ಹಾಸನ | ಆದಂ ಪಾಷಾ ಅಪರೂಪದ ವ್ಯಕ್ತಿ; ಶಶಿಧರ್ ಮೌರ್ಯ ಶ್ಲಾಘನೆ

Date:

ಒಂದೊಂದು ಅಡಿಗೂ ಸ್ವಂತ ಸಹೋದರರೇ ಕಿತ್ತಾಡುವ ನಿದರ್ಶನಗಳನ್ನು ನಾವು ಕಾಣುತ್ತಿದ್ದೇವೆ. ನ್ಯಾಯಾಲಗಳಲ್ಲಿ ಶೇ.90ರಷ್ಟು ಜಮೀನು ವ್ಯಾಜ್ಯದ ಪ್ರಕರಣಗಳೇ ದಾಖಲಾಗಿವೆ. ಜಮೀನಿಗಾಗಿ ಹೊಡೆದಾಟ ಬಡಿದಾಟ ಕೊಲೆ ಸುಲಿಗೆ ಸೇರಿದಂತೆ ಇನ್ನೂ ಅನೇಕ ದುರ್ಘಟನೆಗಳು ನಡೆಯುತ್ತಲೇ ಇವೆ. ಆದರೆ, ಇಲ್ಲೊಬ್ಬರು ತನ್ನ ಪಾಲಿಗೆ ಬಂದಿದ್ದ ಜಮೀನನ್ನು ಇನ್ನೊಬ್ಬರಿಗೆ ಹಸ್ತಾಂತರಿಸಲು ನಿರ್ಧರಿಸಿರುವುದು ಹೆಮ್ಮೆಯ ವಿಷಯ ಎಂದು ಸಾಮಾಜಿಕ ಹೋರಾಟಗಾರ ಶಶಿಧರ್ ಮೌರ್ಯ ಶ್ಲಾಘಿಸಿದರು.

ಹಾಸನ ಜಿಲ್ಲೆ ಬೇಲೂರು ತಾಲೂಕಿನ ಬಂಟೇನಹಳ್ಳಿ ಗ್ರಾಮದ ನಿವಾಸಿ ಆದಂ ಪಾಷಾ ಅವರಿಗೆ ಬೇಲೂರಿನ 24×7 ಸಮಾಜ ಸೇವ ತಂಡ ಮತ್ತು ಸಮಾನ ಮನಸ್ಕರೆಲ್ಲರೂ ಸೇರಿ ಗೌರವ ಸಮರ್ಪಣೆ ಸಲ್ಲಿಸಿದ ಸಂದರ್ಭದಲ್ಲಿ ಮಾತನಾಡಿದರು.

“ಆದಂ ಪಾಷಾರಂತಹ ವ್ಯಕ್ತಿ ಬಹುಶಃ ದೇಶದಲ್ಲಿ ಹುಡುಕಿದರೂ ಸಿಗದಿರುವ ವ್ಯಕ್ತಿ ಎನ್ನಬಹುದು. ಪಾಲಿಗೆ ಬಂದಿದ್ದು ಪಂಚಾಮೃತವೆಂದು ಜೀವನ ನಡೆಸುವ ಈ ಕಾಲಘಟ್ಟದಲ್ಲಿ, ಅಪರೂಪದ ವ್ಯಕ್ತಿತ್ವವುಳ್ಳ ಉದಾರ ಮನಸ್ಸಿನವರು ಇವರು. ಯಾಕೆಂದರೆ, ಇಂದಿರಾಗಾಂಧಿ ಆಡಳಿತದಲ್ಲಿ ಬಂದಂತ “ಉಳುವವನೇ ಭೂಮಿಯ ಒಡೆಯ” ಎಂಬ ಕಾನೂನಿನ ಅಡಿಯಲ್ಲಿ ಆದಂ ಪಾಷಾ ಅವರ ತಾತನಿಗೆ ಸರ್ಕಾರದಿಂದ ಸುಮಾರು 4 ಎಕರೆ ಜಮೀನು ಮಂಜೂರಾಗಿತ್ತು. ಅದರ ಪಾಲಾಗಿ ಸುಮಾರು ಮುಕ್ಕಾಲು ಎಕರೆ ಜಮೀನು ಆದಂ ಪಾಷರವರಿಗೆ ಸೇರಿತ್ತು” ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಜೀವನಕ್ಕಾಗಿ ಸುಮಾರು ವರ್ಷಗಳಿಂದ ಕೃಷಿ ಮಾಡುತ್ತಾ ಬಂದಿದ್ದಾರೆ. ಇದೀಗ ಪದೇ ಪದೆ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಎಷ್ಟೇ ನುರಿತ ವೈದ್ಯರಿಗೆ ತೋರಿಸಿದರೂ ಇವರ ಆರೋಗ್ಯ ಸಮಸ್ಯೆ ಬಗೆಹರಿಯಲಿಲ್ಲ. ನಂತರ ಮುಸ್ಲಿಂ ಧರ್ಮ ಗುರು ಅವರ ಅಪ್ಪಣೆಯಂತೆ ʼಭೂಮಿಯ ಮೂಲ ಒಡೆಯ ಯಾರಿದ್ದಾರೆ, ಅವರಿಗೆ ತಮ್ಮ ಭೂಮಿ ಹಿಂತಿರುಗಿಸಿʼ ಎಂದು ಸಲಹೆ ನೀಡಿದರು. ಧರ್ಮಗುರು ಅವರ ಸಲಹೆಯಂತೆ ಭೂಮಿಯ ಮೂಲ ಹಕ್ಕುದಾರರಿಗೆ ತನ್ನ ಪಾಲಿಗೆ ಬಂದಿದ್ದ ಮುಕ್ಕಾಲು ಎಕರೆ ಕೃಷಿ ಭೂಮಿಯನ್ನು ಉದಾರ ಮನಸ್ಸಿನಿಂದ ಪೇಟೆ ನಿವಾಸಿ ಮುಜಮ್ಮಿಲ್ ಅವರಿಗೆ ಹಸ್ತಾಂತರಿಸಲು ನಿರ್ಧರಿಸಿದ್ದಾರೆ” ಎಂದು ತಿಳಿಸಿದರು.

“ಕಿತ್ತು ತಿನ್ನುವ ಈ ಕಾಲಘಟ್ಟದಲ್ಲಿ ಬಂಡವಾಳ ಶಾಹಿಗಳು ಬಡವರಿಗೆ ಮಾಡುವ ಅನ್ಯಾಯಗಳನ್ನು ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ಸ್ವಂತ ಅಣ್ಣ-ತಮ್ಮಂದಿರೇ ಜಮೀನುಗಳಿಗಾಗಿ ಕಚ್ಚಾಡುವ ಇಂತಹ ಸಂದರ್ಭದಲ್ಲಿ ಆದಂ ಪಾಷಾ ಅವರ ಉದಾರ ಮನಸ್ಥಿತಿ ನಿಜಕ್ಕೂ ಶ್ಲಾಘನೀಯ. ಇಂತಹ ಅಪರೂಪದ ವ್ಯಕ್ತಿಯನ್ನು ನಮ್ಮ ಬೇಲೂರಿನವರೆಂದು ಹೇಳಿಕೊಳ್ಳಲು ನಮಗೆ ತುಂಬಾ ಹೆಮ್ಮೆಯಾಗುತ್ತದೆ” ಎಂದರು.

ಈ ಸುದ್ದಿ ಓದಿದ್ದೀರಾ? ಕಲಬುರಗಿ | ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿ ಸಾವು; ತನಿಖೆಗೆ ಆಗ್ರಹ

ಈ ಸಂದರ್ಭದಲ್ಲಿ ಗುರುಗಳಾದ ಇಫ್ತೇಕಾರ್ ಕೊನ್ನೇರ್ಲು ಹರೀಶ್, ಸಂಪತ್ ಮಾಸ್ಟರ್, ಭೀಮ್ ಆರ್ಮಿ ತಾಲೂಕು ಘಟಕದ ಅಧ್ಯಕ್ಷ ಕೀರ್ತಿ, ಪತ್ರಕರ್ತ ಸುನಿಲ್ ರಾಯಪುರ, ಕೋಟೆ ರಫೀಕ್ ಮಸೂದ್ ಥೋಫೀಕ್, ಪುರಸಭೆ ಸದಸ್ಯ ಫಯಾದ್ ಅಹ್ಮದ್, ಹಾಸನ್ ಟೈಯರ್ ಮಾಲೀಕ ರೋಮನ್, ಜನತಾ ಎಲೆಕ್ಟ್ರಿಕಲ್ ಮಾಲೀಕ ಸಾಕಿಬ್, ಸಮಾಜ ಸೇವಕ ನೂರ್ ಅಹಮದ್, ಶಫಿಕ್ ಅಹಮದ್‌, ಜಸ್ಏ ಅಹ್ಮದ್ ಹುಸೇನ್, ಅಖ್ತಾರ್ ರಜಾ, ಅಬಾನ್ ರಜಾ ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...