ಬೌದ್ಧ ಮಹಾಸಭಾ ಸ್ವತಃ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕಟ್ಟಿದ ಸಂಘಟನೆಯಾಗಿದೆ, 1934 ರಲ್ಲಿ ನಾಸಿಕ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹುಟ್ಟು ಆಕಸ್ಮಿಕ ಸಾವು ಖಚಿತ ಆದರೆ ಸಾಯುವಾಗ ಹಿಂದುವಾಗಿ ಸಾಯಲಾರೆ ಎಂಬ ಮಾತನ್ನು ಹೇಳುವ ಮೂಲಕ ಬೌದ್ಧ ಧರ್ಮದ ಸಂಸ್ಕೃತಿಯನ್ನು ಎತ್ತಿ ಹಿಡಿದಿದ್ದಾರೆ. ಜಾತಿ ಹೆಸರಿನಲ್ಲಿ ಮನುಕುಲ ನಾಶ ಮಾಡಿದ ಪೇಶ್ವೆಯವರ ವಿರುದ್ಧ 500 ಮಹಾರ್ ಯೋಧರ ಸಾಧನೆಯ ಫಲವೇ ಈ ವಿಜಯೋತ್ಸವ ಎಂದು ನಿವೃತ್ತ ಡಿಸಿಪಿ ಹಾಗೂ ಭಾರತೀಯ ಬೌದ್ಧ ಮಹಾಸಭಾ ಅಧ್ಯಕ್ಷ ಸಿದ್ದರಾಜು ಮಂಗಳವಾರ ನಡೆದ ಭೀಮಾ ಕೋರೆಗಾಂವ್ ವಿಜಯೋತ್ಸವದಲ್ಲಿ ಮಾತಾಡಿದರು.
ಇದನ್ನೂ ಓದಿದ್ದೀರಾ?ಹಾಸನ | ಆಳುವ ಸರ್ಕಾರಗಳ ಕೆಲ ನೀತಿಗಳಿಂದಾಗಿ ಸಂವಿಧಾನಾತ್ಮಕ ಹಕ್ಕುಗಳು ದುರ್ಬಲ: ಭೀಮ್ ರಾವ್ ಅಂಬೇಡ್ಕರ್
1946 ರಲ್ಲಿ ಶುದ್ರರೆಂದರೆ ಯಾರು ಎಂಬ ಪುಸ್ತಕದಲ್ಲಿ ದಲಿತರ ಸಂಕಷ್ಟದ ಕರುಣಾಜನಕ ಕಥೆಯನ್ನು ಬರೆದಿದ್ದಾರೆ, ಶ್ರೇಣೀಕೃತ ಜಾತಿ ವ್ಯವಸ್ಥೆ ತೊಡೆದು ಹಾಕಲು ನಡೆದ ಹೋರಾಟ ಇತಿಹಾಸದ ಪುಟ ಸೇರಿದೆ, ಅಲ್ಲಿನಿಂದ ಈ ವರೆಗೆ ಎಲ್ಲದೆ ಈ ವಿಜಯೋತ್ಸವ ನಡೆಯುತ್ತಿದ್ದು ಹಾಸನದಲ್ಲಿ ಕೂಡ ಆಯೋಜನೆಗೊಂಡಿರುವುದ್ದು ಹೆಮ್ಮೆಯ ವಿಚಾರ. ಬಾಬಾಸಾಹೇಬರ ಆಲೋಚನೆಯಂತೆ ವಿಶ್ವಕ್ಕೆ ಶಾಂತಿ ಸಂದೇಶ ಸಾರುವ ಬೌದ್ಧ ಧರ್ಮದ ಬಗ್ಗೆ ಮಾತನಾಡುವ ಜನಪ್ರತಿನಿಧಿಗಳು ಬುದ್ಧ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಣೆ ಮಾಡಲು ವಿಳಂಬ ಮಾಡಿ ಕಳೆದ ವರ್ಷದಿಂದ ಸರ್ಕಾರಿ ಕಾರ್ಯಕ್ರಮವಾಗಿ ಆಚರಣೆ ಮಾಡುತ್ತಿರುವುದು ಶ್ಲಾಘನೀಯ ಎಂದು ಮಾಜಿ ಡಿಸಿಪಿ ಸಿದ್ದರಾಜು ತಿಳಿಸಿದರು.





