“ಭೀಮಾ ಕೋರೆಂಗಾವ್ ಘಟನೆಯನ್ನು ಶೌರ್ಯ- ಸಾಹಸಮಯ ಹಾಗೂ ಕೆಚ್ಚೆದೆಯ ಸೈನಿಕರ ಪರಾಕ್ರಮವೆಂದು ಹೇಳಬಹುದು. ಪೇಶ್ವೆ ಬಾಜಿರಾಯನ ಸೈನ್ಯದ ವಿರುದ್ಧ ದಲಿತರು ಶೌರ್ಯದಿಂದ ಹೋರಾಡಿ ಅವನ ಸೈನ್ಯವನ್ನು ಧೂಳಿಪಟ ಮಾಡಿ, ವಿಜಯ ಪತಾಕಿ ಹಾರಿಸಿದ ಈ ದಿನವು ಡಾ.ಬಿ.ಆರ್ ಅಂಬೇಡ್ಕರ್ ಅವರಿಗೆ ಅತ್ಯಂತ ಪ್ರೀತಿಯ ದಿನವಾಗಿದೆ” ಎಂದು ಕಲ್ಯಾಣ ಸಮಿತಿ(ರಿ)ಯ ರಾಜ್ಯಾಧ್ಯಕ್ಷರು ಉಡಚಪ್ಪ ಮಾಳಗಿ ಹೇಳಿದರು.
ಹಾವೇರಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ,ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ(ರಿ)ಯ ವತಿಯಿಂದ ಜನವರಿ 1 ರಂದು ದಲಿತರ ಶೌರ್ಯ ದಿನ ಸಂಕೇತವಾಗಿ ಭೀಮಾ ಕೋರೆಂಗಾವ್ ವಿಜಯೋತ್ಸವ ದಿನವನ್ನು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ದಲಿತರ ಶೌರ್ಯ ತೋರಿದ ಸ್ವಾಭಿಮಾನದ ಸಂಕೇತವಾಗಿ ಭೀಮಾ ಕೋರೆಂಗಾವ್ ವಿಯೋತ್ಸವ ದಿನವಾಗಿ ಆಚರಣೆ ಮಾಡಲಾಗುತ್ತದೆ. ದಲಿತರು ಪ್ರೀತಿಗೂ ಸೈ,ಸ್ವಾಭಿಮಾನದ ಹೋರಾಟಕ್ಕೂ ಸೈ ಎಂಬ ಧೋರಣೆ ಎಲ್ಲರಿಗೂ ತಿಳಿಸಿದ ಹೋರಾಟವಾಗಿದೆ. ಜ-1 ನಾವೆಲ್ಲರೂ ಮರೆಯದೇ ಅವಿಸ್ಮರಣೀಯ ದಿನವೆಂದು ಮುನ್ನಡಿಯಬೇಕಿದೆ” ಎಂದರು.
ಲಿಡ್ಕರ್ ಮಾಜಿ ಉಪಾಧ್ಯಕ್ಷರು ಡಿ ಎಸ್ ಮಾಳಗಿ ಮಾತನಾಡಿ, “ಭೀಮಾ ಕೋರೆಂಗಾವ್ ವಿಯೋತ್ಸವ ದಿನ ನಮ್ಮೆಲ್ಲರ ಹೆಮ್ಮೆಯ ದಿನವಾಗಿದೆ. ಅನ್ಯಾಯ ಶೋಷಣೆ ವಿರುದ್ಧ ಹೋರಾಟ ಮಾಡಬೇಕು ಎಂಬುವುದನ್ನು ಭೀಮಾ ಕೋರೆಂಗಾವ್ ಯುದ್ಧ ಪ್ರೇರಣೆ ನೀಡಲಿದೆ. ಜ-1 ಕಲ್ಯಾಣ ಸಮಿತಿಯ ರಾಜ್ಯಾಧ್ಯಕ್ಷರಾದ ಉಡಚಪ್ಪ ಮಾಳಗಿ ಅವರ ಹುಟ್ಟು ಹಬ್ಬವು ಆಗಿದ್ದು,ಅವರಿಗೆ ದೇವರು ಒಳ್ಳೆಯದು ಮಾಡಲಿ ಅವರ ಉತ್ತಮ ಕೆಲಸಕ್ಕೆ ನಾವು ಕೈಜೋಡಿಸೋಣ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಲ್ಯಾಣ ಸಮಿತಿ ಜಿಲ್ಲಾಧ್ಯಕ್ಷರರು ಮಂಜಪ್ಪ ಮರೋಳ, ಡಿಎಸ್ ಎಸ್ ಜಿಲ್ಲಾ ಸಂಚಾಲಕರು ಮಾಲತೇಶ ಯಲ್ಲಾಪುರ, ಅಲೆಮಾರಿ ಸಮಾಜದ ಜಿಲ್ಲಾಧ್ಯಕ್ಷರು ಶೆಟ್ಟಿ ವಿಭೂತಿ, ಬಿಎಸ್ ಪಿ ಪಕ್ಷದ ಮುಖಂಡರು ಎಂ ಕೆ ಮುಲ್ಲಾ, ಮುಖಂಡರು ಎಂ ಆಂಜನೇಯ, ವಕೀಲರಾದ ಮಹೇಶ ಹಂಚಿನಮನಿ, ಸುಭಾಸ ಚೌವ್ಹಾಣ, ವೆಂಕಟೇಶ ಬಿಜಾಪುರ, ಅಶೋಕ ಮರೆಣ್ಣನವರ, ಹೊನ್ನಪ್ಪ ಮಾಳಗಿ, ಯಲ್ಲಪ್ಪ ಮಾಸೂರ, ಜಗದೀಶ ಹರಿಜನ, ನೀಲಮ್ಮ ಮರೆಮ್ಮನವರ, ಭೀಮಣ್ಣ ಯಲ್ಲಾಪುರ, ಗುಡ್ಡಪ್ಪ ಚಿಕ್ಕಪ್ಪನವರ, ನವೀನ ಶಿಡ್ಲಣ್ಣನವರ, ರಾಜು ತರ್ಲಗಟ್ಟ, ಗುಡ್ಡಪ್ಪ ಬಣಕಾರ, ಮಲ್ಲೇಶ ಕಡಕೋಳ, ಹನುಮಂತಪ್ಪ ಹೌಂಶಿ, ಮಹೇಶಪ್ಪ ಹರಿಜನ, ಹೊನ್ನಪ್ಪ ದಾಸಪ್ಪನವರ, ಬಸವಣ್ಣೆಪ್ಪ ಹಳ್ಳಳ್ಳಿ, ಗುಡ್ಡಪ್ಪ ಮಾಳಗಿ, ರಾಜಪ್ಪ ಕರೆಣ್ಣನವರ, ದುರಗಪ್ಪ, ಹನುಮಂತಪ್ಪ ಪರಸನವರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.





