ಹಾಸನ ನಗರದ ವಿದ್ಯಾನಗರದಲ್ಲಿ ನಟ ಯಶ್ ತಾಯಿ ಪುಷ್ಪಾ ಅವರಿಗೆ ಸೇರಿದ್ದು ಎನ್ನಲಾದ ಕಾಂಪೌಂಡ್ ತೆರವು ಪ್ರಕರಣ ಹಾಸನದ ಜೆಎಂಎಫ್ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ.
ಫೆ. 16ರಂದು ತೀರ್ಪು ಹಾಗೂ ಅನುಷ್ಠಾನದಂತೆ ಈ ಅರ್ಜಿಯನ್ನು ವಿಲೇವಾರಿ ಮಾಡುವವರೆಗೆ ಯಾವುದೇ ಪ್ರಕ್ರಿಯೆ ಮುಂದುವರಿಸುವಂತಿಲ್ಲ ಎಂದು ಹೇಳಿದೆ. ಅರ್ಜಿದಾರರು ಆಸ್ತಿಯ ಸ್ವರೂಪವನ್ನು ಪರಭಾರೆ ಮಾಡುವುದರಿಂದ ಅಥವಾ ಬದಲಾಯಿಸುವುದರಿಂದ ನಿರ್ಬಂಧಿಸಲಾಗಿದೆ ಎಂದು ತಾಕೀತು ಮಾಡಿದೆ. ಹಾಗೆಯೇ ಸದರಿ ಅರ್ಜಿ ವಿಲೇವಾರಿಯನ್ನು ತ್ವರಿತಗೊಳಿಸಲು ನಿರ್ದೇಶನ ನೀಡಿದೆ.
ಇದನ್ನೂ ಓದಿದ್ದೀರಾ?ಹಾಸನ ಮಣ್ಣಿನ ಹೆಣ್ಣು ಬೇರುಗಳು | ಹಗರೆಯ ಮೂವರು ಮೌಖಿಕ ಕಥೆಗಾರ್ತಿಯರು…
ವಿವಾದಿತ ಜಾಗವನ್ನು ಅರ್ಜಿದಾರರಾದ ಪುಷ್ಪಾ ಹಾಗೂ ದೇವರಾಜು, ಬಾಡಿಗೆಗೆ, ಅಥವಾ ಕ್ರಯಕ್ಕೆ ಕೊಡುವಂತಿಲ್ಲ, ಆಸ್ತಿಯ ಸ್ವರೂಪವನ್ನು ಬದಲಾಯಿಸುವಂತಿಲ್ಲ ಎಂದು ನಿರ್ಬಂಧ ಮುಂದಿನ ಆದೇಶದವರೆಗೂ ಇದನ್ನೇ ಕಾಯ್ದುಕೊಳ್ಳಬೇಕು ಎಂದು ಸ್ಪಷ್ಟ ಸೂಚನೆ ನೀಡಿ, ಅರ್ಜಿದಾರರು ಮಿತಿ ಕಾಯ್ದೆಯ ಸೆಕ್ಷನ್ 5 ಮತ್ತು ಸಿಪಿಸಿ ಸೆಕ್ಷನ್ 151 ರ ಅಡಿಯಲ್ಲಿ ಸಲ್ಲಿಸಿದ್ದ ಐಎ ನಂ1 ಮತ್ತು 2 ರಲ್ಲಿನ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಹಾಗೆಯೇ ವಿವಿಧ ಅರ್ಜಿಗಳನ್ನು ಸಲ್ಲಿಸುವಲ್ಲಿನ ವಿಳಂಬವನ್ನೂ ಕ್ಷಮಿಸಲಾಗಿದೆ ಎಂದು ತಿಳಿಸಲಾಗಿದೆ





