ಎಲ್ಲಾ ಬಗೆಯ ಕೃಷಿಕರ ತವರೂರು ಹಾಸನ: ಶಾಸಕ ಹೆಚ್ ಕೆ ಸುರೇಶ್

Date:

ಹಾಸನ ಜಿಲ್ಲೆ, ಬೇಲೂರು ತಾಲ್ಲೂಕು ಹಳೇಬೀಡಿನ ಶ್ರೀಕ್ಷೇತ್ರ ಪುಷ್ಪಗಿರಿಯಲ್ಲಿ ನಡೆಯುತ್ತಿರುವ ‘ಪದ್ಮಶ್ರೀ ಸುಭಾಷ್ ಪಾಳೇಕರ್ ಕೃಷಿ ಪದ್ಧತಿ’ ಕಾರ್ಯಾಗಾರದಲ್ಲಿ ಶಾಸಕರಾದ ಹೆಚ್ ಕೆ ಸುರೇಶ್ ಮಾತನಾಡಿ, ‘ಹಾಸನ ಜಿಲ್ಲೆ ಎಲ್ಲಾ ಬಗೆಯ ಕೃಷಿಕರನ್ನು ಹೊಂದಿರುವ ತವರೂರು’ ಎಂದು ಬಣ್ಣಿಸಿದರು.

ಹಾಸನ ಜಿಲ್ಲೆಯಲ್ಲಿ, ಕಾಫಿ, ಮೆಣಸು, ಏಲಕ್ಕಿ, ಶುಂಠಿ, ತಂಬಾಕು, ಮೆಕ್ಕೆ ಜೋಳ, ಆಲೂಗೆಡ್ಡೆ, ಶೇಂಗಾ, ಹತ್ತಿ, ಸೂರ್ಯಕಾಂತಿ ಹೀಗೆ ಎಲ್ಲಾ ಬಗೆಯ ಕೃಷಿ ಮಾಡುವ, ಕೃಷಿಕರನ್ನು ಕಾಣಬಹುದು. ಅದರಲ್ಲೂ, ಜಿಲ್ಲೆ ಆಹಾರ ಪದಾರ್ಥ ಬೆಳೆಯುವಲ್ಲಿ ಮುಂದಿದೆ. ಬೇಲೂರು ಆಲೂಗೆಡ್ಡೆಗೆ ಖ್ಯಾತಿ ಹೊಂದಿದೆ. ಒಂದೊಂದು ತಾಲ್ಲೂಕು ಸಹ ಬೇರೆ ಬೇರೆ ಬೆಳೆಗಳಿಗೆ ಹೊಂದಿಕೊಂಡಿರುವ ಪರಿಸರ. ಎಲ್ಲಾ ಮಾದರಿ ಕೃಷಿಯನ್ನ ಇದೊಂದೇ ಜಿಲ್ಲೆಯಲ್ಲಿ ಕಾಣಬಹುದು.

ಪುಷ್ಪಗಿರಿ ಸಂಸ್ಥಾನ ಮಠದಲ್ಲಿ ರೈತರಿಗೆ ನೈಸರ್ಗಿಕ ಕೃಷಿ ತರಬೇತಿ ನೀಡುವ ಕಾರ್ಯಗಾರ ಅಭಿನಂದನಾರ್ಹ. ಸ್ವತಃ ಕೃಷಿಯನ್ನ ಕೈಗೊಳ್ಳುವ ಶ್ರೀಗಳ ನೇತೃತ್ವಕ್ಕೆ ಅಭಾರಿ. ನಾಲ್ಕು ದಿನಗಳ ಶಿಬಿರಕ್ಕೆ ಸಹಕರಿಸಿ, ಎಲ್ಲಾ ನೆರವು ನೀಡುತ್ತಿರುವುದು ಸಂತಸ. ಜೊತೆಗೆ ನಮ್ಮ ತಾಲ್ಲೂಕಿನಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಷಯ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ರೈತ ಹೋರಾಟಕ್ಕೆ ತನ್ನದೇ ಆದ ಕೊಡುಗೆ ನೀಡಿದವರು ಪ್ರೊ ನಂಜುಂಡಸ್ವಾಮಿ. ರಾಜ್ಯದಲ್ಲಿ ಸಂಚಲನ ಮೂಡಿಸಿ ಸಂಘಟನೆಯ ಮೂಲಕ ಆಂದೋಲನದ ಗತಿಯನ್ನೇ ಬದಲಾಯಿಸದರು. ಮುಂದಿನ ಪೀಳಿಗೆಗೆ ಕೃಷಿಯನ್ನ ಉಳಿಸಿ, ಅರಿವು ಮೂಡಿಸುವ ಕೆಲಸ ಜರೂರಿರುವಾಗ ಕಾರ್ಯಾಗಾರ ನಡೆಸುತ್ತಿರುವುದು, ಅದರಲ್ಲೂ, ಪದ್ಮಶ್ರೀ ಸುಭಾಷ್ ಪಾಳೇಕರ್ ಅವರ ನೇತೃವದಲ್ಲಿ ನಡೆಯುತ್ತಿರುವುದು ಸಮಂಜಸ.

ಕೃಷಿಯಲ್ಲಿ ಗೊಬ್ಬರ, ರಾಸಾಯನಿಕ ಬಳಸುವುದನ್ನು ತಪ್ಪಿಸಬೇಕಿದೆ. ಆರೋಗ್ಯ ಸುಧಾರಿಸಲು, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಬೇಕಿದೆ. ತರಬೇತಿಯ ಜೊತೆಗೆ ಅಭಿವೃದ್ಧಿ ಪಡಿಸುವುದು ಮುಖ್ಯ. ಕೃಷಿಯಲ್ಲಿ ಅಳವಡಿಸಿಕೊಂಡು ಮಾದರಿಯಾಗುವುದು ಅಗತ್ಯವಿದೆ ಎಂದರು.

ಹಿರಿಯ ಮುಖಂಡರಾದ ಹೊನ್ನೂರು ಪ್ರಕಾಶ್ ಮಾತನಾಡಿ, “ರೈತರ ಭೂಮಿಗಳನ್ನು ಕಸಿದುಕೊಂಡು ಕಾರ್ಪೋರೆಟ್ ಕುಳಗಳಿಗೆ ನೀಡುವ ಹುನ್ನಾರವನ್ನು ಸರ್ಕಾರಗಳು ನಡೆಸುತ್ತಿವೆ. ನಮ್ಮ ಭೂಮಿ, ನಮ್ಮ ಪರಿಸರ ಉಳಿಸಿಕೊಳ್ಳುವುದು ನಮ್ಮೆಲ್ಲರ ಹಕ್ಕು. ರೈತರು ಆಳುವ ವರ್ಗಗಳಿಗೆ ಭಾಗದೆ ತಮ್ಮ ತನ ಉಳಿಸಿಕೊಳ್ಳಲು ಮುಂದಾಗಬೇಕು. ನಾಟಿ ಬೀಜ ಉಳಿಸಿಕೊಳ್ಳಲು. ಬೀಜ ಕಾಯ್ದೆ ವಿರುದ್ಧ ಹೋರಾಟ ನಡೆಸಬೇಕು”.

ರೈತರು ಬೆಳೆದ ಬೆಳೆಯನ್ನು ಮೌಲ್ಯವರ್ಧನೆ ಮಾಡುವ ಮೂಲಕ ಮಾರುಕಟ್ಟೆ ಸೃಷ್ಟಿಸಬೇಕು. ಕಚ್ಚಾ ಪದಾರ್ಥ ಮಾರಾಟದಿಂದ ಲಾಭ ಕಾಣಲು ಸಾಧ್ಯವಿಲ್ಲ. ಮಾರುಕಟ್ಟೆ ಸೃಷ್ಟಿಸುವ ಮೂಲಕ ರೈತರಿಗೆ ಲಾಭಧಾಯಕ ವಾತಾವರಣ ಸೃಷ್ಟಿ ಮಾಡಬೇಕು. ತನ್ನ ಮನೆಗೆ ಬೇಕಾದುದನ್ನು ಬೆಳೆದುಕೊಳ್ಳುವಂತೆ ಆಗಬೇಕು, ಇದರ ಜೊತೆಗೆ ಸ್ವಾವಲಂಬಿ ಆಗುವ ಮೂಲಕ ರೈತರ ಜೀವನ ಸುಧಾರಿಸುವ ಕೆಲಸ ಆಗಬೇಕಿದೆ.

ಈ ಸುದ್ದಿ ಓದಿದ್ದೀರಾ? ಕೃಷಿ ಕೇವಲ ಓದಲ್ಲ, ಅದುವೇ ಅನುಭವಗಳ ಬುತ್ತಿ: ಜಿಲ್ಲಾಧಿಕಾರಿ ಲತಾಕುಮಾರಿ

ಈ ಎಲ್ಲದರ ನಿಟ್ಟಿನಲ್ಲಿ ನೈಸರ್ಗಿಕ ಕೃಷಿ ಕೈಗೊಳ್ಳುವುದು ಪರ್ಯಾಯ ಮಾರ್ಗ. ಯುವ ಜನತೆ ಕೃಷಿ ಬಿಟ್ಟರೆ ಕಾರ್ಪೋರೆಟ್ ಕುಳಗಳ ಪಾಲಾಗಲಿದೆ ಕೃಷಿ ಭೂಮಿ. ಕೃಷಿಯಲ್ಲಿ ಏಕ ಬೆಳೆ ಆಧಾರಿತವಾಗಿ ಇರದೆ, ಬಹು ಬೆಳೆ ಆಧಾರಿತವಾಗಿ ನಡೆಸಬೇಕು. ಅದರಲ್ಲೂ, ನೆರೆಹೊರೆಯವರ ಆಹಾರದ ಮೂಲವಾಗಿಯೂ ಪರಿವರ್ತನೆ ಹೊಂದಬೇಕಿದೆ. ರೈತ ಯುವಕರಿಗೆ ಹೆಣ್ಣು ಕೊಡಲ್ಲ ಎನ್ನುವ ಅಪವಾದವನ್ನು ತೊಡೆಯುವ ನಿಟ್ಟಿನಲ್ಲಿ ಮುಂದಾಗಿ, ಆರ್ಥಿಕವಾಗಿ ಶಕ್ತಿ ವೃದ್ಧಿಪಡಿಸಿಕೊಳ್ಳಬೇಕಿದೆ.

ಕಾರ್ಯಾಗಾರದ ಲೈವ್ ವೀಕ್ಷಿಸಿ: https://www.youtube.com/live/EdQWnDCPRWI?si=ZUefcWFEBE2ಸಂನ್ಸ್ಲಕ್

ರಾಸಾಯನಿಕ ಕೃಷಿಯಿಂದ ಭೂಮಿ ಹಾಳಾಗಿದೆ, ತಿನ್ನುವ ಆಹಾರ ವಿಷವಾಗಿದೆ, ಅಂತರ್ಜಲ ಕುಸಿದಿದೆ ಇದರಿಂದಾಗಿ, ರೈತ ಸಂಸ್ಕೃತಿ ಕೆಡಲಿದೆ. ಭೂಮಿ, ಪರಿಸರ ಉಳಿಸಬೇಕಾದ ಜವಾಬ್ದಾರಿ ನಮ್ಮಗಳ ಮೇಲಿದೆ. ಒಳ್ಳೆಯ ಆಹಾರ ಬೆಳೆದುಕೊಡುವ ಹೊಣೆಗಾರಿಕೆ ನಮ್ಮೆಲ್ಲರದ್ದು. ಸಮಾಜದ ಸ್ವಾಸ್ತ್ಯ ಕಾಪಾಡಲು ಆರೋಗ್ಯಕರ ಕೃಷಿ ಪದ್ಧತಿ ಕೈಗೊಳ್ಳಬೇಕು. ಸರ್ಕಾರದ ಮೇಲೆ ಎಲ್ಲದಕ್ಕೂ ಅವಲಂಬನೆ ಆಗದೆ, ಪ್ರಶ್ನೆ ಮಾಡುವುದರ ಜೊತೆಗೆ ನಮ್ಮಗಳ ಕಾಯಕ ಮಾಡುವುದು ಅತ್ಯಗತ್ಯ ಎಂದು ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...