ಹಾಸನ | ವರ್ಷಾಂತ್ಯದ ವೇಳೆಗೆ 2 ಲಕ್ಷ ಮಂದಿಗೆ ಭೂಮಿ ಮಂಜೂರು ಗುರಿ: ಸಚಿವ ಕೃಷ್ಣ ಬೈರೇಗೌಡ

Date:

ಈ ವರ್ಷಾಂತ್ಯದ ವೇಳೆಗೆ ರಾಜ್ಯದಲ್ಲಿ 2 ಲಕ್ಷ ದರಕಾಸ್ತು ಪೋಡಿ ಸರ್ವೆ ಕಾರ್ಯ ಪೂರ್ಣಗೊಳಿಸಿ ಭೂಮಿ ಮಂಜೂರುದಾರರಿಗೆ ವಿತರಿಸಲಾಗುವುದು ಎಂದು ಕಂದಾಯ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ರಾಜ್ಯದಲ್ಲಿ ಭೂಮಿ ಮಂಜೂರಾಗಿರುವ ಸುಮಾರು 3 ಲಕ್ಷ ಕುಟುಂಬಗಳಿಗೆ ಜಮೀನು ಸಾಗುವಳಿ ಚೀಟಿ, ಆರ್‌ಟಿಸಿ ಇದೆ. ಆದರೆ, ಪೋಡಿ ಆಗಿಲ್ಲ, ಸರ್ವೆ ಆಗಿಲ್ಲ. ಇಂದರಿಂದ ಅಂತಹ ಕುಟುಂಬಗಳು ಜಮೀನನ್ನು ಭಾಗ ಮಾಡಿಕೊಳ್ಳಲು, ಮಾರಾಟ ಮಾಡಲು ಹಕ್ಕು ಇರಲಿಲ್ಲ. ಇದಕ್ಕಾಗಿ ಪೋಡಿ ಮಾಡಿಸಿಕೊಳ್ಳಲು ಬಡ ಜನರು ತಾಲೂಕು ಅಥವಾ ಸರ್ವೆ ಕಚೇರಿಗೆ ಅಲೆಯೋದು ನಡೆಯುತ್ತಿದೆ. ಕೆಲವರು ಮಧ್ಯವರ್ತಿಗಳ ಧನದಾಹಕ್ಕೆ ಬಲಿಯಾಗುತ್ತಿದ್ದಾರೆ” ಎಂದು ಬೇಸರ ಹೊರ ಹಾಕಿದರು.

“ಇದನ್ನು ಸರ್ಕಾರ ಮನಗಂಡು ಪೋಡಿ ನಿಯಮಗಳನ್ನು ಸರಳೀಕರಣ ಮಾಡಲಾಗಿದೆ. ಅಗತ್ಯ ದಾಖಲೆಗಳನ್ನು 5-3ಕ್ಕೆ ಇಳಿಸಿ, ಎಲ್ಲ ದಾಖಲೆಗಣನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ. ಇದಕ್ಕಾಗಿ ಯಾರೂ ಅರ್ಜಿ ಹಾಕೋದು ಬೇಡ. ನಾವೇ ಸರ್ವೆ ಮಾಡಿ, ಬಾಕಿ ಇರುವ ದಾಖಲೆ ಟ್ರ್ಯಾಕಿಂಗ್ ಮಾಡಲಾಗುತ್ತದೆ. ಭೂಮಿ ದರಕಾಸ್ತು ಪೋಡಿ ಮಾಡಲು ಈವರೆಗೆ 2.51 ಲಕ್ಷ ಭೂ ಮಂಜೂರಿದಾರರನ್ನು ಗುರುತಿಸಲಾಗಿದೆ. ಈ ಪೈಕಿ 1.41 ಲಕ್ಷ ಸ.ನಂ.ಗಳಲ್ಲಿ, 73,300 ರೈತರಲ್ಲಿ 1-5 ದಾಖಲೆ ಇವೆ. 67 ಸಾವಿರ ಪ್ರಕರಣಗಳಲ್ಲಿ 1-5 ದಾಖಲೆ ಹೊಂದಿಸುವುದು ಬಾಕಿ ಇದೆ. ಮುಂದಿನ 4 ತಿಂಗಳೊಗಳಗೆ ಈ ಕಾರ್ಯ ಪೂರ್ಣಗೊಳಿಸುವ ಗುರಿ ಇದೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ನಿಯಮದ ಪ್ರಕಾರ 1.17 ಲಕ್ಷ ಪ್ರಕರಣಗಳ ಸರ್ವೆ ಮುಗಿದಿದ್ದು, 1.27 ಲಕ್ಷ ಕಡತ ಮಿಸ್ಸಿಂಗ್ ಸಮಿತಿಗೆ ಹೋಗಿದೆ. ಕನಿಷ್ಟ ಮೂರು ದಾಖಲೆಯೂ ಇಲ್ಲದ ಕೇಸ್‌ಗಳಲ್ಲಿ 2 ದಾಖಲೆ ಇದ್ರೆ ಪೋಡಿ ಮಾಡಿ ಅನುಮತಿ ಕೊಡಿ ಎಂದು ಎಲ್ಲ ಡಿಸಿಗಳಿಗೆ ಸೂಚಿಸಲಾಗಿದೆ. ಡಿಸೆಂಬರ್ ವೇಲೆ 2 ಲಕ್ಷ ಪೋಡಿಗಳನ್ನು ವಿತರಿಸಲಾಗುವುದು” ಎಂದು ಘೋಷಿಸಿದರು.

“2012-18ರವರೆಗೆ 5800 ಪೋಡಿ ಮಾಡಲಾಗಿತ್ತು. 2018-2023 ರವರೆಗ ಅದು 8005ಕ್ಕೆ ಏರಿದೆ. ಇದೀಗ 2 ವರ್ಷದಲ್ಲಿ 2 ಲಕ್ಷ ಮಂಜೂರಿದಾರರಿಗೆ ಪೋಡಿ ವಿತರಿಸಲು ಮುಂದಾಗಿದ್ದೇವೆ. ಕಳೆದ 2 ವರ್ಷಗಳಲ್ಲಿ ಕಂದಾಯ ಇಲಾಖೆಯಲ್ಲಿ ನಿರಂತರ ಬದಲಾವಣೆ ತರಲಾಗಿದೆ. ಜನರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು, ಮಧ್ಯವರ್ತಿಗಳ ಶೋಷಣೆ ತಡೆಯಲು ರಾಜ್ಯದ ತಹಸೀಲ್ದಾರ್ ಮತ್ತು ಎಸಿ ಕೋರ್ಟ್‌ಗಳಲ್ಲಿ ವರ್ಷಾನುಗಟ್ಟಲೆ ವಿಲೆ ಆಗದೇ ಉಳಿದಿದ್ದ 10,774 ಅವಧಿ ಮೀರಿದ ಪ್ರಕರಣಗಳಲ್ಲಿ ಭೂ ನ್ಯಾಯ ವಿಲೇವಾರಿ ಆಂದೋಲನ ನಡೆಸಿ ಜೂನ್ ಅಂತ್ಯಕ್ಕೆ 10,358 ಪ್ರಕರಣ ಇತ್ಯರ್ಥಗೊಳಿಸಲಾಗಿದ್ದು, 416 ಬಾಕಿ ಇವೆ” ಎಂದರು.

“ಹಾಗೆಯೇ ಎಸಿ ಕೋರ್ಟ್‌ಗಳಲ್ಲಿ ಅವಧಿ ಮೀರಿದ 62,857 ಪ್ರಕರಣ ಇದ್ದವು. ಇವುಗಳಲ್ಲೀಗ 18,166 ಕೇಸ್ ಬಾಕಿ ಇವೆ. 1 ವರ್ಷ ಮೀರಿದ್ದ 59,339 ಪ್ರಕರಣಗಳಲ್ಲಿ 14,652 ಹಾಗೂ 5 ವರ್ಷ ತುಂಬಿದ್ದ 32,797 ಪ್ರಕರಣಗಳಲ್ಲಿ ಕೇವಲ 4601 ಬಾಕಿ ಇವೆ. ಇದರಿಂದ ಜನರಿಗೆ ರಿಲೀಫ್ ಸಿಕ್ಕಿದೆ ಅನ್ನೋ ತೃಪ್ತಿ ನಮ್ಮದು” ಎಂದರು.

ಇದನ್ನೂ ಓದಿ: ಹಾಸನ | ಆರೋಗ್ಯ, ಶಿಕ್ಷಣಕ್ಕಾಗಿ ಹೋರಾಟ ಮಾಡಬೇಕಾದಂತಹ ದುಃಸ್ಥಿತಿ ಬಂದೊದಗಿದೆ: ಸಿಐಟಿಯು ಧರ್ಮೇಶ್

“ತಾಲೂಕು ಕಚೇರಿಗಳಲ್ಲಿ ನಕಲಿ ದಾಖಲಿ ಸೃಷ್ಟಿ ದಂಧೆ, ಸಮಾಜಕ್ಕೆ ಹಾನಿಯಾಗುವ ರೀತಿಯಲ್ಲಿ ನಡೆದಿದೆ. ಎಷ್ಟೋ ದಾಖಲೆ ಕಳೆದು ಹೋಗಿ ಜನರಿಗೆ ತೊಂದರೆ ಆಗುತ್ತಿದೆ. ಹೀಗಾಗಿ ಕಾಣೆಯಾಗಿರುವ ಶಿಥಿಲೀಕರಣಗೊಂಡಿರುವ, ಮಿಸ್ ಪ್ಲೇಸ್ ಆಗಿರುವ ಸುಮಾರು ಭೂ ದಾಖಲೆ ಸುರಕ್ಷಾ ಯೋಜನೆಯಡಿ 100 ಕೋಟಿ ಪುಟಗಳ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡುವ ಕಾರ್ಯ ಆರಂಭಿಸಲಾಗಿದೆ. ಈಗಾಗಲೇ ಸುಮಾರು 36 ಕೋಟಿ ಪುಟ ಸ್ಕ್ಯಾನಿಂಗ್ ಮಾಡಲಾಗಿದ್ದು, ಎಲ್ಲ ಪೂರ್ಣಗೊಂಡರೆ ಫೋರ್ಜರಿ ದಾಖಲೆ ಸೃಷ್ಟಿ ನಡೆಯಲ್ಲ. ರೈತರು ಇದ್ದಲ್ಲಿಯೇ ಫಿಂಗರ್ ಟಿಪ್ಸ್ ಮೂಲಕ ಆನ್‌ಲೈನ್‌ನಲ್ಲಿ ಪ್ರಮಾಣೀಕೃತ ಭೂ ದಾಖಲೆ ಪಡೆಯಬಹುದು” ಎಂದರು.

52 ಲಕ್ಷ ಜಮೀನುದಾರರು ಮೃತರಾಗಿದ್ದರೂ, ಇರುವವರ ಹೆಸರಿಗೆ ಪೌತಿ ಖಾತೆ ಆಗಿಲ್ಲ. ಸರ್ಕಾರವೇ ಸ್ವಯಂ ಪ್ರೇರಣೆಯಿಂದ ಪೌತಿ ಖಾತೆ ಮಾಡಿ, ಗ್ರಾಮ ಲೆಕ್ಕಿಗರ ಮೂಲಕ ಜನರ ಮನೆ ಬಾಗಿಲಿಗೆ ಇ ಪೌತಿಖಾತೆ ನೀಡುವ ಕಾರ್ಯ 3 ತಿಂಗಳಿಂದ ರಾಜ್ಯಾದ್ಯಂತ ನಡೆಯುತ್ತಿದೆ. 2.81 ಲಕ್ಷ ಜಮೀನಿಗೆ ಅಭಿಯಾನದ ಮೂಲಕ ಪೌತಿ ಖಾತೆ ನೀಡಲಾಗುವುದು. ಹಾಸನ ಜಿಲ್ಲೆಯಲ್ಲಿ 10 ಸಾವಿರ ದರಕಾಸ್ತು ಪೋಡಿ ಹಾಗೂ ಪೌತಿಖಾತೆ ಕಾರ್ಯ ನಡೆದಿದೆ” ಎಂದು ಮಾಹಿತಿ ನೀಡಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...