ಗುಬ್ಬಿ | ಸ್ಮರಣಸಂಚಿಕೆ ಲೇಖನಗಳಿಗೆ ಆಹ್ವಾನ

Date:

 2025 ಡಿಸೆಂಬರ್ ತಿಂಗಳ 20 ರಂದು ನಡೆಯುವ 6 ನೇ ತಾಲ್ಲೂಕು ಸಾಹಿತ್ಯ ಸಮ್ಮೇಳನವನ್ನು ದಾಖಲು ಪಡಿಸುವ ಸ್ಮರಣ ಸಂಚಿಕೆ ಸಿದ್ಧಪಡಿಸುವ ಹಿನ್ನಲೆ ತಾಲ್ಲೂಕಿನ ಲೇಖಕರಿಂದ ತಾಲ್ಲೂಕು ಇತಿಹಾಸಕ್ಕೆ ಸಂಬಂಧಿಸಿದಂತೆ ಉತ್ತಮ ಲೇಖನ ಹಾಗೂ ಸ್ವರಚಿತ ಕವನಗಳಿಗೆ ಆಹ್ವಾನ ನೀಡಲಾಗಿದೆ ಎಂದು ಸಮ್ಮೇಳನ ಸ್ಮರಣ ಸಂಚಿಕೆಯ ಸಂಪಾದಕ ಡಾ.ರಾಜೇಶ್ ಗುಬ್ಬಿ ತಿಳಿಸಿದ್ದಾರೆ.

ಪಟ್ಟಣದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದಲ್ಲೇ ಸ್ಮರಣ ಸಂಚಿಕೆ ಬಿಡುಗಡೆ ಮಾಡುವ ಹಿನ್ನಲೆ ಸಂಚಿಕೆ ಮುದ್ರಣ ಮಾಡಲು ಕಡಿಮೆ ಸಮಯ ಇರುವ ಕಾರಣ ನವಂಬರ್ 25 ರೊಳಗೆ 150 ರಿಂದ 200 ಪದಗಳ ಲೇಖನ ಹಾಗೂ ಸ್ವರಚಿತ ಕವನಗಳನ್ನು ಉತ್ತಮವಾಗಿ ರಚಿಸಿ ಜೊತೆಗೆ ಲೇಖನಕ್ಕೆ ತಕ್ಕನಾದ ಫೋಟೋಗಳು ಸಹ ಸಂಗ್ರಹಿಸಿ ಇ-ಮೇಲ್ ಮಾಡಲು ಮನವಿ ಮಾಡಿದ್ದಾರೆ.

ಗುಬ್ಬಿ ತಾಲ್ಲೂಕಿಗೆ ಸಂಬಂಧಿಸಿದ ಇತಿಹಾಸ, ಸಾಹಿತ್ಯ, ಕ್ರೀಡೆ, ಜನಪದ, ಸಾಧಕರ ಜೀವನ, ಪರಿಸರ, ಐತಿಹಾಸಿಕ ಸ್ಥಳ ಹೀಗೆ ಅನೇಕ ವಿಚಾರ ಹೊತ್ತ ಲೇಖನಗಳು ಸ್ಮರಣ ಸಂಚಿಕೆ ಸಮಿತಿಯ ಇ-ಮೇಲ್ ಐಡಿ umeshsinger1@gmail.com ಗೆ ತಲುಪಿಸಬೇಕಿದೆ. ಈ ಪೈಕಿ ಅತ್ಯುತ್ತಮ ಲೇಖನಗಳು ಸಂಚಿಕೆಯಲ್ಲಿ ಪ್ರಕಟ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...