ಮನೆಯಿಂದ ದೂರವಾದ, ಪ್ರೀತಿ ವಂಚಿತ ಮಕ್ಕಳಿಗೆ ಹೊಸ ಬಟ್ಟೆಗಳನ್ನು ನೀಡುವ ಮೂಲಕ ಅರ್ಥಪೂರ್ಣ, ಸರಳ ದೀಪಾವಳಿಯನ್ನು ಆಚರಿಸಲಾಯಿತು.
ಹಾವೇರಿ ಪಟ್ಟಣದ ಉದಯ ನಗರ ಅಂಚಿನ ಹೊರ ವಲಯದಲ್ಲಿರುವ ಶ್ರೀಶಕ್ತಿ ತೆರತೆದ ತಂಗುದಾಣದಲ್ಲಿ ನಿರ್ಗತಿಕರ ಮಕ್ಕಳೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು.
“ತಂದೆ ತಾಯಿ, ಮನೆ ಮಂದಿಯ ಪ್ರೀತಿಯಿಂದ ವಂಚಿತವಾಗಿರುವ ಮಕ್ಕಳ ಜೊತೆಗೆ ನಮ್ಮ ದೀಪಾವಳಿಯನ್ನು ಆಚರಿಸುವುದು ನಿಜ ಅರ್ಥದ ದೀಪಾವಳಿ ಆಗಿದೆ” ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜಯಶ್ರೀ ಪಾಟೀಲ ನುಡಿದರು.
“೧೯ ಮಕ್ಕಳಿಗೆ ಹೊಸ ಬಟ್ಟೆಗಳನ್ನು ವಿತರಿಸಿದ ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಅವರು “ಅವಜ್ಞೆಗೆ ಈಡಾದ, ಮುಗ್ಧ ಮಕ್ಕಳೊಂದಿಗೆ ದೀಪಾವಳಿಯಂತಹ ಸಂತೋಷದ ಕ್ಷಣ ಕಳೆಯುವುದೇ ಸೌಭಾಗ್ಯ” ಎಂದರು.
ಸಾಮಾಜಿಕ ಕಾರ್ಯಕರ್ತೆ ಹಸೀನಾ ಹೆಡಿಯಾಲ ಮಾತನಾಡಿ,”ಮಕ್ಕಳು ಮಕ್ಕಳೇ, ಅವರಿಗೆ ದುಡ್ಡಿಗಿಂತ ಪ್ರೀತಿಯೇ ಮುಖ್ಯವಾಗಿರುತ್ತದೆ. ಸಮಾಜವನ್ನು ಪ್ರೀತಿಸುವವರು ಇಂತಹ ಪ್ರೀತಿಯನ್ನು ವಿಶೇಷವಾಗಿ ನಿರ್ಗತಿಕ ಮಕ್ಕಳಿಗೆ ನೀಡಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಗದಗ | ರಾಜ್ಯೋತ್ಸವ ಪ್ರಶಸ್ತಿ ಸಮಿತಿಗೆ ಬಯಲಾಟ ಅಕಾಡೆಮಿ ಅಧ್ಯಕ್ಷರನ್ನೂ ನೇಮಕ ಮಾಡಲು ಆಗ್ರಹ
ಸಮಾರಂಭದಲ್ಲಿ ಸಾಂಸ್ಥಿಕ ರಕ್ಷಣಾಧಿಕಾರಿ ಶ್ರೀಮತಿ ಮಂಗಳಾ ಅಳಗುಂಡಗಿ, ತೆರೆದ ತಂಗುದಾಣದ ನಿರ್ವಾಹಕ ಪುಟ್ಟಪ್ಪ ಹರವಿ, ಮನೋಜ ಹಿರೇಮಠ, ಪ್ರಬಾ ಸಾಲಿಮಠ, ಉಮಾ ಹಂಚಿನಮನಿ, ದೀಪಾ ಹೊಳೆಯಪ್ಪನವರ, ಸಾಂತ್ವನ ಮಹಿಳಾ ಸಹಾಯಕ ಸಿಬ್ಬಂದಿಗಳಾದ ಪಾರ್ವತಿ ಎಲ್. ಲಕ್ಷ್ಮೀ ಸಿಂಗಣ್ಣನವರ ಹಾಗೂ ಜಿಲ್ಲಾ ಪೊಲೀಸ ಘಟಕದ ಹವಾಲ್ದಾರ ಎಚ್.ಡಿ. ಪವಾರ ಪಾಲ್ಗೊಂಡಿದ್ದರು.





