ಉಡುಪಿ ಜಿಲ್ಲಾಧಿಕಾರಿ ಹೊರಡಿಸಿದ ನಿಷೇಧಾಜ್ಞೆ ಮಧ್ಯೆಯೇ 80 ಬಡಗುಬೆಟ್ಟು ಗ್ರಾಮದಲ್ಲಿ ಕಂಬಳ ಶಂಕುಸ್ಥಾಪನೆ ನೆರವೇರಿಸಿದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸಹಿತ ಜಿಲ್ಲೆಯ ಶಾಸಕರು ಮತ್ತು ಹಲವರ ವಿರುದ್ಧ ಉಡುಪಿ ತಹಶೀಲ್ದಾರ್ ಗುರುರಾಜ್ ಅವರ ದೂರಿನ ಮೇರೆಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 189(2), 191(2), 329(3), 190 ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 37, 109ರಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದಲ್ಲಿ ಆರೋಪಿಗಳ ಪಟ್ಟಿಯಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಕಾರ್ಕಳ ಶಾಸಕ ಸುನಿಲ್ ಕುಮಾರ್, ಕುಂದಾಪುರ ಕ್ಷೇತ್ರದ ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ, ಎಂಎಲ್ಸಿ ಧನಂಜಯ್ ಸರ್ಜಿ, ಸಂಸದ ಶ್ರೀನಿವಾಸ ಪೂಜಾರಿ, ಕಾಪು ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್ ಸೇರಿದಂತೆ ಹಲವರ ಹೆಸರುಗಳು ಸೇರಿವೆ.
ಇತರ ಆರೋಪಿಗಳಾಗಿ ಮಟ್ಟಾರು ರತ್ನಾಕರ ಹೆಗ್ಡೆ, ಶಿಲ್ಪಾ ಸುವರ್ಣ (ಕಾಪು), ಗೀತಾಂಜಲಿ ಸುವರ್ಣ (ಕಟಪಾಡಿ), ನಂದಳಿಕೆ ಶ್ರೀಕಾಂತ್ ಭಟ್, ಶುಭಕರ ಶೆಟ್ಟಿ (80 ಬಡಗಬೆಟ್ಟು), ಸಂದೀಪ್ ಶೆಟ್ಟಿ (80 ಬಡಗಬೆಟ್ಟು), ಜಿಯಾನಂದ ಹೆಗ್ಡೆ (ಬೈರಂಪಳ್ಳಿ), ವೀಣಾ ಶೆಟ್ಟಿ (ಉಡುಪಿ), ಸಾಯಿಶ ಸುಧಾಕರ ಶೆಟ್ಟಿ (ಪೆರ್ಡೂರು), ಬೆಳಪು ದೇವಿಪ್ರಸಾದ್ ಶೆಟ್ಟಿ, ಕುತ್ಯಾರು ನವೀನ್ ಶೆಟ್ಟಿ, ಶ್ರೀನಿಧಿ ಹೆಗ್ಡೆ (ಉಡುಪಿ), ಹರಿಕೃಷ್ಣ (ಬಂಟ್ವಾಳ), ರವೀಂದ್ರ ಮಡಿವಾಳ್ (ಕಾರ್ಕಳ), ಅಂತೋನಿ ಡಿಸೋಜಾ (ನಕ್ರೆ), ವಿಜಯ್ ಕುಮಾರ್ (ಕಂಗಿನ ಮನೆ, ಹೊಸ್ಮಾರ್), ಶ್ಯಾಮಲಾ ಕುಂದರ್ (ಹಿರಿಯಡ್ಕ), ಲೋಕೇಶ್ ಶೆಟ್ಟಿ (ಕಾರ್ಕಳ), ಮೋಹನ್ ಭಟ್ (ಹಿರಿಯಡ್ಕ), ದಿಲ್ಲೇಶ್ ಶೆಟ್ಟಿ (ಕುಕ್ಕೆಹಳ್ಳಿ), ಶಾಂತಾರಾಮ ಶೆಟ್ಟಿ (ರಾಜೀವನಗರ), ರವೀಂದ್ರ ನಾಯ್ಕ (ಕುಕ್ಕುದಕಟ್ಟೆ, 80 ಬಡಗಬೆಟ್ಟು), ಗೋಪಾಲ ಕೃಷ್ಣ (ಮಟ್ಟು), ಸುಭಾಷ್ ಬಲ್ಲಾಳ್ (ಕಟಪಾಡಿ), ಶಿವಪುನಾರ್ (ಹಿರೇಬೆಟ್ಟು), ಮೋಹನ್ ಶೆಟ್ಟಿ (ಕಬ್ಯಾಡಿ), ಕೃಷ್ಣ ಕುಲಾಲ್ (ವರ್ವಾಡಿ) ಸೇರಿದಂತೆ ಇತರ ಸ್ಥಳೀಯ ಕಾರ್ಯಕರ್ತರ ಹೆಸರುಗಳೂ ಸೇರಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.





