“ಮಾಸೂರ ಗ್ರಾಮದಲ್ಲಿ ಈ ಹಿಂದೆ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸಲಾಗಿತ್ತು. ಈಗ ಸರಕಾರ ಕೆಳ ದರ್ಜೆಗೆ ಇಳಿಸುತ್ತಿರುವುದು ಖಂಡನೀಯ” ಎಂದು ಕರವೇ ಸ್ವಾಭಿಮಾನಿ ಬಳಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಮರಾಠೆ ಅಸಮಾಧಾನ ವ್ಯಕ್ತಪಡಿಸಿದರು.
ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ತಾಲ್ಲೂಕಿನ ಮಾಸೂರು ಗ್ರಾಮದಲ್ಲಿ ಇರುವ ಸಮುದಾಯ ಆರೋಗ್ಯ ಕೇಂದ್ರವನ್ನು ಕೆಳ ದರ್ಜೆಗೆ ಇಳಿಸುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗ ಮುಖಂಡರು ತಾಲೂಕು ಆರೋಗ್ಯ ಅಧಿಕಾರಿಗಳು ಜಾವೀದ್ ಮಕಾಂದಾರ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
“ಸುತ್ತಮುತ್ತಲಿರುವ ಹಳ್ಳಿಗಳಿಂದ ಮಾಸೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳ ಪಾಲಿಗೆ ವರವಾಗಿತ್ತು. ಆದರೆ ದುರದೃಷ್ಟಕರ ಸಂಗತಿ ಏನೆಂದರೆ ಈಗಿನ ಸರ್ಕಾರ ಸಮುದಾಯ ಆರೋಗ್ಯ ಕೇಂದ್ರವನ್ನು ತೆಗೆದು ಪ್ರಾಥಮಿಕ ಆರೋಗ್ಯ ಕೇಂದ್ರವನ್ನಾಗಿ ಕೆಳ ದರ್ಜೆಗೆ ಇಳಿಸುತ್ತಿರುವುದನ್ನು” ಯಲ್ಲಪ್ಪ ಮರಾಠೆ ಅವರು ಖಂಡಿಸಿದರು.
“ಹತ್ತಾರು ಊರಿನಿಂದ ಬರುವ ಹೊರ ರೋಗಿಗಳಿಗೆ ವರವಾಗಿರುವ ಈ ಸರ್ಕಾರಿ ಆಸ್ಪತ್ರೆಯನ್ನು ಕೆಳ ದರ್ಜೆಗೆ ಇಳಿಸಿದರೆ ಇಲ್ಲಿ ಬರುವಂತಹ ಬಡ ರೋಗಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಕೂಡಲೇ ಕೆಳ ದರ್ಜೆಗೆ ಇಳಿಸುವುದನ್ನು ನಿಲ್ಲಿಸಿ. ಈಗ ಯಥಾಸ್ಥಿತಿ ಇರುವ ಸಮುದಾಯ ಆರೋಗ್ಯ ಕೇಂದ್ರವನ್ನು ಮುಂದುವರೆಸಿ. ಇಲ್ಲಿಗೆ ಬರುವ ರೋಗಿಗಳಿಗೆ ಅನುಕೂಲಕರ ಮಾಡಿಕೊಡಬೇಕು. ಕರವೇ ಸ್ವಾಭಿಮಾನಿ ಬಳಗ ತಮ್ಮ ಮುಖಾಂತರ ಸರ್ಕಾರಕ್ಕೆ ಒತ್ತಾಯಿಸುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ಗದಗ | ಸಿಎಂಗೆ ಅಲೆಮಾರಿ ಸಮುದಾಯದ ಗುಡಿಸಲು ಕಾಣದಂತೆ ಮರೆ ಮಾಡಿದ ಜಿಲ್ಲಾಡಳಿತ
“ಒಂದು ವೇಳೆ ಸರ್ಕಾರ ಕೆಳ ದರ್ಜೆಗೆ ಇಳಿಸಲು ಮುಂದಾದರೆ ಕರವೇ ಸ್ವಾಭೀಮಾನಿ ಬಳಗ ಅಹೋರಾತ್ರಿ ಪ್ರತಿಭಟನೆ ಮಾಡಲು ಮುಂದಾಗಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕರವೇ ಸ್ವಾಭಿಮಾನಿ ಬಳಗ ಜಿಲ್ಲಾ ಉಪಾಧ್ಯಕ್ಷರು ಯೂಸುಫ್ ಸೈಕಲಗಾರ, ಮಹಿಳಾ ಜಿಲ್ಲಾ ಅಧ್ಯಕ್ಷರು ಗೀತಾ ಲಮಾಣಿ, ಖಾಲಂದರ ಎಳೆದಹಳ್ಳಿ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.





