ಹಾವೇರಿ | ಸೆಪ್ಟಂಬರ್ 1 ರಾಷ್ಟ್ರೀಯ ಚಾಲಕರ ದಿನಾಚರಣೆ ಮಾಡಲು ಒತ್ತಾಯ

Date:

“ಸರಕಾರ ಸೆಪ್ಟಂಬರ್ 1ರಂದು ರಾಷ್ಟ್ರೀಯ ಚಾಲಕರ ದಿನಾಚರಣೆಯನ್ನಾಗಿ ಘೋಷಣೆ ಮಾಡಿ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಚಾಲಕರಿಗೆ ವಿವಿಧ ಸೌಲಭ್ಯಗಳು ಸಿಗುವಂತಾಗಬೇಕು” ಎಂದು ರಾಷ್ಟ್ರೀಯ ಅಧ್ಯಕ್ಷ ಸುರೇಂದ್ರ ಪ್ರಸಾದ ಒತ್ತಾಯಿಸಿದರು.

ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದ ಶಾದಿ ಮಹಲ್ ನಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಚಾಲಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

“ದೇಶದ 22 ಕೋಟಿ ಚಾಲಕರಿಗೆ ನ್ಯಾಯ ಒದಗಿಸಲು ರಾಷ್ಟ್ರೀಯ ಚಾಲಕರ ಆಯೋಗ ಮತ್ತು ರಾಜ್ಯ ಚಾಲಕರ ಆಯೋಗವನ್ನು ರಚಿಸಬೇಕು, ಚಾಲಕರ ಮ್ಯೂಸಿಯಂ ಸ್ಥಾಪನೆ, ಚಾಲಕರು ಅಪಘಾತವಾದಲ್ಲಿ ಮರಣ ಹೊಂದಿದರೆ ಸರ್ಕಾರ ಕನಿಷ್ಠ ೧೦ ಲಕ್ಷ ರೂಪಾಯಿ ಪರಿಹಾರ ನೀಡುವಂತಾಗಬೇಕು, ಸರ್ಕಾರಿ ಸಂಸ್ಥೆಗಳಲ್ಲಿ ಗುತ್ತಿಗೆ ಹೊರಗುತ್ತಿಗೆಯಲ್ಲಿ ಕಾರ್ಮಿಕ ಚಾಲಕರನ್ನು ಸಮಾನ ವೇತನದ ಅಡಿ ಕಾಯಂಗೊಳಿಸಬೇಕು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪಿಂಚಣಿ ನಿಗದಿ, ಚಾಲಕನಿಗೆ ಮೆಚ್ಯೂರಿಟಿ ವಿಮೆ, ವೈದ್ಯಕೀಯ ವಿಮೆ, ಚಾಲಕರ ಮಕ್ಕಳ ಶಿಕ್ಷಣಕ್ಕೆ ಸರಕಾರ ಸಹಕಾರ, ವಿಕಲಚೇತನ ಚಾಲಕರಿಗೆ ರಿಯಾಯತಿ ಸೇರಿದಂತೆ ವಿವಿಧ ಸೌಲಭ್ಯಗಳು ಚಾಲಕರಿಗೆ ಸಿಗುವಂತಾಗಬೇಕು” ಎಂದರು.

“ವೃತ್ತಿಪರ ಚಾಲಕರು ದೇಶಾದ್ಯಂತ ವಾಹನಗಳನ್ನು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಕೊಂಡೊಯ್ಯುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಸಾಮಾನ್ಯ ನಾಗರಿಕನು ಚಾಲಕನಿಂದ ಅಪಘಾತಕ್ಕೆ ಬಲಿಯಾಗುತ್ತಾನೆ. ಆದ್ದರಿಂದ ಅಪರಾಧದ ಅಡಿಯಲ್ಲಿ ಬಂಧನದಲ್ಲಿ ಜಾಮೀನು ಪಡೆಯುವ ಚಾಲಕನ ಹಕ್ಕನ್ನು ಅವನ ಕಾನೂನು ಪರವಾನಗಿ ಎಂದು ಪರಿಗಣಿಸಬೇಕು. ದೇಶಾದ್ಯಂತ ಸರಕುಗಳನ್ನು ಒಂದು ಪ್ರಾಂತ್ಯದ ಇನ್ನೊಂದು ಪ್ರಾಂತ್ಯಕ್ಕೆ ಸಾಗಿಸುವ ವೃತ್ತಿಪರ ಚಾಲಕರು. ಅವರ ಆಡಳಿತಾತ್ಮಕ ಪೊಲೀಸ್ ಸುಲಿಗೆ ಮತ್ತು ಕಿರುಕುಳವನ್ನು ನಿಲ್ಲಿಸಬೇಕು” ಎಂದು ಒತ್ತಾಯಿಸಿದರು.

“ರಾಷ್ಟ್ರೀಯ ಮಜ್ದೂರ ಕಾಂಗ್ರೇಸ್ ಜಿಲ್ಲಾದ್ಯಕ್ಷ ಎಂ ಎಂ ಕಾಲೆಬಾನ್, ಅಸಂಘಟಿತ ಕಾರ್ಮಿಕ ಇಲಾಖೆಯ ಶಶಿಧರ ಎಸ್, ಅಸಂಘಟಿತ ಕಾರ್ಮಿಕ ಮತ್ತು ನೌಕರರ ವಿಭಾಗದ ಜಿಲ್ಲಾದ್ಯಕ್ಷ ಎ ಎಂ ಪಟವೇಗಾರ, ಜಿಲ್ಲಾದ್ಯಕ್ಷ ಗಂಗಾಧರ ಅಣ್ಣೀಗೇರಿ, ಸಂಘದ ಸಭಾಪತಿ ಪ್ರರ್ವೇಜ್ ಅಹ್ಮದ್ ಮುಲ್ಲಾ, ಮಾರುತಿ ಬಡಿಗೇರ, ಗುರುನಗೌಡ ದುಂಡಿಗೌಡ್ರ, ಜಿಲ್ಲಾ ಪ್ರಚಾರಕ ಮೌಲಾಲಿ ಗುಜರಾತಿ, ಶಂಜ್ರಪ್ಪ ಮೋತೆನವರ, ಮಲ್ಲಿಕ್ ಜಾನ್ ದುಂಡಶಿ, ಇಮ್ತಿಯಾಜ್ ಚಳ್ಳಾಳ, ದುದ್ದು ಬನ್ನಿಮಟ್ಟಿ, ಗೌಸ್ ಅಗಸನಮಟ್ಟಿ, ಮಖ್ಬುಲ್ ದನ್ನೆವಾಲೆ, ಮಹ್ಮದ್ ಗೌಸ್ ಒಂಟಿ,  ತಾಲೂಕ ಕುರುಬ ಸಮಾಜದ ಅದ್ಯಕ್ಷ ಪಕ್ಕೀರಪ್ಪ ಕುಂದೂರ, ಸಮಾಜಿಕ ಹೋರಾಟಗಾರ ಮಂಜುನಾಥ ಮಣ್ಣಣ್ಣವರ ಸೇರಿದಂತೆ ಸಂಘದ ಸದಸ್ಯರು, ವಿವಿಧ ಚಾಲಕರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...