ಜಾನುವಾರು ಕಳ್ಳತನ ವಿಚಾರ ಬಾಯ್ದಿಡುತ್ತಾನೆಂದು ಆಪ್ತ ಸ್ನೇಹಿತನನ್ನೇ ಕೊಂದ ಆರೋಪಿಗಳ ಬಂಧಿಸಬೇಕೆಂದು ಆಗ್ರಹಿಸಿ, ಮಂಗಳವಾರ ಹಾಸನ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಹರಳಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ.
ಹರಳಹಳ್ಳಿ ಗ್ರಾಮದ ಶಿವಕುಮಾರ್ (34) ಮೃತ. ಅದೇ ಗ್ರಾಮದ ಪ್ರದೀಪ್ ಹಾಗೂ ಶರತ್ ಕೊಲೆ ಆರೋಪಿಗಳು. ಮೃತ ಶಿವಕುಮಾರ್ ಗೆ ಕಂಠ ಪೂರ್ತಿ ಕುಡಿಸಿ ಗುಂಡ್ಯ ಬಳಿ ವಾರದ ಹಿಂದೆ ಪ್ರಪಾತಕ್ಕೆ ಶವ ಎಸೆದಿದ್ದರು. ಈ ಸಂಬಂಧ ದೂರು ದಾಖಲಾಗಿದ್ದರೂ ಆರೋಪಿಗಳನ್ನು ಬಂಧಿಸಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿದ್ದೀರಾ?ಹಾಸನ l ಜಿಲ್ಲೆಯ ಅಭಿವೃದ್ಧಿ ಮಾಡಿಯೇ, ರಾಜಕೀಯಕ್ಕೆ ನಿವೃತ್ತಿ ಪಡೆಯುವೆ; ಶಾಸಕ ಹೆಚ್ ಡಿ ರೇವಣ್ಣ
ಈ ವೇಳೆ ಡಿವೈಎಸ್ಪಿ ಮುರುಳಿಧರ್, ಸಿಪಿಐಗಳಾದ ಮಂಜುನಾಥ್, ಮೋಹನ್ ಕೃಷ್ಣ ಪ್ರತಿಭಟನಾಕಾರರ ಮನವೊಲಿಸಲು ಹರಸಾಹಸ ಪಟ್ಟಿದ್ದರು.





