ಹಾವೇರಿ | ಸುಡುಗಾಡು ಸಿದ್ದರ ಗುಡಿಸಲಿಗೆ ಬಂತು ಗ್ರಂಥಾಲಯ

Date:

ಕನ್ನಡ ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಯೋಜನೆಯಡಿ ಶುಕ್ರವಾರ ದಿ 31ರಂದು ನಗರದ ಸುಡಗಾಡು ಸಿದ್ದರ ಗುಡಿಸಲಲ್ಲಿ ಗ್ರಂಥಾಲಯಗಳಿಗೆ ಚಾಲನೆ ದೊರೆಯಿತು.

ಹಾವೇರಿ ಪಟ್ಟಣದ ಮಂಜುನಾಥ ನಗರದಲ್ಲಿ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಪ್ರೊ.ವಾಯ್.ಬಿ. ಆಲದಕಟ್ಟಿ ಅವರ ಸ್ವಗೃಹದಲ್ಲಿ ಮತ್ತು ನಾಗೇಂದ್ರಮಟ್ಟಿಯ ಸುಡುಗಾಡಸಿದ್ಧರ ಕಾಲೋನಿಯಲ್ಲಿ ಈ ಬಾರಿಯ ಗಣರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಪುರಸ್ಕೃತರಾದ ಶೆಟ್ಟಿ ವಿಭೂತಿ ಅವರ ಮನೆಯಲ್ಲಿ ಎರಡನೆಯ ಗ್ರಂಥಾಲಯಕ್ಕೆ ಚಾಲನೆ ಪಡೆದವು.

ವಿಶೇಷವೆಂದರೆ, ಗುಡಿಸಲಿನಲ್ಲಿ ಗ್ರಂಥಾಲಯ ಆರಂಭವಾದದ್ದು ಕೇಳಿದರೇನೇ ಅಚ್ಛರಿ ಆಗಬಹುದು. ಇಂತಹದೊAದು ಅವಕಾಶ ಆದದ್ದು ಇಲ್ಲಿಯ ತರಳುಬಾಳು ಬಡಾವಣೆಯ ಹಿಂಭಾಗದಲ್ಲಿರುವ ಸುಡುಗಾಡ ಸಿದ್ಧ ಅಲೆಮಾರಿ ಜನಾಂಗದ ಗುಡಿಸಲಿಗೆ ಗ್ರಂಥಾಲಯ ಬಂದದ್ದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಎರಡೂ ಗ್ರಂಥಾಲಯಗಳನ್ನು ಹಿರಿಯ ಕಾರ್ಮಿಕ ನಾಯಕ, ನಿವೃತ್ತ ಹೆಸ್ಕಾಂ ಅಧಿಕಾರಿ ವಿಜಯಕುಮಾರ ಮುದಕಣ್ಣನವರ ಉದ್ಘಾಟಿಸಿ ಮಾತನಾಡಿದ ಅವರು, ‘ಜೋಪುಡಿಗಳಲ್ಲಿ ಅರಿವು ಹುಟ್ಟಬೇಕಾದರೆ, ಅದು ಅಕ್ಷರ ಮತ್ತು ಪುಸ್ತಕಗಳಿಂದ ಮಾತ್ರ ಸಾಧ್ಯ ಎಂದೂ ಪುಸ್ತಕ ನೋಡದ, ಪುಸ್ತಕ ಮುಟ್ಟದ ಜನಗಳ ಹತ್ತಿರ ಗ್ರಂಥಾಲಯ ಬರುವುದು ಒಂದು ಬದಲಾವಣೆಯ ಸಂಕೇತ” ಎಂದರು.

ಅಧ್ಯಕ್ಷತೆ ವಹಿಸಿದ ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಲಿಂಗಯ್ಯ ಹಿರೇಮಠ ಮಾತನಾಡಿ, “ಶೆಟ್ಟಿ ವಭೂತಿ ತಮ್ಮ ಜನರಿಗಾಗಿ ಪುಸ್ತಕ ಪ್ರಾಧಿಕಾರದ ಗ್ರಂಥಾಲಯವನ್ನು ತನ್ನ ಪುಟ್ಟ ಜೋಪುಡಿಯಲ್ಲಿ ಆರಂಭಿಸಿದ್ದು, ಅತ್ಯಂತ ಕ್ರಾಂತಿಕಾರಿಕ ಹೆಜ್ಜೆ” ಎಂದರು. 

ಶೆಟ್ಟಿ ವಿಭೂತಿ ಮಾತನಾಡಿ ಮನೆಗೊಂದು ಗ್ರಂಥಾಲಯ ಯೋಜನೆ ನಮಗೊಂದು ಒಳ್ಳೆಯ ಅವಕಾಶ, ನನ್ನ ಜನಗಳಿಗೆ ಪುಸ್ತಕ ಪ್ರೀತಿ ಹುಟ್ಟಿಸಲು ಕಾರಣವಾದ ಪ್ರಾಧಿಕಾರಕ್ಕೆ ನನ್ನ ನೂರು ಕೃತಜ್ಞತೆಗಳು ಎಂದು ಹೇಳಿದರು.

ಈ ಸುದ್ದಿ ಒದಿದ್ದೀರಾ? ಗದಗ | ಗಾಂಧಿ ಕೊಂದ ವಂಶಜರು ಇಂದು ಅಧಿಕಾರಕ್ಕೆ ಬಂದಿರುವರು: ಬಾಲು ರಾಠೋಡ

ಉದ್ಘಾಟನೆಯಲ್ಲಿ ಡಿ.ವಾಯ್.ಎಫ್.ಆಯ್ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಾಯ್.ಬಿ. ಆಲದಕಟ್ಟಿ, ಪರಿಮಳಾ ಜೈನ್, ಭಾರತ ಜ್ಞಾನ ವಿಜ್ಞಾನ ಸಮಿತಿಯ ರೇಣುಕಾ ಗುಡಿಮನಿ, ದೇವಸ್ಥಾನ ಸಮಿತಿಯ ಶೇಕಪ್ಪ ಮಠಪತಿ, ಶ್ರೀಮತಿ ಕವಿತಾ ಮುದಕಣ್ಣನವರ, ಹಾಸ್ಟೇಲ್ ವಾರ್ಡನ್ ಕಿರಣ ಮಾತನಾಡಿದರು. 

ದಲಿತ ಸಂಘರ್ಷ ಸಮಿತಿಯ ಉಡಚಪ್ಪ ಮಾಳಗಿಮನಿ, ಡಾ.ಅಂಬಿಕಾ ಹಂಚಾಟೆ, ಶ್ರೀಮತಿ ರೇಣುಕಾ ಯಲ್ಲಪ್ಪ ಆಲದಕಟ್ಟಿ, ಜುಬೇದಾ ನಾಯಕ್, ಶಿಗ್ಗಾವಿ ಗುಡಿಸಲು ನಿವಾಸಿಗಳ ಅಧ್ಯಕ್ಷ ಈರಣ್ಣ, ಪೃಥ್ವಿರಾಜ ಬೆಟಗೇರಿ ಅನೇಕರು ಉಪಸ್ಥಿತರಿದ್ದರು. ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಸ್ವಾಗತಿಸಿದರು. ಗ್ರಂಥಾಲಯ ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯ ಎಸ್ ಆರ್ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ದಮ್ಮಕ್ಕಾ ಶೆಟ್ಟಿ ವಿಭೂತಿ ವಂದಿಸಿದರು.

WhatsApp Image 2024 10 05 at 15.43.57 586b60ff min e1728123396595
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...