“ಮಕ್ಕಳು ತಮ್ಮ ಬಾಲ್ಯದ ಕೆಲವು ದಿನವನ್ನು ಹಬ್ಬದ ರೂಪದಲ್ಲಿ ಕಳೆಯಬೇಕು. ಮಕ್ಕಳು ನಿಮ್ಮ ಸಮುದಾಯವನ್ನು ಬೆಳಗಿಸಬೇಕು” ಎಂದು ಲೊಯೋಲ ವಿಕಾಸ ಕೇಂದ್ರ ನಿರ್ದೇಶಕರು ವಿನ್ಸೆಂಟ್ ಜೇಸನ್ರವರು ಹೇಳಿದರು.
ಹಾವೇರಿ ಜಿಲ್ಲೆಯ ಹಾನಗಲ್ಲ ಪಟ್ಟಣದ ಲೊಯೋಲ ವಿಕಾಸ ಕೇಂದ್ರದಲ್ಲಿ ವಿಶ್ವ ಮಕ್ಕಳ ದಿನಾಚರಣೆಯ ಪ್ರಯುಕ್ತ, ಸಮಗ್ರ ಮತ್ತು ಸುಸ್ಥಿರ ಯೋಜನೆಯ ಅಡಿಯಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ತಿಳಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಬಾಲಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
“ಮಕ್ಕಳು ದೀಪವಿದ್ದಂತೆ ಪ್ರಜ್ಜಲವಾಗಿ ಬೆಳೆಯುವ ಮೂಲಕ ತಮ್ಮ ಮನೆ, ಸಮೂದಾಯವನ್ನು ಬೆಳೆಗಿಸಲಿ” ಎಂದರು.
ಮುಂಡಗೋಡಿನ ಲೊಯೋಲ ಸಂಸ್ಥೆಗಳ ಮುಖ್ಯಸ್ಥರಾದ ಪಾ|| ಮೇಲ್ವಿನ್ ಲೋಬೊರವರು ಮಕ್ಕಳು ಸಮಾಜದಲ್ಲಿ ಬದುಕನ್ನು ಕಟ್ಟಿಕೊಳ್ಳಲು ಶಿಕ್ಷಣ ಮುಂಬಾ ಮುಖ್ಯ ಅದನ್ನು ಶುದ್ಧ ಮನಸ್ಸಿನಿಂದ ಕಲಿಯಬೇಕು, ಆಸಕ್ತಿ ಮತ್ತು ದೃಢ ವಿಶ್ವಾಸದಿಂದ ಎಲ್ಲಾ ತರಹದ ವಿದ್ಯೆಯನ್ನು ಕಲಿಯಬಹುದು ಎಂದರು.
ಮಕ್ಕಳ ಬುದ್ಧಿಮಟ್ಟ ಹೆಚ್ಚಿಸಲು ಸಂಸ್ಥೆಯ ಆವರಣದಲ್ಲಿ ೧೦ ವಿಭಿನ್ನ ಆಟವನ್ನು ಏರ್ಪಡಿಸಿ ಮಕ್ಕಳು ಸಂತೋಷದಲ್ಲಿ ಪಾಲ್ಗೊಂಡರು.
ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧತೆಯಲ್ಲಿ ಏಕತೆ ತೋರುವ ಹಲವಾರು ವೇಷಭೂಷಣ, ನೃತ್ಯ, ನಾಟಕ, ಹಾಡಿನಲ್ಲಿ ಭಾಗಿಯಾಗಿದ್ದರವರು ಮಕ್ಕಳ ಮನಸೆಳೆದರು.
ಸಂಪನ್ಮೂಲ ವ್ಯಕ್ತಿ ವಕೀಲರು ರವಿ ಬಾಬು ಪೂಜಾರ ಅವರು ಮಾತನಾಡಿ, “ಮಕ್ಕಳು ಕೇವಲ ಶಿಕ್ಷಣ ಅಲ್ಲದೆ ಈ ತರಹದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಕು. ಶಿಕ್ಷಣದ ಹಕ್ಕು ಮತ್ತು ಬದುಕುವ ಹಕ್ಕಿನ ಬಗ್ಗೆ” ವಿವರಿಸಿದರು.
“ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ಇಂದಲ್ಲಾ ನಾಳೆ ಫಲಕೊಡುವುದು. ಮಕ್ಕಳಿಗಾಗಿ ಇರುವ ಕಾನೂನಿನ ಬಗ್ಗೆ ತಿಳಿಸಿ, ಪೋಕ್ಸೋ ಕಾಯ್ದೆಯ ಬಗ್ಗೆ” ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಹ ನಿರ್ದೇಶಕರಾದ ಜೇಸನ್ ಪಾಯ್ಸ್, ಕಾರ್ಯಕ್ರಮದ ಸಂಯೋಜಕರಾದ ಪಿರಪ್ಪ ಶಿರ್ಶಿ ಮತ್ತು ಸಿಬ್ಬಂದಿ ವರ್ಗದವರು, ೧೪ ಸಮುದಾಯ ಕಲಿಕಾ ಕೇಂದ್ರದ ಶಿಕ್ಷಕಿಯರು, ಸುಮಾರು ೧೮೮ ಮಕ್ಕಳು ಸೇರಿದ್ದರು.





