“ಮಾನಸಿಕ ಅಸ್ವಸ್ಥ ಅಂಗವಿಕರ ಹಕ್ಕುಗಳ ಕಾಯ್ದೆ 2016ರ ಪ್ರಕಾರ ಅಂಗವಿಕಲತೆ ಎಂದು ಪರಿಗಣಿಸಿದ್ದು, ಬೇರೆ ವಿಕಲಚೇತನರಿಗೆ ಸಿಗುವ ಎಲ್ಲ ಸೌಲಭ್ಯಗಳು ಮಾನಸಿಕ ಅಶ್ವಸ್ಥರಿಗೂ ಕೂಡ ಪಡೆಯುವ ಹಕ್ಕನ್ನು ಹೊಂದಿರುತ್ತದೆ. ಆದರೆ ಬೇರೆ ವಿಕಲಚೇತನರಿಗೆ ಹೋಲಿಸಿದರೆ ಸರಕಾರದ ಇಲಾಖೆ ಯೋಜನೆಗಳಲ್ಲಿ ಮಾನಸಿಕ ಅಸ್ವಸ್ಥ ಪೋಷಕರಿಗೆ ಆದ್ಯತೆ ನೀಡುತ್ತಿಲ್ಲ. ಮಾನಸಿಕ ಅಸ್ವಸ್ಥ ಪೋಷಕರಿಗೂ ಸೌಲಭ್ಯಗಳನ್ನು ಕೊಡಲು” ಸಂಘದ ಕಾರ್ಯಕರ್ತರು ಆಗ್ರಹಿಸಿದರು.
ಹಾವೇರಿ ಪಟ್ಟಣದಲ್ಲಿ ಮಾರಿಕಾಂಬ ಮನೋಚೇತನ ಮತ್ತು ಅಸ್ವಸ್ಥ ಪೋಷಕರ ಸಂಘ ವತಿಯಿಂದ ಮಾನಸಿಕ ಅಸ್ವಸ್ಥ ಪೋಷಕರಿಗೆ ಸೌಲಭ್ಯಗಳನ್ನು ಒದಗಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಿಡರು.
ಮನವಿ ಸಲ್ಲಿಸಿ ಸಂಘದ ಮುಖಂಡರು ಗೀತಾ ಸಾಧರ ಮಾತನಾಡಿ, “1500ಕ್ಕೂ ಹೆಚ್ಚು ಜಿಲ್ಲೆಯಲ್ಲಿ ಮಾನಸಿಕ ಅಸ್ವಸ್ಥರಿದ್ದಾರೆ. ಅವರ ಪೋಷಕ ಕುಟುಂಬವು ಆರೋಗ್ಯ ಸಮಸ್ಯೆ, ಆರ್ಥಿಕ ಸಮಸ್ಯೆ ಮತ್ತು ಸಾಮಾಜಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇವರಿಗೆ ಪುನರ್ವಸತಿ ತುಂಬಾ ಕಷ್ಟಕರವಾಗಿದ್ದು, ಅವರ ಸಮಸ್ಯೆಗಳನ್ನು ಪರಿಗಣಿಸಿ ಸೌಲಭ್ಯಗಳನ್ನು ಕೊಡಬೇಕು” ಎಂದು ಒತ್ತಾಯಿಸಿದರು.
ಬೇಡಿಕೆಗಳು: 1) ಗ್ರಾಮ ಪಂಚಾಯಿತಿಯಲ್ಲಿ ಅಸ್ವಸ್ಥ ವಿಕಲಚೇತನರಿಗೆ ಐದರಷ್ಟು ಮೊತ್ತದಲ್ಲಿ ಔಷಧಿಗಳ ಮೊತ್ತವನ್ನು ಭರಿಸುವುದಕ್ಕೆ ಸಹಾಯ ಮಾಡಬೇಕು. 2) ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲವು ಔಷಧಿಗಳು ಸಿಗದ ಕಾರಣ ಹೊರಗೆ ಬರೆದು ಕೊಡುತ್ತಾರೆ. ಅವುಗಳನ್ನು ಕೊಳ್ಳುವಷ್ಟು ಸಬಲರಾಗಿರದ ಕಾರಣ ಎಲ್ಲ ಔಷಧಿಗಳು ಸರ್ಕಾರಿ ಆಸ್ಪತ್ರೆಯಲ್ಲಿ ಸಿಗುವಂತೆ ಮಾಡಬೇಕು. 3) ಅರ್ಹ ಫಲನುಭವಿಗಳಿಗೆ ಯುಡಿಐಡಿ ಕಾರ್ಡ ಮಾಡಿಸಬೇಕು. 4) ಆಸ್ಪತ್ರೆಯ ಸಿಬ್ಬಂದಿಗಳು ಮಾನಸಿಕ ಅಸ್ವಸ್ಥ ಪೋಷಕರೊಂದಿಗೆ ಸಂಯಮದಿಂದ ಇರಬೇಕು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ತುಂಗಭದ್ರಾ ಕಾಲುವೆಯಲ್ಲಿ ಈಜಲು ಹೋದ ಯುವಕ ನಾಪತ್ತೆ
ಮನವಿ ಸಂದರ್ಭದಲ್ಲಿ ವಿನೋದಾ ಪಾಟೀಲ್, ರಚನಾ ಎಕ್ಲಾಸಪುರ ಸೇರಿದಂತೆ ಮಾನಸಿಕ ಅಸ್ವಸ್ಥ ಪೋಷಕರು ಉಪಸ್ಥಿತರಿದ್ದರು.





