ಗುಬ್ಬಿ | ಕಾಡುಗೊಲ್ಲರು ಶ್ರೀ ಕೃಷ್ಣನ ಆರಾಧಕರಲ್ಲ : ಬಿ.ದೊಡ್ಡಯ್ಯ

Date:

ವಿಶಿಷ್ಟ ಆಚರಣೆ ಸಂಸ್ಕೃತಿಯಲ್ಲಿ ಬುಡಕಟ್ಟು ಎಂದು ಗುರುತಿಸಿಕೊಂಡ ಕಾಡು ಗೊಲ್ಲರು ಶೈವ, ವೈಷ್ಣವ ಆರಾಧಕರಲ್ಲ. ನಮ್ಮ ಸಂಸ್ಕೃತಿಯಲ್ಲಿ ವೀರ ಪರಂಪರೆಯ ಬುಡಕಟ್ಟು ದೇವರ ಪೂಜೆ ಮಾತ್ರ ಮಾಡುತ್ತೇವೆ. ಶ್ರೀ ಕೃಷ್ಣ ಜಯಂತಿಗೂ ನಮಗೂ ಸಂಬಂಧವಿಲ್ಲ ಎಂದು ಜಿಲ್ಲಾ ಕಾಡುಗೊಲ್ಲ ಬುಡಕಟ್ಟು ಮಹಾಸಭಾ ಜಿಲ್ಲಾಧ್ಯಕ್ಷ ಬಿ.ದೊಡ್ಡಯ್ಯ ಸ್ಪಷ್ಟ ಪಡಿಸಿದರು.

ಗುಬ್ಬಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾಡುಗೊಲ್ಲ ಸಮಾಜ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಅಧ್ಯಯನ ನಡೆಸುವ ಸಂದರ್ಭದಲ್ಲಿ ಕಡಿಮೆ ಜನಸಂಖ್ಯೆಯ ನಮ್ಮನ್ನು ಹಿಂದೂ ದೇವರ ಆರಾಧಕರು ಎಂದು ಬಿಂಬಿಸಿ ಬುಡಕಟ್ಟು ಸವಲತ್ತು ವಂಚಿತರನ್ನಾಗಿ ಮಾಡಲು ದೊಡ್ಡ ಷಡ್ಯಂತ್ರ ಕೆಲವರು ನಡೆಸಿದ್ದಾರೆ ಎಂದು ನೇರ ಆರೋಪ ಮಾಡಿದರು.

ಕಾಡು ಗೊಲ್ಲ ಸಮಾಜದ ಜಿಲ್ಲಾ ಮುಖಂಡ ಡಿ.ಕೆ.ಗಂಗಾಧರ್ ಮಾತನಾಡಿ ಕೆಲವೊಂದು ಪ್ರದೇಶದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯನ್ನು ಕಾಡು ಗೊಲ್ಲ ಯುವಕರು ನಡೆಸುವಂತೆ ಪ್ರಚೋದನೆ ನಡೆದಿದೆ. ಶ್ರೀ ಕೃಷ್ಣ ಯಾದವ ಕ್ಷತ್ರಿಯ ಸಮಾಜ ಎಂಬುದು ಎಲ್ಲರಿಗೂ ತಿಳಿದಿದೆ. ಕಾಡು ಗೊಲ್ಲರಿಗೂ ಯಾದವ ಸಮಾಜಕ್ಕೂ ಯಾವ ಸಂಬಂಧವಿಲ್ಲ. ನಮ್ಮ ಆರಾಧನೆ ವೀರ ವ್ಯಕ್ತಿಗಳ ಪೂಜೆ ನಮ್ಮ ಸಂಪ್ರದಾಯ. ನಮ್ಮ ಜನಸಂಖ್ಯೆ ಕೇವಲ 8 ಲಕ್ಷ ಇದ್ದೇವೆ. ಆದರೆ ದೇಶದ ಯಾದವರ ಸಂಖ್ಯೆ 25 ಕೋಟಿಗೂ ಅಧಿಕವಿದೆ. ಕರ್ನಾಟಕದಲ್ಲಿ 12 ಜಿಲ್ಲೆ 40 ತಾಲ್ಲೂಕಿನಲ್ಲಿ ಮಾತ್ರ ನಾವಿದ್ದೇವೆ. ಆಂಧ್ರದಲ್ಲಿ 2 ಜಿಲ್ಲೆ 3 ತಾಲ್ಲೂಕಿನಲ್ಲಿ ಸ್ವಲ್ಪ ಜನ ಇದ್ದಾರೆ. ನಮ್ಮ ವಿಭಿನ್ನ ಸಂಸ್ಕೃತಿಯನ್ನು ಗುರುತಿಸಿ ಕೇಂದ್ರ ಎಸ್ಟಿಗೆ ಸೇರ್ಪಡೆ ಮಾಡಲು ಮುಂದಾಗುವ ವೇಳೆ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ನಮ್ಮಿಂದ ಮಾಡಿಸಿ ಹಿಂದೂ ದೇವರ ಆರಾಧಕರು ಎಂದು ಗುರುತಿಸಲಾಗುತ್ತಿದೆ. ಷಡ್ಯಂತ್ರ ನಡೆಸಿ ನಮ್ಮ ಹಕ್ಕು ಕಸಿಯಲು ನಡೆದ ಕುತಂತ್ರ ಬಯಲಿಗೆ ತರಬೇಕಿದೆ. ಈ ಹಿನ್ನಲೆ ಗುಬ್ಬಿಯಲ್ಲಿ ನಡೆಯುವ ಕೃಷ್ಣ ಜಯಂತಿ ಕಾರ್ಯಕ್ರಮಕ್ಕೆ ಕಾಡು ಗೊಲ್ಲ ಜನರು ಭಾಗವಹಿಸಬಾರದು ಎಂದು ಮನವಿ ಮಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕಾಡು ಗೊಲ್ಲ ಮುಖಂಡ ಕಂಬೇರಹಟ್ಟಿ ನಾಗರಾಜು ಮಾತನಾಡಿ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮ ಮುಂದಿನ ತಿಂಗಳು ಆಯೋಜನೆ ಮಾಡಿದ್ದಾರೆ. ಕಾಡು ಗೊಲ್ಲ ಜನಾಂಗಕ್ಕೂ ಈ ಕಾರ್ಯಕ್ರಮಕ್ಕೂ ಯಾವುದೇ ಸಂಬಂಧವಿಲ್ಲ. ನಾವು ಶ್ರೀ ಕೃಷ್ಣ ಆರಾಧಕರಲ್ಲ. ಶಿವ ವಿಷ್ಣು ಗಣೇಶ ಪೂಜೆ ನಾವು ಮಾಡುವುದಿಲ್ಲ. ಯಾವುದೇ ಕಾಡು ಗೊಲ್ಲರ ಹಟ್ಟಿಯಲ್ಲಿ ಈ ದೇವರ ಯಾವ ದೇವಾಲಯಗಳು ಇಲ್ಲ. ನಮ್ಮದು ಯತ್ತೆಪ್ಪ, ಜುಂಜಪ್ಪ, ಚಿಕ್ಕಣ್ಣಸ್ವಾಮಿ ಹೀಗೆ ಹಿರಿಯರ ಆರಾಧನೆ ಮಾಡುತ್ತೇವೆ. ನಮ್ಮದು ಬುಡಕಟ್ಟು ಸಂಸ್ಕೃತಿ. ಈ ಹಿನ್ನಲೆ ಮುಂದಿನ ತಿಂಗಳು ನಡೆಯುವ ಜಾತಿ ಗಣತಿ ಸಿಬ್ಬಂದಿಗಳು ಬಂದಾಗ ಕಾಡು ಗೊಲ್ಲ ಎಂದೇ ನಮೂದಿಸಿ ಎಂದು ಕರೆ ನೀಡಿದರು.

ಕಾಡು ಗೊಲ್ಲ ಅಭಿವೃದ್ದಿ ಸಂಘದ ದೊಡ್ಡ ವೀರಯ್ಯ ಮಾತನಾಡಿ ಶೇಕಡಾ 67 ರಷ್ಟು ಶಿಕ್ಷಣ ವಂಚಿತ ಕಾಡು ಗೊಲ್ಲ ಸಮಾಜ ಸಂವಿಧಾನ ತತ್ವದಂತೆ ಸರ್ವರಿಗೂ ಸಮಪಾಲು ನಮಗೆ ಸಿಕ್ಕಿಲ್ಲ. ಈ ಹಿನ್ನಲೆ ಎಸ್ಟಿ ಪಟ್ಟಿಗೆ ಸೇರಿಸಲು ಒತ್ತಾಯ ಮಾಡುತ್ತಿರುವ ಈ ವೇಳೆ ಶ್ರೀ ಕೃಷ್ಣ ಜಯಂತಿ ಆಚರಣೆ ಕಾಡು ಗೊಲ್ಲರ ಮೂಲಕ ನಡೆಸಿ ನಮ್ಮನ್ನು ದಿಕ್ಕು ತಪ್ಪಿಸುವ ಕೆಲಸ ನಡೆದಿದೆ. ಕಾಡು ಗೊಲ್ಲರಿಗೂ ಶ್ರೀ ಕೃಷ್ಣನಿಗೂ ಯಾವುದೇ ಸಂಬಂಧವಿಲ್ಲ. ನಾಗರಿಕ ಸಮಾಜದಿಂದ ದೂರ ಉಳಿದ ನಾವುಗಳು ಸಾಮಾಜಿಕ ನ್ಯಾಯ ಎಂದಿಗೂ ಪಡೆದಿಲ್ಲ. ಈ ಸಮಯ ನಮ್ಮ ಹಕ್ಕು ಪಡೆಯಲು ಕಾಡು ಗೊಲ್ಲರು ಒಗ್ಗೂಡಿ ಮುಂದೆ ಸಾಗಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಕಾಡು ಗೊಲ್ಲ ಸಮಾಜದ ಮುಖಂಡರಾದ ಮಾರಶೆಟ್ಟಿ ಹಟ್ಟಿ ರತೀಶ್ ಹುಲ್ಮನೆ, ಮುದ್ಧಯ್ಯನಹಟ್ಟಿ ಶ್ರೀನಿವಾಸ್, ಬಿಳಿಕಲ್ ಹಟ್ಟಿ ಸದಾಶಿವ, ಭೂತಪ್ಪನಹಟ್ಟಿ ನಾಗರಾಜು, ರಂಗೇಗೌಡ, ಜಗದೀಶ್, ಲಕ್ಷ್ಮಣ್, ಈರಣ್ಣ, ಲೋಕೇಶ್, ಶಿವಣ್ಣ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...