“ಮಕ್ಕಳ ಮೇಲೆ ಕುಟುಂಬದಲ್ಲಿ ನೆರೆ ಹೊರೆ ಶಾಲೆ ಹಾಗೂ ಬಸ್ಸುಗಳಲ್ಲಿ ಯಾವೆಲ್ಲ ರೀತಿ ದೌರ್ಜನ್ಯಗಳು ಆಗುತ್ತವೆ. ಮಾನಸಿಕವಾಗಿ ಹಾಗೂ ದೈಹಿಕವಾಗಿ ದೌರ್ಜನ್ಯಗಳನ್ನು ಹೇಗೆ ತಿಳಿಯಬಹುದನ್ನು ಅರಿತುಕೊಳ್ಳಬೇಕಿದೆ” ಎಂದು ಚೈಲ್ಡ ಸೇಪ್ ಗಾರ್ಡಿಂಗ ಕುರಿತು ಸಂಪನ್ಮೂಲ ವ್ಯಕ್ತಿಗಳು ಸಿಸ್ಟರ್ ಎರೋನಿಕಾ ತಿಳಿಸಿದರು.
ಹಾವೇರಿ ಜಿಲ್ಲೆಯ ಹಾನಗಲ್ಲ ಪಟ್ಟಣದ ಲೊಯೋಲ ವಿಕಾಸ ಕೇಂದ್ರದಲ್ಲಿ ಶಿಕ್ಷಕಿಯರಿಗೆ ಚೈಲ್ಡ ಸೇಪ್ ಗಾರ್ಡಿಂಗ್ ಕುರಿತು ಉಪನ್ಯಾಸದಲ್ಲಿ ಅವರು ಮಾತನಾಡಿದರು.
ಈ ರೀತಿ ದೌರ್ಜನ್ಯಗಳು ಆದಾಗ ತಕ್ಷಣಕ್ಕೆ ದೂರವಾಣಿ ಸಂಖ್ಯೆ ೧೧೨ ಕರೆ ಮಾಡಬೇಕು. ಈ ಕುರಿತು ಇರುವ ಕಾಯಿದೆಗಳ ಮಾಹಿತಿ ನೀಡಿದರು.
“ಕಲಿಕಾ ಕೇಂದ್ರದ ಮಕ್ಕಳಿಗೆ ಗುಡ್ ಟಚ್ ಮತ್ತು ಬ್ಯಾಡ ಟಚ್ ಬಗ್ಗೆ ತಿಳಿಸಿರಿ. ರಕ್ಷಣಾ ಮಾರ್ಗಗಳನ್ನು ಹೇಳಿ ಕೊಡಬೇಕು. ಎಂಬ ನಾನಾ ವಿಷಯಗಳನ್ನು ಕಲಿಕಾ ಕೇಂದ್ರದ ಶಿಕ್ಷಕಿಯರಿಗೆ ಮಾರ್ಗದರ್ಶನ ಮಾಡಿದರು.
ಶಿಕ್ಷಕಿಯರು ಕಲಿಕಾ ಕೇಂದ್ರಗಳಲ್ಲಿ ಮಕ್ಕಳ ರಕ್ಷಣೆ ವಿಷಯವಾಗಿ ಜಾಗೃತಿ ಫಲಕಗಳನ್ನು ಹಾಕುವುದಾಗಿ ತಿಳಿಸಿದರು.
ಕಾರ್ಯಕ್ರಮಲ್ಲಿ ಸಂಸ್ಥೆಯ ನಿರ್ದೇಶಕರು, ಚೈಲ್ಡ ಸೇಪ್ ಗಾರ್ಡಿಂಗ್ ಸಮಿತಿಯ ಸದಸ್ಯರು, “ಈಗಾಗಲೆ ಹಳ್ಳಿಗಳಲ್ಲಿ ಮಹಿಳಾ ಸಂಘಟನೆಗಳಿಗೆ ಮಾಹಿತಿ ನೀಡುತ್ತಿದ್ದೇವೆ. ಪಂಚಾಯತ್ ಮಟ್ಟದಲ್ಲಿ ಕಾವಲು ಸಮಿತಿ ಜವಾಬ್ದಾರಿ ಕುರಿತು ತಿಳಿಸಿದ್ದು, ಕಾವಲು ಸಮಿತಿ ಕೆಲಸ ನಿರ್ವಹಿಸುವಂತೆ ನೋಡಿ ಕೊಳ್ಳುತಿದ್ದೇವೆ. ಸಮಸ್ಯಗೆ ಈಡಾದ ಮಹಿಳೆಯರಿಗೆ ಸಾಂತ್ವನ ಕೇಂದ್ರದ ಮೂಲಕ ಪರಿಹಾರ ಒದಗಿಸಿ ಕೊಡಲಾಗುತ್ತಿದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಲಿಕಾ ಕೇಂದ್ರ ಶಿಕ್ಷಕಿಯರು ಉಪಸ್ಥಿತರಿದ್ದರು.





