ಗುಬ್ಬಿ | ಕುರಿ ಕಾಯುವಾಗ ಆಲದಮರದ ನೆರಳಲ್ಲಿ ಸಿದ್ದರಾಮಯ್ಯ ಬರೆಸಿದ ಜಾತಿ ಸಮೀಕ್ಷೆ : ಶಾಸಕ ಎಂ.ಟಿ.ಕೃಷ್ಣಪ್ಪ ವ್ಯಂಗ್ಯ

Date:

ಚಿಕ್ಕ ವಯಸ್ಸಿನಲ್ಲಿ ಸಿದ್ದರಾಮಯ್ಯ ಅವರು ಕುರಿ ಕಾಯಲು ಹೋದಾಗ ಆಲದಮರದ ನೆರಳಲ್ಲಿ ಕುಳಿತು ಬರೆಸಿದ ಜಾತಿ ಗಣತಿ ಇದಾಗಿದೆ. ವೈಜ್ಞಾನಿಕ ಅಂಶವೇ ಇದರಲ್ಲಿಲ್ಲ. ಜಾತ್ಯತೀತ ಪ್ರಜಾತಂತ್ರದ ನಮ್ಮ ದೇಶದಲ್ಲಿ ಜಾತಿ ಗಣತಿ ಯಾರಿಗೆ ಬೇಕಿತ್ತು ಎಂದು ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಟೀಕಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಶಾಸಕರ ಕಚೇರಿಯಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಿ ಸುದ್ದಿಗಾರರ ಜೊತೆ ಮಾತನಾಡಿದ ಅವರು 76 ಲಕ್ಷ ಒಕ್ಕಲಿಗರು ಎನ್ನುವವರು ಒಳ ಪಂಗಡದ ಹಲವು ಒಕ್ಕಲಿಗರನ್ನು ಕೈ ಬಿಟ್ಟಿದ್ದಾರೆ. ಒಟ್ಟಾರೆ 1.10 ಕೋಟಿ ಒಕ್ಕಲಿಗರಿದ್ದಾರೆ. ನಮಗಿಂತ 10 ಲಕ್ಷ ಹೆಚ್ಚು ವೀರಶೈವ ಲಿಂಗಾಯಿತರಿದ್ದಾರೆ ಎಂದು ನೇರವಾಗಿ ಜಾತಿ ಗಣತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

44 ಲಕ್ಷ ಕುರುಬರ ಸಂಖ್ಯೆ ತೋರಿರುವ ಗಣತಿ ಪ್ರಕಾರ ಕಾಡು ಕುರುಬ, ಜೇನು ಕುರುಬ, ಗೊಂಡ ಕುರುಬ ಇವರೆಲ್ಲಾ ಪರಿಶಿಷ್ಟ ಪಂಗಡಕ್ಕೆ ಒಳಪಡಿಸಲಾಗಿದೆ. ಆದರೆ ಇಲ್ಲಿ ಸಂಖ್ಯೆ ಮಾತ್ರ ಎಲ್ಲವೂ ಸೇರಿ ನಮೂದಿಸಲಾಗಿದೆ. ಯಾವುದೇ ಪ್ರಾಮಾಣಿಕತೆ ಇಲ್ಲದ ಗಣತಿ ವಾಪಸ್ ಪಡೆಯಬೇಕು. ಅವಶ್ಯವಿದ್ದರೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಿರಿ. ಗಣತಿ ಮಾಡುತ್ತಾರೆ ಎಂದ ಅವರು ಸಿದ್ದರಾಮಯ್ಯ ಅವರೇ ಮೀಸಲು ಹಣ ಬಳಸುವುದು ಕ್ರಿಮಿನಲ್ ಎಂದು ಹೇಳಿ 34 ಲಕ್ಷ ಕೋಟಿನಲ್ಲಿ ಎಸ್ಸಿ ಮೀಸಲು ಹಣ ಬೇರೆ ಉದ್ದೇಶ ಅದು ಗ್ಯಾರಂಟಿ ಯೋಜನೆಗೆ ಬಳಸಿದ್ದೀರಿ. 16 ಬಜೆಟ್ ಮಂಡಿಸಿದ್ದೀನಿ ಎಂದು ಬೀಗುವ ಮುಖ್ಯಮಂತ್ರಿಗಳು ರೈತರಿಗೆ ಕಾರ್ಮಿಕರಿಗೆ ಏನೂ ಕೊಟ್ಟಿಲ್ಲ. ಕಾಮನ್ ಸೆನ್ಸ್ ಮರೆತು ಗ್ಯಾರಂಟಿ ಯೋಜನೆಗೆ ಹಣ ಸಂಗ್ರಹ ಮಾಡುತ್ತಿದ್ದೀರಿ. ಗಳ್ಳಂಗೋಟಿ ಆಂಜನೇಯ ಗ್ಯಾಂಗ್ ಹಿಡಿದು ಕೊಂಡು ಅಲ್ಲಾಡಿಸುತ್ತಿದ್ದೀರಿ ಎಂದು ವ್ಯಂಗ್ಯವಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಬೆಲೆ ಏರಿಕೆ ರಾಜ್ಯ ಸರ್ಕಾರ ಮಾಡಿ ಈಗ ಕೇಂದ್ರದ ಮೇಲೆ ಗೊಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಸಮಾವೇಶ ನಡೆಸಿ ಹೋರಾಟ ಮಾಡಲು ನೈತಿಕತೆ ಕಳೆದುಕೊಂಡಿದ್ದೀರಿ. ಈಗಾಗಲೇ 25 ಸಾವಿರ ತೆರಿಗೆ ಹೆಚ್ಚಿಸಿ ಕೇವಲ 2 ಸಾವಿರ ಹೆಣ್ಣು ಮಕ್ಕಳಿಗೆ ನೀಡುತ್ತೀರಿ. ಉಳಿದ 23 ಸಾವಿರ ಎಲ್ಲಿ ಹೋಯಿತು. ಈ ಬಗ್ಗೆ ಸದನದಲ್ಲಿ ಲೆಕ್ಕ ಕೇಳಿದ್ದೇನೆ. ಹಾಲು 9 ರೂಪಾಯಿ ಹೆಚ್ಚಳ, ಬಸ್ ಚಾರ್ಜ್ ಶೇಕಡಾ 40 ಹೆಚ್ಚಳ, ಕರೆಂಟ್ ಉಚಿತ ಅಂತ ಹೇಳಿ ಪ್ರತಿ ಯುನಿಟ್ ಗೆ 37 ಪೈಸೆ ಹೆಚ್ಚಳ ಹೀಗೆ ಎಲ್ಲದಕ್ಕೂ ತೆರಿಗೆ ವಿಧಿಸಿ ಗ್ಯಾರಂಟಿ ನಡೆಸುವುದು ಮುಂದಿನ 2028 ಕ್ಕೆ 10 ಲಕ್ಷ ಕೋಟಿ ಸಾಲ ರಾಜ್ಯವನ್ನು ದಿವಾಳಿ ಮಾಡುತ್ತದೆ ಎಂದ ಅವರು ಗ್ಯಾರಂಟಿ ಕೊಟ್ಟ ಮಹಾರಾಷ್ಟ್ರ, ದೆಹಲಿ ಚುನಾವಣೆ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತು. ಅತೀ ಹೆಚ್ಚು ಮುಸ್ಲಿಂ ಮತ ಇರುವ ದೆಹಲಿಯಲ್ಲಿ ಕಾಂಗ್ರೆಸ್ ಒಂದು ಸೀಟ್ ಗೆಲ್ಲಲಿಲ್ಲ. 67 ಮಂದಿ ಠೇವಣಿ ಕಳೆದುಕೊಂಡರು. ಇಂತಹ ಸ್ಥಿತಿಯಲ್ಲಿರುವ ಕಾಂಗ್ರೆಸ್ ಕಾಶ್ಮೀರ ಉಗ್ರರ ದಾಳಿ ಬಗ್ಗೆ ವಿಭಿನ್ನ ಹೇಳಿಕೆ ನೀಡುತ್ತಾ ರಾಜಕಾರಣ ತೋರುತ್ತಿದೆ. ಯುದ್ದ ಬೇಡ ಅನ್ನಲು ಸಿದ್ದರಾಮಯ್ಯ ಕೇಂದ್ರದ ಸಚಿವರೇ, ಕಾಲು ಕೆರೆದು ನಾವು ಯುದ್ದಕ್ಕೆ ಹೋಗಿಲ್ಲ. ಅವರೇ ಅಮಾಯಕರನ್ನು ಕೊಂದ ನರಮೇಧ ನಡೆಸಿದ ಹಿನ್ನಲೆ ತಕ್ಕ ಪಾಠ ಕಲಿಸಬೇಕಿದೆ. 15 ಬೇರೆ ದೇಶ ಬೆಂಬಲ ನೀಡಿದೆ. ಇಲ್ಲಿ ಒಗ್ಗಟ್ಟು ಪ್ರದರ್ಶನ ಆಗಬೇಕಿದೆ. ಈ ರೀತಿಯ ಹೇಳಿಕೆ ಸಲ್ಲದ ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಬೋರಪ್ಪನಹಳ್ಳಿ ಕುಮಾರ್, ಬೀರಮಾರನಹಳ್ಳಿ ನರಸೇಗೌಡ, ಸಿ.ಎಸ್.ಪುರ ಹೋಬಳಿ ಅಧ್ಯಕ್ಷ ಜಗದೀಶ್, ಮುಖಂಡರಾದ ಗಂಗಾಧರಪ್ಪ, ಕೃಷ್ಣೇಗೌಡ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...