ಹಾಸನ ನಗರದಲ್ಲಿ ಜೆಡಿಎಸ್ ಜನತಾ ಸಮಾವೇಶ ಹಾಗೂ 25ನೇ ವರ್ಷದ ರಜತಾ ಮಹೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಶನಿವಾರ ಆಯೋಜಿಸಲಾಯಿತು.
‘ಜಿಲ್ಲೆಯ ಮಣ್ಣಿನ ಮಗನಾಗಿ ನಿಂತು ರಾಜ್ಯದ ಪ್ರಗತಿ ಪರ ಚಿಂತನೆಯೊಂದಿಗೆ ಅಭಿವೃದ್ದಿ ಕೆಲಸ ಮಾಡಿದ್ದೇನೆ. ಕಾಂಗ್ರೆಸ್ ಸರ್ಕಾರದ್ದು ಕೇವಲ ಆಶ್ವಾಸನೆ, ಯಾವ ಗ್ಯಾರಂಟಿ ಯೋಜನೆ ಎಂದುಕೊಂಡು ಜನರಿಗೆ ನಾಮ ಹಾಕುವ ಕೆಲಸ ಅವರದ್ದು, ಹಾಗೂ ಕಾಂಗ್ರೆಸ್ ನಿಂದ ಜಿಲ್ಲೆಗೆ ಮಾತ್ರವಲ್ಲ ರಾಜ್ಯಕ್ಕೂ ಯಾವುದೇ ಅಭಿವೃದ್ದಿ ಕಾರ್ಯವಾಗಿಲ್ಲ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಜನತಾ ಸಮಾವೇಶದಲ್ಲಿ ಮಾತಾಡಿದರು.
ಕಾಂಗ್ರೆಸ್ ಸಮಾವೇಶದಲ್ಲಿ ಜಿಲ್ಲೆಗೆ ಜೆಡಿಎಸ್ ಕೊಡಿಗೆ ಏನು ಎಂಬ ಪ್ರಶ್ನೆ ಮಾಡಿದ್ದಾರೆ. ಹಾಸನ ಲೋಕಸಭಾ ಸದಸ್ಯ ಕೂಡ ಇದೆ ಪ್ರಶ್ನೆಯನ್ನು ಹಾಕಿದ್ದಾರೆ, 1989 ರಲ್ಲಿ ಎಂಪಿ ಚುನಾವಣೆಯಲ್ಲಿನ ದೇವೇಗೌಡರ ಸೋಲು ಕುತಂತ್ರದಿಂದ ನಡೆದಿದ್ದು ಎಂಬುದು ಬಹಳ ಜನರಿಗೆ ಗೊತ್ತಿಲ್ಲ. ಕಾವೇರಿ ನದಿ ನೀರಿಗಾಗಿ ಹೋರಾಟ ಮಾಡಿದ ಯಾರಾದರೂ ಜನಾನಯಹ ಇದ್ದರೆ ಅದು ಎಚ್ಡಿ ದೇವೇಗೌಡರು ಮಾತ್ರ, ಅವರ ಬಗ್ಗೆ ಅಪಪ್ರಚಾರ ಇಂದಿಗೂ ನಡೆಯುತ್ತಿದ್ದು ಜನರು ಅವರ ಕೊಡುಗೆ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲಿ ದೇವೇಗೌಡರ ಸಲಹೆ ಪಡೆಯಲು ಸಭಾಪತಿಗಳಿಗೆ ಮನವಿ ಮಾಡಿದ್ದೇನೆ, ಹಲವು ರೈತರ ಆತ್ಮಹತ್ಯೆ ಆಗಿವೆ, ರಾಜ್ಯದಲ್ಲಿ ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ ಆದರೆ ಆಡಳಿತಾರೂಢ ಕಾಂಗ್ರೆಸ್ ಗೆ ಈ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ , ಮೆಕ್ಕೆಜೋಳ, ತೊಗರಿ, ಸೇರಿದಂತೆ ರಾಜ್ಯದ ವಿವಿಧ ಬೆಳೆಗಳಿಗೆ ಬೆಲೆ ಇಲ್ಲ ಸರಿಯಾದ ಸಮಯಕ್ಕೆ ಖರೀದಿ ಕೇಂದ್ರ ತೆರೆದು ಎಂಎಸ್ಪಿ ದರದಲ್ಲಿ ಖರೀದಿ ಮಾಡುವ ಬದಲಾಗಿ ರೈತರಿಗೆ ವಂಚನೆ ಮಾಡುವ ಕೆಲಸ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿದ್ದೀರಾ?ಹಾಸನ | ಜಿಲ್ಲೆಯ ಪ್ರತಿ ಕುಟುಂಬಕ್ಕೆ ಆರ್ಥಿಕ ಶಕ್ತಿ ಇರಲಿ; ಹೆಚ್.ಡಿ ದೇವೇಗೌಡ
ಇತ್ತೀಚಿಗೆ ರಾಜ್ಯದ ವಿವಿಧೆಡೆ ನನ್ನನ್ನು ಮುಖ್ಯಂತ್ರಿ ಮಾಡಬೇಕು ಎಂಬ ಆಸೆ ಇಟ್ಟುಕೊಂಡಿದ್ದಾರೆ, ಆದರೆ ನನಗೆ ನಾನು ಮುಖ್ಯಮಂತ್ರಿ ಆಗುವುದಕ್ಕಿಂತ ಹೆಚ್ಚ್ಚಾಗಿ ರಾಜ್ಯದ ಹಿತ ಮುಖ್ಯ.ರಾಜ್ಯ ಉತ್ತಮ ಸ್ಥಿತಿಗೆ ಬರಬೇಕಾದರೆ ಜಾತಿ ತಾರತಮ್ಯ ಬಿಡಬೇಕು, ನನಗೇ ಜನ್ಮಕೊಟ್ಟ ಹಾಗೂ ರಾಜಕೀಯವಾಗಿ ಭವಿಷ್ಯ ಕೊಟ್ಟ ಪುಣ್ಯ ಭೂಮಿ ಹಾಸನ ಜಿಲ್ಲೆ, ಈ ಜಿಲ್ಲೆಗೆ ಬದುಕಿರುವ ಅವದಿರಲ್ಲೇ ಜಿಲ್ಲೆಯ ಜನರಿಗೆ ಗೌರವ ತಂದು ಕೊಡುವ ಕೆಲಸ ಮಾಡುತ್ತೇನೆ. ರಾಜ್ಯದ ಅಧಿಕಾರಿಗಳು ಕಾನೂನು ಬಿಟ್ಟು ಕೆಲಸ ಮಾಡಬೇಡಿ ಎಂದು ತಿಳಿಸಿದರು.





