಕದ ವಿದ್ಯುತ್ ಕಂಬಗಳು, ವೈರ್ ಗಳ ಮೇಲೆ ಬಿದ್ದರೆ ಮತ್ತೊಂದು ತಲೆ ನೋವು ಕಟ್ಟಿಟ್ಟ ಬುತ್ತಿ. ಈ ಎಲ್ಲಾ ತೊಂದರೆ ವಿಸ್ತರಿಸಿ ಮೌಖಿಕವಾಗಿ ಮತ್ತು ಲಿಖಿತವಾಗಿ ದೂರು ನೀಡಿದರೂ ಕ್ರಮ ಕೈಗೊಳ್ಳುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಪ್ರಾಣ ಹಾನಿಯಾದಲ್ಲಿ ಅರಣ್ಯ ಹಾಗೂ ಲೋಕೋಪಯೋಗಿ ಇಲಾಖೆ ಹೊಣೆ ಹೊರಬೇಕು ಎಂದು ಆಗ್ರಹಿಸಿರುವ ರೈತ ಸಂಘ ಬೆಲೆ ಬಾಳುವ ಮರಗಳನ್ನು ಕ್ಷಣಾರ್ಧದಲ್ಲಿ ಕಡಿದುರುಳಿಸುವ ಮಂದಿ ಇರುವಾಗ್ಗೆ ಕೇವಲ ಸೌದೆಗೆ ಬರುವ ಮರಗಳನ್ನು ಕಡಿಯಲು ಜನವೇ ಬರುತ್ತಿಲ್ಲ ಎನ್ನುವ ಇಲಾಖೆ ಸಾರ್ವಜನಿಕ ಹಿತಾಸಕ್ತಿ ಮೇಲೆ ಕೂಡಲೇ ತಾಲ್ಲೂಕಿನ ಪ್ರಮುಖ ರಸ್ತೆಯಲ್ಲಿ ಒಣಗಿ ನಿಂತ ಮರಗಳನ್ನು ತೆರವು ಮಾಡಬೇಕು ಎಂದು ಆಗ್ರಹಿಸಿದರು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...