ಹಳ್ಳಿಯೊಂದಕ್ಕೆ ಪಾದಯಾತ್ರೆಯ ಮೂಲಕ ಬರುವ ಗಾಂಧೀಜಿಯವರು ಗಿಡವೊಂದನ್ನು ನೆಡುತ್ತಾರೆ. ಅದು ಬೆಳೆದಂತೆ ಅದರ ಫಲಗಳನ್ನು ಬೇರೆ ಬೇರೆ ಜನಪ್ರತಿನಿಧಿಗಳು ದುರೂಪಯೋಗ ಪಡಿಸಿಕೊಳ್ಳುತ್ತ, ಗಾಂಧೀ ಗಿಡಕ್ಕೆ ಕಾವಲು ಮತ್ತು ಬೇಲಿಯನ್ನು ಹಾಕುತ್ತಾರೆ. ಕೊನೆಯಲ್ಲಿ ಜನ ಸಾಮಾನ್ಯರ ವಿರೋಧಿಸಿ ಗಾಂಧಿ ಗಿಡವನ್ನು ಮುಕ್ತಗೊಳಿಸುತ್ತಾರೆ. ನಾಟಕದಲ್ಲಿ ಗಾಂಧೀಜಿಯವರ ಸ್ವಾತಂತ್ರ ಸಮಾನತೆ ಮತ್ತು ಸೌಹಾರ್ದತೆಗಳ ಸಂದೇಶವನ್ನು ಸಾರುವಲ್ಲಿ ನಾಟಕ ಯಶಸ್ವಿಯಾಯಿತು. ಇದು ನಾಟಕದ ಒಟ್ಟು ಸಾರವಾಗಿದೆ.
ಹಾವೇರಿ ಪಟ್ಟಣದ ಕೆ.ಲ್.ಇ ಗುದ್ಲೆಪ್ಪ ಕಾಲೇಜಿನಲ್ಲಿ ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಬೆಂಗಳೂರು, ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾ ವಿದ್ಯಾಲಯ ಹಾಗೂ ರಾಷ್ಟಿçÃಯ ಸೇವಾ ಯೋಜನೆ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಒಂದು ವಾರದ ಗಾಂಧೀ ವಿಚಾರ ಪ್ರಣೀತ ರಾಜ್ಯ ಪಟ್ಟದ ಎನ್.ಎಸ್.ಎಸ್. ನಾಯಕತ್ವ ತರಬೇತಿ ಶಿಬಿರದಲ್ಲಿ ಹಾವೇರಿ ಕಲಾ ಬಳಗ ಅಭಿನಯಿಸಿದ ಗಾಂಧಿ ಗಿಡ ನಾಟಕ ಪ್ರದರ್ಶನವಾಯಿತು.
ನಾಟಕದಲ್ಲಿ 30ಕ್ಕೂ ಹೆಚ್ಚು ಕಲಾವಿದರು ಅಭಿನಯಿಸಿದ್ದರು. ಗಾಂಧೀ ಪಾತ್ರಧಾರಿ ಕೆ.ಎನ್ ಜಾನ್ವೇಕರ ಶಕ್ತಿ ಕೇಂದ್ರವಾಗಿದ್ದರು. ಇನ್ನುಳಿದಂತೆ ಸರ್ವಶ್ರೀ ತಿಪ್ಪೇಸ್ವಾಮಿ, ಮುತ್ತುರಾಜ ಹಿರೇಮಠ, ಬಸವರಾಜ ಎಸ್, ಚೈತ್ರಾ ಕೊರವರ, ಧನುಶ್, ಅನಿತ ಮಂಜುನಾಥ, ನೇತ್ರಾ ಅಂಗಡಿ, ಅಂಬಿಕಾ ಹಂಚಾಟೆ, ರೇಣುಕಾ ಗುಡಿಮನಿ, ಅರುಣ ನಾಗವತ್, ರಾಜೇಂದ್ರ ಹೆಗಡೆ, ಸಿ.ಎಸ್. ಚಿಕ್ಕಮಠ, ಈರಣ್ಣ ಬೆಳವಡಿ ಮುಂತಾದವರು ಅಭಿನಯಿಸಿದ್ದರು.
ಸಾರೇ ಜಹಾ ಸೇ ಅಚ್ಚಾ, ರಘುಪತಿ ರಾಘವ ರಾಜಾರಾಮ್, ಯಾರಿಗೆ ಬಂತು ಎಲ್ಲಿಗೆ ಬಂತು, ಕಟ್ಟತೇವ ನಾವು ಕಟ್ಟತೇವ ಮುಂತಾದ ಗೀತೆಗಳು ನಾಟಕಕ್ಕೆ ಕಳೆ ಕಟ್ಟದ್ದವು. ಹಿರಿಯ ಲೇಖಕ ಸತೀಶ ಕುಲಕರ್ಣಿ ಬರೆದು ನಿದೇಶಿಸಿದ್ದರು.
ಇದೇ ಸಂದರ್ಭದಲ್ಲಿ ಹುಚ್ಚಾಸ್ಪತ್ರೆ ಎಂಬ ಕಿರು ನಾಟಕ ತನ್ನ ಹಾಸ್ಯದ ಮೂಲಕ ವಿದ್ಯಾರ್ಥಿ ಸಮೂಹದ ಮನವನ್ನು ಗೆದ್ದಿತು. ಮುತ್ತುರಾಜ ಹಿರೇಮಠ ಮತ್ತು ಕೆ.ಎನ್ ಜಾನ್ವೇಕರ್ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದರು.
ನಾಟಕ ಪ್ರದರ್ಶನವನ್ನು ಡಾ. ರಮೇಶ ತೆವರಿ ಉದ್ಘಾಟಿಸಿದ್ದರು. ಅಧ್ಯಕ್ಷತೆಯನ್ನು ಬಸವರಾಜ ಮಾಸೂರ ವಹಿಸಿದ್ದರು. ಡಾ. ಶಮಂತಕುಮಾರ ಕೆ.ಎಸ್. ವಂದಿಸಿದರು.





