ಹಾಸನ ಜಿಲ್ಲೆಯ ಪ್ರತಿಷ್ಠಿತ ಮಲೆನಾಡು ತಾಂತ್ರಿಕಶಿಕ್ಷಣ ಸಂಸ್ಥೆಯ ಅಧೀನಕ್ಕೊಳಪಟ್ಟಿರುವ ಎ.ವಿ.ಕೆ ಪದವಿ ಪೂರ್ವ ಕಾಲೇಜಿಗೆ ನೂತನ ಪ್ರಾಂಶುಪಾಲರಾಗಿ ಕಾರ್ಮೆಲ್ ಶ್ರೀನಾ ಅವರನ್ನು ನೇಮಕ ಮಾಡಲಾಗಿದೆ.
ಈ ಕುರಿತು ಕಾಲೇಜಿನ ಆಡಳಿತ ಮಂಡಳಿಯು ಅಧಿಕೃತ ಮಾಹಿತಿ ನೀಡಿದ್ದು, ಪ್ರಸ್ತುತ ಕಾರ್ಮೆಲ್ ಶ್ರೀನಾ ಅವರೇ ಕಾಲೇಜಿನ ಪೂರ್ಣ ಪ್ರಮಾಣದ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದೆ. ಪಿಯುಸಿ ಶೈಕ್ಷಣಿಕ ಕಾರ್ಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಮಾತ್ರವೇ ಅಧಿಕೃತ ಮತ್ತು ಕಾನೂನಾತ್ಮಕ ಅಧಿಕಾರ ಹೊಂದಿದವರಾಗಿದ್ದು, ಸಾರ್ವಜನಿಕರು ಹಾಗೂ ಪೋಷಕರು ಈ ಬದಲಾವಣೆ ಗಮನಿಸಿ ಎಂದಿನಂತೆ ಸಹಕರಿಸಬೇಕೆಂದು ಮಂಡಳಿ ಮನವಿ ಮಾಡಿದೆ.
ಇದನ್ನೂ ಓದಿದ್ದೀರಾ ಹಾಸನ | ಬೈಕ್ ಅಪಘಾತ; ಯುವಕ ಸಾವು, ಮತ್ತೊರ್ವ ಗಂಭೀರ
ಇದೇ ವೇಳೆ ಕಾಲೇಜಿನ 2026ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರವೇಶಾತಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಮಕ್ಕಳು, ಪೋಷಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.





