ಗುಬ್ಬಿ | ರಾಷ್ಟ್ರೀಯ ಹೆದ್ದಾರಿಯಿಂದ ತೋಟಗಳಿಗೆ ಹರಿದ ಮಳೆ ನೀರು : ಬೆಳೆ ನಷ್ಟಕ್ಕೆ ಪ್ರಾಧಿಕಾರ ಹೊಣೆ ಎಂದ ಸ್ಥಳೀಯ ರೈತರು

Date:

ಕಳೆದ ಹದಿನೈದು ವರ್ಷದಿಂದ ನಡೆದಿರುವ ರಾಷ್ಟ್ರೀಯ ಹೆದ್ದಾರಿ 206 ರ ಸರ್ವೀಸ್ ರಸ್ತೆ ಕಾಮಗಾರಿ ಪೂರ್ಣಗೊಳಿಸದೆ ಪತ್ರೆ ಮತ್ತಿಘಟ್ಟ ಗ್ರಾಮದ ಬಳಿ ನೂರಾರು ವರ್ಷದ ರಾಜಕಾಲುವೆ ಮುಚ್ಚಿ ಸರಾಗವಾಗಿ ಹರಿಯುತ್ತಿದ್ದ ಮಳೆ ನೀರು ನೇರ ರೈತರ ತೋಟಕ್ಕೆ ಹರಿಬಿಟ್ಟಿರುವುದು ಪ್ರಾಧಿಕಾರದ ಅವೈಜ್ಞಾನಿಕ ಕೆಲಸಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಪತ್ರೆ ಮತ್ತಿಘಟ್ಟ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಪಂ ಮಾಜಿ ಸದಸ್ಯ ಪತ್ರೆ ದಿನೇಶ್ ಮಾತನಾಡಿ ನೀರು ಕುಡಿದ ತೆಂಗು ಅಡಿಕೆ ಮರಗಳು ಫಲ ನೀಡದೆ ತನ್ನ ಬಣ್ಣ ಬದಲಿಸುತ್ತಿದೆ. ಕೊಳೆತು ಬೀಳುವ ಮರಗಳು ಸಾಕಿ ಸಲಹಿದ ರೈತರ ನೋವು ಅಧಿಕಾರಿಗಳಿಗೆ ಅರ್ಥ ಆಗುವುದಿಲ್ಲ. ಲಕ್ಷಾಂತರ ರೂ ಬೆಲೆಯ ಗೊಬ್ಬರ ಚೆಲ್ಲಿದ ರೈತ ಕೈಚೆಲ್ಲಿ ಕೂರುವ ದುಸ್ಥಿತಿ ತಂದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ, ತಾಲ್ಲೂಕು ಆಡಳಿತಕ್ಕೆ ಹಾಗೂ ಜಿಲ್ಲಾಡಳಿತಕ್ಕೆ ಈ ಬಗ್ಗೆ ಹಲವು ಬಾರಿ ದೂರು ನೀಡಿದರು ಪ್ರಯೋಜವಾಗಿಲ್ಲ. ಶಾಸಕರು, ಜಿಲ್ಲಾ ಸಚಿವರು, ಕೇಂದ್ರ ಸಚಿವರು ಇತ್ತ ಗಮನ ಹರಿಸಿ ರೈತರ ಬೆಳೆ ಉಳಿಸಿ ಎಂದು ಒತ್ತಾಯಿಸಿದರು.

ಹೊದಲೂರು ಕೆರೆಗೆ ಮಳೆ ನೀರು ಹರಿಯುವ ರಾಜಕಾಲುವೆ ಮುಚ್ಚಿದ ಪರಿಣಾಮ ಸುಮಾರು ನಾಲ್ಕು ಗ್ರಾಮದಿಂದ ಹರಿಯುವ ಮಳೆ ನೀರು ನೇರ ಪತ್ರೆ ಮತ್ತಿಘಟ್ಟ ಗ್ರಾಮದ ರೈತರ ಜಮೀನಿಗೆ ನುಗ್ಗಿದೆ. ಹೆದ್ದಾರಿ ಪಕ್ಕ ಗ್ರಾಮಕ್ಕೆ ಸಿದ್ಧಪಡಿಸಿದ ಸಿಸಿ ರಸ್ತೆ ಕೂಡಾ ಕಳಪೆ ಕಾಮಗಾರಿಯಾಗಿದೆ. ರಸ್ತೆ ಕೆಳಭಾಗದಲ್ಲಿ ಮಣ್ಣು ಕಸಿದು ಕಾಂಕ್ರೀಟ್ ಮಾತ್ರ ಉಳಿದಿದೆ. ರಸ್ತೆ ಪಕ್ಕದಲ್ಲಿ ಬಾಕ್ಸ್ ಚರಂಡಿ ನಿರ್ಮಾಣ ಅರ್ಧಕ್ಕೆ ನಿಲ್ಲಿಸಿದ ಪರಿಣಾಮ ಮಳೆ ನೀರು ನೇರ ಪಕ್ಕದ ತೋಟಕ್ಕೆ ನುಗ್ಗಿದೆ. ಸಾವಿರಾರು ತೆಂಗು, ಅಡಿಕೆ ಮರಗಳ ಸುತ್ತ ನಾಲ್ಕು ಅಡಿಗಳಷ್ಟು ನೀರು ಆವೃತವಾಗಿದೆ ಎಂದು ಸ್ಥಳೀಯ ರೈತ ನಂಜುಂಡಪ್ಪ ಕಿಡಿಕಾರಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
1000508004

ಹೆದ್ದಾರಿ ಪೂರ್ಣಗೊಳ್ಳುವ ಮುನ್ನ ಸಿಸಿ ರಸ್ತೆಯನ್ನು ಬಳಸುವ ಬೃಹತ್ ವಾಹನಗಳು ಈಗಾಗಲೇ ಇಲ್ಲಿ ಸಂಚರಿಸುತ್ತಿವೆ. ಮಣ್ಣು ಕಸಿದು ಕಾಂಕ್ರೀಟ್ ರಸ್ತೆ ಟೊಳ್ಳು ರೀತಿ ಕಾಣುತ್ತಿದೆ. ಬಾರಿ ವಾಹನ ಬಂದಲ್ಲಿ ಯಾವ ಕ್ಷಣದಲ್ಲಾದರೂ ರಸ್ತೆ ಕಸಿಯುವ ಭೀತಿ ಇಲ್ಲಿದೆ. ಗುಬ್ಬಿ ಹೊರ ವಲಯದ ಈ ಹೆದ್ದಾರಿ ರಸ್ತೆ ಜನರ ಬಳಕೆಗೆ ಬಂದಿದೆ. ಆದರೆ ಕೆಲಸ ಮಾತ್ರ ಪೂರ್ತಿಯಾಗಿಲ್ಲ. ಫ್ಲೈ ಓವರ್ ಸೇತುವೆ ಮೇಲಿನ ರಸ್ತೆಯ ನೀರು ಪೈಪ್ ಲೈನ್ ಮೂಲಕ ತೋಟಕ್ಕೆ ಹರಿ ಬಿಡಲಾಗಿದೆ. ಮಳೆ ಬಂದರೆ ಈ ಗ್ರಾಮದ ಸುತ್ತಲಿನ ಎಲ್ಲಾ ನೀರು ರಸ್ತೆ ಬದಿಯ ಸುಮಾರು ಅರವತ್ತು ಎಕರೆ ಪ್ರದೇಶಕ್ಕೆ ಹರಿದು ಸಾವಿರಾರು ತೆಂಗು ಅಡಿಕೆ ಮರವನ್ನು ಆವರಿಸಿದೆ. ಈ ಹೆದ್ದಾರಿಗೆ ಜಮೀನು ನೀಡಿದ ರೈತರಿಗೆ ಅನ್ಯಾಯ ಮಾಡುವ ಪ್ರಾಧಿಕಾರ ಕೂಡಲೇ ರಾಜಕಾಲುವೆ ಮಾರ್ಗಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಜೊತೆಗೆ ಅರ್ಧಕ್ಕೆ ನಿಂತ ಬಾಕ್ಸ್ ಚರಂಡಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸ್ಥಳೀಯ ರೈತರು ತಮ್ಮ ಬೇಡಿಕೆ ವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ರೈತರಾದ ವಿನಯ್, ದಯಾನಂದ್, ರಮೇಶ್ ಇತರರು ಇದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...