ಹಾಸನ ನಗರದಲ್ಲಿ KPS- ಮ್ಯಾಗ್ನೆಟ್ ಹೆಸರಿನಲ್ಲಿ ಮುಚ್ಚಲೊರಟಿರುವ ಹಾಸನದ ಆಲೂರು, ಗೊರೂರು ಹಾಗೂ ನಿಟ್ಟೂರು ಸುತ್ತಮುತ್ತಲಿನ ಸರ್ಕಾರಿ ಶಾಲೆಗಳನ್ನು ಉಳಿಸಲು ಹಾಸನದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ವಿದ್ಯಾರ್ಥಿಗಳು, ಪೋಷಕರ ಬೃಹತ್ ಪ್ರತಿಭಟನಾ ಸಮಾವೇಶವನ್ನು ಭಾನುವಾರ ನಡೆಸಲಾಯಿತು.

ಮಹಿಳಾ ಹೋರಾಟಗಾರರಾದ ರೂಪ ಹಾಸನ ಮಾತನಾಡಿ “ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ಕೇವಲ ಕೆಪಿಎಸ್ ಮ್ಯಾಗ್ನೆಟ್ ಯೋಜನೆಗೆ ಮಾತ್ರ, ಹಾಗೂ ಕೇವಲ ಕೆಪಿಎಸ್ ಶಿಕ್ಷಣಕ್ಕೆ ಸಚಿವರಾಗಿದ್ದಾರೆಯೇ ಎಂದು ಪ್ರಶ್ನಿಸಿದರು. ಒಂದು ಸರ್ಕಾರಿ ಶಾಲೆ ಎಂದರೆ ಅದು ಒಂದು ಸಾಂಸ್ಕೃತ ತಾಣ, ಆ ಶಾಲೆಯನ್ನು ನೀವು ಕೊಲ್ಲುತ್ತೀರಾ ಎಂದರೆ, ಆ ಸಾಂಸ್ಕೃತಿಕ ತಾಣವನ್ನು ನೀವು ಕೊಳ್ಳುತ್ತಿದ್ದಾರಾ ಎಂದು ಹೇಳಬೇಕಾಗುತ್ತದೆ. ಹೆಣ್ಣು ಮಕ್ಕಳನ್ನು ಬಡ ರೈತರ ಕಾರ್ಮಿಕರ ಮಕ್ಕಳನ್ನು ಶಿಕ್ಷಣದಿಂದ ದೂರ ಉಳಿಸುವ ಯೋಜನೆಗೆ ಕೆಪಿಎಸ್ ಮ್ಯಾಗ್ನೆಟ್ ಯೋಜನೆ, ಈ ಸಮಾವೇಶಕ್ಕೆ ಹಳ್ಳಿಗಳಿಂದ ತಾಯಂದಿರು ಬಂದಿದ್ದಾರೆ ಅವರ ಜೊತೆ ನಾನು ಸರ್ಕಾರಿ ಶಾಲೆಗಳು ಉಳಿಯೋವರೆಗೆ ನಿಲ್ಲುತ್ತೇನೆ. ಈ ಎಲ್ಲಾ ನೀತಿಗಳು ಶಿಕ್ಷಣ ಹಕ್ಕು ಕಾಯ್ದೆಯ ನೇರ ಉಲ್ಲಂಘನೆ ಎಂದು ತಿಳಿಸಿದರು.

ಇದನ್ನೂ ಓದಿದ್ದೀರಾ?ಹಾಸನ | ರಾಜ್ಯ ಸರ್ಕಾರ ವರದಿ; 17ಲಕ್ಷ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ; ಸುಭಾಷ್ ಬೆಟ್ಟದ ಕೊಪ್ಪ
ನಾವೆಲ್ಲರೂ ಸೇರಿ ಹೋರಾಟವನ್ನು ಮುಂದುವರಿಸೋಣ, ಬುದ್ಧಿಜೀವಿಗಳು ಮನೆ ಒಳಗೆ ಕೂತರೆ ಕುಳಿತುಕೊಳ್ಳಲಿ, ಸರ್ಕಾರ ಈ ನೀತಿಯನ್ನು ವಾಪಸ್ ಪಡೆಯುವವರೆಗೂ ಕೂಡ ಹೋರಾಟವನ್ನು ಮುಂದುವರಿಸೋಣ, ನಾನು ಕೊನೆಯವರೆಗೂ ನಿಮ್ಮ ಜೊತೆ ನಿಂತುಕೊಳ್ಳುತ್ತೇನೆ ಎಂದು ಸಾಮಾಜಿಕ ಹೋರಾಟಗಾರರು ರೂಪ ಹಾಸನ ತಿಳಿಸಿದರು. ಈ ವೇಳೆ ಜಿಲ್ಲಾಧ್ಯಕ್ಷರಾದ ಚೈತ್ರ, ಉಪಾಧ್ಯಕ್ಷರಾದ ಅಭಿಷೇಕ್, ಕಾರ್ಯದರ್ಶಿ ಸುಷ್ಮಾ, ಪದಾಧಿಕಾರಿಗಳಾದ ಪುರುಷೋತ್ತಮ್, ಶ್ರೇಷ್ಠ, ಧನಂಜಯ್ ಧನರಾಜ್,ತಿಲಕ್, ಧನುಶ್ರೀ ಮತ್ತು ಸುತ್ತಮುತ್ತ ಹಳ್ಳಿಗಳಿಂದ ಪೋಷಕರು ಆ ಶಾಲೆಯ ವಿದ್ಯಾರ್ಥಿಗಳು ಹಾಗೂ ಮುಂತಾದವರು ಭಾಗವಹಿಸಿದ್ದರು.





