ಎರಡುಕಿಡ್ನಿಗಳ ವೈಪಲ್ಯದಿಂದ ಬಳುತ್ತಿರುವ ಮಗನಿಗೆ ಕಿಡ್ನಿ ಶಸ್ತ್ರಚಿಕಿತ್ಸೆಗೆ ಸುಮಾರು 20 ರಿಂದ 30 ಲಕ್ಷ ರೂ. ಗಳ ಅಗತ್ಯವಿದ್ದು ಆರ್ಥಿಕ ನೆರವು ನೀಡುವಂತೆ ತಾಯಿ ಜ್ಯೋತಿ ಮನವಿ ಮಾಡಿದರು.
ಹಾಸನ ತಾಲೂಕಿನ ರಾಯರಕೊಪ್ಪಲಿನ ಮಗ್ಗೆ ಗ್ರಾಮದವರಾಗಿದ್ದು, ಹಿರಿಮಗ 27 ವರ್ಷದ ವಿಶ್ವಾಸ್ ಎಂಬಾತನಿಗೆ ಕಳೆದ ಒಂದು ತಿಂಗಳಿನಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ. ಹುಟ್ಟಿದಾಗಿನಿಂದ ಒಂದು ಕಿಡ್ನಿಯ ಬೆಳೆವಣಿಗೆಯಾಗದೆ ಕೇವಲ ಒಂದು ಕಿಡ್ನಿಯಲ್ಲಿ ಜೀವನ ನಡೆಸುತ್ತಿದ್ದಾನೆ ಆದರೇ ಇದೀಗ ಎರಡು ಕಿಡ್ನಿಯು ವೈಫಲ್ಯವಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಸಂದೇಶ: ಆರೋಪಿ ಬಂಧನ; ಶಾಸಕಿ ಪ್ರತಿಕ್ರಿಯೆ
ವಾರದಲ್ಲಿ ಎರಡು ಬಾರಿ ಡಯಾಲಿಸಿಸ್ ಮಾಡಲಾಗುತ್ತಿದ್ದು ಸುಮಾರು 2 ಲಕ್ಷ ರೂ ಖರ್ಚಾಗಿದೆ. ಆರ್ಥಿಕವಾಗಿ ಬಡವರಾಗಿದ್ದು, ರಸ್ತೆ ಬದಿಯಲ್ಲಿ ಮೊಬೈಲ್ ಕ್ಯಾಂಟಿನ್ ನಡೆಸಿಕೊಂಡು ಜೀವನ ನಡೆಸುತ್ತಿದ್ದೇವೆ ಎಂದರು. ಶಸ್ತ್ರಚಿಕಿತ್ಸೆಗೆ ಸುಮಾರು20 ರಿಂದ 30 ಲಕ್ಷ ರೂ ಅಗತ್ಯವಿದ್ದು, ದಾನಿಗಳು ಸಹಾಯ ಮಾಡುವಂತೆ ಮನವಿ ಮಾಡಿದರು. ಗೂಗಲ್ ಪೇ. ಫೋನ್ ಪೇ ಮಾಡುವವರು 9100794372 ಸಹಕರಿಸಬಹುದು





