ಗುಬ್ಬಿ | ಮಳೆ ಬಿರುಗಾಳಿಗೆ ಧರೆಗುರುಳಿದ ಮರಗಳು, ಮನೆಯ ಮೇಲ್ಛಾವಣಿ : ಇಡೀ ರಾತ್ರಿ ಕಗ್ಗತ್ತಲಲ್ಲಿ ಗ್ರಾಮಗಳು

Date:

ದಿಢೀರ್ ಬಿರುಗಾಳಿ ಬೀಸಿ ಮಳೆಯು ಬಿದ್ದು ಗಾಳಿಯ ರಭಸಕ್ಕೆ ನೂರಾರು ಅಡಿಕೆ, ತೆಂಗು, ಮಾವು, ಬಾಳೆಗಿಡಗಳು ಧರೆಗುರುಳಿದರಲ್ಲದೆ ಮರಗಳು ವಿದ್ಯುತ್ ಕಂಬ ತಂತಿಯ ಮೇಲೆ ಬಿದ್ದ ಹಿನ್ನಲೆ ಶುಕ್ರವಾರ ರಾತ್ರಿ ಪೂರಾ ಕೆಲ ಗ್ರಾಮಗಳಲ್ಲಿ ಕಗ್ಗತ್ತಲು ಆವರಿಸಿತ್ತು.

ನಿಟ್ಟೂರು, ಬಾಗೂರು, ಜಿ.ಅರಿವೇಸಂದ್ರ, ಹೇರೂರು ಮಾರ್ಗವಾಗಿ ಬೀಸಿದ ಬಿರುಗಾಳಿಗೆ ತೆಂಗು, ಅಡಿಕೆಮರಗಳು ಕ್ಷಣಾರ್ಧದಲ್ಲಿ ಧರೆಗುರುಳಿವೆ. ಈ ಜೊತೆಗೆ ಮಾವು ಬಾಳೆ ಕೂಡಾ ಮಣ್ಣು ಪಾಲಾಗಿದೆ. ಗಾಳಿಯ ರಭಸಕ್ಕೆ ಜಿ. ಅರಿವೇಸಂದ್ರ ಗ್ರಾಮದ 5 ಮನೆಗಳ ಮೇಲ್ಛಾವಣಿ ಹಾರಿ ಹೋಗಿವೆ. ಕೆಲ ಮನೆಗಳ ಮೇಲೆ ತೆಂಗಿನಮರ ಬಿದ್ದು ಮನೆ ಭಾಗಶಃ ಹಾನಿಯಾಗಿದೆ. ವಿದ್ಯುತ್ ಕಂಬ ಧರೆಗುರುಳಿವೆ. ತಂತಿ ಮೇಲೆ ಬಿದ್ದ ಮರಗಳನ್ನು ತೆರೆವು ಗೊಳಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುವ ಅನಿವಾರ್ಯವಾಯಿತು.

1001355363

ಸುಂಟರಗಾಳಿ ಸುಳಿಗೆ ಸಿಲುಕಿದ ಸಿಮೆಂಟ್ ಶೀಟ್, ತಗಡಿನ ಶೀಟ್ ಹಾರಿ ಬಿದ್ದಿವೆ. ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂಬುದು ಸಮಾಧಾನ ವಿಚಾರ. ನಿಟ್ಟೂರು ಹೋಬಳಿ ಬಾಗೂರು ಗ್ರಾಮದಲ್ಲಿ ಬಹುತೇಕ ಮನೆಗಳ ಹಾನಿ ಉಂಟಾಗಿದೆ. ಅಂದಾಜು 35 ಮನೆಗಳು ವಾಸಕ್ಕೆ ಯೋಗ್ಯವಲ್ಲ ಎಂಬಂತೇ ದುಸ್ಥಿತಿ ಗಾಳಿ ತಂದಿದೆ. ಈ ಜೊತೆಗೆ ಕಂಬಗಳ ಮೇಲೆ ಬಿದ್ದ ಮರಗಳ ತೆರವಿಗೆ ಸಮಯವಿಲ್ಲದೆ ಸಂಜೆಯಿಂದ ರಾತ್ರಿ ಪೂರಾ ಕಗ್ಗತ್ತಲಲ್ಲಿ ಬದುಕು ನಡೆಸಿದ್ದಾರೆ. ದೇವಾಲಯ ಸೇರಿದಂತೆ ಗ್ರಾಮದ ಅರ್ಧ ಭಾಗದ ಮನೆಗಳು ಹಾನಿಯಾಗಿವೆ. ಈ ಜೊತೆಗೆ ಚನ್ನಶೆಟ್ಟಿಹಳ್ಳಿ, ಹೇರೂರು, ಅಮ್ಮನಘಟ್ಟ ಅರಣ್ಯ ಪ್ರದೇಶ ಎಲ್ಲವೂ ತಲ್ಲಣಗೊಳಿಸಿದ ಬಿರುಗಾಳಿ ರೈತರಿಗೆ ತೀವ್ರ ನಷ್ಟ ತಂದಿದೆ. ಸಂಬಂಧಪಟ್ಟ ಕಂದಾಯ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸ್ಥಳ ಮಹಜರು ನಡೆಸಿ ಸೂಕ್ತ ಪರಿಹಾರಕ್ಕೆ ಸರ್ಕಾರ ಮುಂದಾಗಬೇಕು ಎಂದು ಸ್ಥಳೀಯ ಮುಖಂಡರು ಆಗ್ರಹಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
1001355364

ಜಿ. ಅರಿವೇಸಂದ್ರ ಭಾಗದಲ್ಲಿ ಮಳೆ ಜೊತೆ ಬೀಸಿದ ಬಿರುಗಾಳಿಗೆ ಸುಮಾರು 300 ಅಡಿಕೆಮರಗಳು, 80 ತೆಂಗಿನಮರಗಳು, 10 ಮಾವು, 250 ಬಾಲೆಗಿಡಗಳು ಧರೆಗುರುಳಿವೆ. ಸಿದ್ದರಾಮಯ್ಯ ಅವರ ತೋಟದಲ್ಲಿ 50 ಅಡಿಕೆ, 20 ತೆಂಗಿನಮರಗಳು, ಮಲ್ಲಿಕಾರ್ಜುನಯ್ಯ ಅವರ 30 ಅಡಿಕೆ, ರಾಮಚಂದ್ರಯ್ಯ ತೋಟದಲ್ಲಿ 35 ಅಡಿಕೆ, ಗಂಗಣ್ಣ ಅವರ 30 ಅಡಿಕೆ, 20 ತೆಂಗು ಹೀಗೆ 25 ಮಂದಿಯ ರೈತರ ಅಡಿಕೆ ತೆಂಗು ನಷ್ಟಕ್ಕೆ ಸಿಲುಕಿವೆ. ಸ್ಥಳಕ್ಕೆ ಕಂದಾಯ ಹಾಗೂ ತೋಟಗಾರಿಕೆ ಸಿಬ್ಬಂದಿ ಪರಿಶೀಲನೆ ಮಾಡಿದ್ದಾರೆ.

1001355366

ಹತ್ತಾರು ವರ್ಷದಿಂದ ಕಷ್ಟಪಟ್ಟು ಸಾಲ ಮಾಡಿ ಬೆಳೆದ ತೆಂಗು ಅಡಿಕೆಮರಗಳು ಏಕಾಏಕಿ ನೆಲಕ್ಕುರುಳಿದ ದೃಶ್ಯ ಸಾಕಿ ಸಲಹಿದ ರೈತರಿಗೆ ತೀವ್ರ ಆಘಾತ ತಂದಿದೆ. ಫಲ ಬಿಡುವ ಮರಗಳು ಮಣ್ಣುಪಾಲಾದರೆ ಅವರ ನಷ್ಟ ತುಂಬುವವರು ಯಾರು. ಈ ಹಿನ್ನಲೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರೈತರ ನಷ್ಟ ಪಟ್ಟಿ ಮಾಡಿ ಸರ್ಕಾರದ ಮೂಲಕ ಪರಿಹಾರ ನೀಡುವಂತೆ ರೈತ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್ ಒತ್ತಾಯಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...