ದೇವದಾಸಿ ಕುಟುಂಬದ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಮತ್ತು ಸುಧಾರಣೆಗಾಗಿ ಹಿರೇಕೆರೂರ, ರಾಣೇಬೆನ್ನೂರ್, ತಾಲೂಕಿನ ಆಯ್ದ ಕಿಶೋರಿಯರಿಗೆ ಇಂದು ರಾಣೇಬೆನ್ನೂರ್ ಆಂಗ್ಲೋ ಹೈ ಸ್ಕೂಲ್ ಆವರಣದಲ್ಲಿ ಶಿಕ್ಷಣ ಸಾಮಗ್ರಿ ವಿತರಣೆ ಮಾಡಲಾಯಿತು.
ಹಾವೇರಿ ಜಿಲ್ಲೆಯ ರಾಣಿಬೆನ್ನೂರ ಪಟ್ಟಣದ ಆಗ್ಲೋ ಹೈಸ್ಕೂಲ್ ನಲ್ಲಿ ವನಸಿರಿ ಗ್ರಾಮೀಣ ಅಭಿರುದ್ದಿ ಸಂಸ್ಥೆ ರಾಣೇಬೆನ್ನೂರ ಚಿಲ್ಡ್ರನ್ ಇಂಡಿಯಾ ಫೌಂಡೇಶನ್ ಹಾಗೂ ಗುಡ್ ಯೋಜನೆ ಮೂಲಕ ರೋಟರಿ ಕ್ಲಬ್ ಸಾಮಗ್ರಿ ವಿತರಣಾ ಕಾರ್ಯಕ್ರಮ ನಡೆಯಿತು.
ಕಾರ್ಯಮದಲ್ಲಿ ರಾಮಚಂದ್ರ ಜಿ.ಎಸ್ ಮಾತನಾಡಿ, “ಹಣ್ಣು ಮಕ್ಕಳು ಯಾವುದೇ ಕಾರಣಕ್ಕೂ ಶಾಲೆಯಿಂದ ಹೊರಗೆ ಉಳಿಯಬಾರದು. ಶಿಕ್ಷಣ ಜೊತೆಗೆ ವಿವಿಧ ಹಲವಾರು ಕೌಶಲ್ಯಗಳ ಬಗ್ಗೆ ಸಹ ತರಬೇತಿ ನೀಡುವಲ್ಲಿ ಮುಂದಿನ ದಿನಗಳಲ್ಲಿ ವನಸಿರಿ ಗ್ರಾಮೀಣ ಅಭಿರುದ್ದಿ ಸಂಸ್ಥೆ ಹಾಗೂ ರೋಟರಿ ಕ್ಲಬ್ ಮೂಲಕ ಸಹಾಯ ಮಾಡಲಾಗುವುದು. ಪ್ರತಿಯೊಬ್ಬ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ವನಸಿರಿ ಗ್ರಾಮೀಣ ಅಭಿವೃದ್ದಿ ಸಂಸ್ಥೆಯು ಪ್ರತಿ ವರ್ಷ ಬಡ ಮಕ್ಕಳಿಗೆ ನೆರವು ನೀಡಲಾಗುತ್ತದೆ” ಎಂದರು.
ವನಸಿರಿ ಸಂಸ್ಥೆ ಖಜಾಂಚಿ ಹಬೀಬ್ ಬಾನು ಹಾನಗಲ್ ಮಾತನಾಡಿ, “ಹೆಣ್ಣುಮಕ್ಕಳು ಕುಟುಂಬದಲ್ಲಿ ಬಡತನ ಕಾರಣಕ್ಕೆ ಶಾಲೆಯನ್ನು ಬಿಡದೆ ಕಷ್ಟ ಪಟ್ಟು ವಿಧ್ಯಬ್ಯಾಸ ಮಾಡಬೇಕು. ತಂದೆ ತಾಯಿ ಹಾಗೂ ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಲು ಶಿಕ್ಷಣ ಅತ್ಯುತ್ತಮ ಸಾಧನವಾಗಿದೆ. ಪ್ರತಿಯೊಂದು ಮಕ್ಕಳು ವಾರ್ಷಿಕ ಪರೀಕ್ಷೆಯನ್ನು ಉತ್ತಮವಾಗಿ ಓದಿ ಪರೀಕ್ಷೆ ಸುಲಲಿತವಾಗಿ ಬರೆಯುವಂತೆ ಹಾಗೂ ಯಾವುದೇ ಒತ್ತಡಕ್ಕೆ ಒಳಗಾಗ ಬಾರದು” ಎಂದು ತಿಳಿಸಿದರು.
ಈ ಯೋಜನೆ ಮೇಲ್ವಿಚಾರಕರು ತರನುಮ ಖತಿಬ್, ಮಾತನಾಡಿ, “ಕಳೆದ ಒಂದು ವರ್ಷದಲ್ಲಿ ದೇವದಾಸಿ ಕುಟುಂಬದ ಆಯ್ದ ಹೆಣ್ಣುಮಕ್ಕಳ ಶಿಕ್ಷಣ ಸಲುವಾಗಿ ಮಕ್ಕಳಿಗೆ ಕಿಶೋರಿ ಆರೋಗ್ಯ, ಸ್ವಚ್ಛತೆ, ಕ್ರೀಡೆಗಳು ಹಾಗೂ ನಿರಂತರ ಶಿಕ್ಷಣಕ್ಕೆ ಬೇಕಾಗುವ ಮಕ್ಕಳಿಗೆ ಪ್ರೇರಣೆ ದಾಯಕ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ. ಹಾಗೂ ದೇವದಾಸಿ ಕುಟುಂಬಗಳ ಜೀವನ ಸುಧಾರಣೆಯ ಕಾರ್ಯಕ್ರಮ ಕೈಗೊಳ್ಳಲಾಗಿದೆ” ಎಂದು ತಿಳಿಸಿದರು.
ಸಭೆಯಲ್ಲಿ ಗಣಿತ ವಿಷಯ ಶಿಕ್ಷಕರು ಶಬ್ಬೀರ್ ಅಹ್ಮದ್ ಹಾಗೂ ವಿಜ್ಞಾನ ಶಿಕ್ಷಕಿ ಅಲಿಯಾ, ಅಂಜುಮ್ ಅವರು ವಿವಿಧ ವಿಷಯ ಉಪನ್ಯಾಸ ನೀಡಿದರು.
ವನಸಿರಿ ಗ್ರಾಮೀಣ ಅಭಿರುದ್ದಿ ಸಂಸ್ಥೆ ಕಾರ್ಯ ನಿರ್ವಾಹಕ ನಿರ್ದೇಶಕರು ಎಸ್, ಡಿ, ಬಳಿಗಾರ್ ಮಾತನಾಡಿ, “ಹೆಣ್ಣುಮಕ್ಕಳ ಶಿಕ್ಷಣ ಹಾಗೂ ಶಸಕ್ತಿಕಾರಣ ಯೋಜನೆ ಪ್ರತಿ ವರ್ಷ ಬಡ ಪ್ರತಿಭವಂತ ಮಕ್ಕಳಿಗೆ ಟ್ಯೂಷನ್, ಶಿಕ್ಷಣ ಸಾಮಗ್ರಿ , ಸ್ಕ್ಯಾಲರ್ ಶಿಪ್ ನೀಡಿ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತಗಬಾರದು ಅನ್ನುವ ಗುರಿ ಹೊಂದಿದೆ ಹಾಗೆ ಈ ವರ್ಷ ದೇವದಾಸಿ ಕುಟುಂಬದಿಂದ 100 ಮಕ್ಕಳಿಗೆ ನೆರವು ನೀಡಲಾಗುತ್ತದೆ” ಎಂದು ತಿಳಿಸಿದರು.





