ಡಾ. ಸರೋಜಿನಿ ಮಹಿಷಿ ಅವರ ವರದಿ ಜಾರಿಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ಕಾರ್ಯಕರ್ತರು ವತಿಯಿಂದ ಹಾವೇರಿ ಪಟ್ಟಣದ ಜಿಲ್ಲಾಡಳಿತ ಭವನದ ಎದುರು ಇಂದು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿದ ನಂತರ ಕರವೆ ಪ್ರವೀಣ ಶೆಟ್ಟಿ ಬಣ ಸಂಘಟನೆಯ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಓಲೇಕಾರ ಮಾತನಾಡಿ, “1983 ರಲ್ಲಿ ಅಂದಿನ ಮುಖ್ಯಮಂತ್ರಿ ದಿ: ರಾಮಕೃಷ್ಣ ಹೆಗಡೆಯವರು ಕನ್ನಡಿಗರಿಗೆ ರಾಜ್ಯದಲ್ಲಿ ಪರಭಾಷಿಕರಿಂದ ಅನ್ಯಾಯವಾಗುತ್ತಿರುವುದನ್ನು ಅರಿತಿದ್ದರು. ರಾಜ್ಯದಲ್ಲಿ ಕನ್ನಡಿಗರಿಗೆ ದೊರೆಯುತ್ತಿದ್ದ ಉದ್ಯೋಗ ಅವಕಾಶಗಳನ್ನು ಕನ್ನಡಿಗರಿಗೆ ದೊರಕುವಂತೆ ಪರಿಶೀಲಿಸಿ ವರದಿ ನೀಡುವಂತೆ ಕೇಂದ್ರದಲ್ಲಿ ಸಚಿವರಾಗಿದ್ದ ಡಾ| ಸರೋಜಿನಿ ಮಹಿಷಿಯವರಿಗೆ ಒಪ್ಪಿಸಿದ್ದರು” ಎಂದರು.
ಕನ್ನಡಿಗರಿಗೆ ನ್ಯಾಯವಾಗಿ ಉದ್ಯೋಗ ಅವಕಾಶ ದೊರಕಬೇಕೆಂದು ಡಾ. ಸರೋಜಿನಿ ಮಹಿಷಿ ವರದಿ ನೀಡಿದ್ದರು. ಆದರೆ ಈಗಿನ ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದ ವರದಿಯನ್ನು ಇಂದಿಗೂ ಜಾರಿಗೊಳಿಸಲು ನಿರ್ಲಕ್ಷ ತೊರಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.
“ರಾಜ್ಯದಲ್ಲಿ ರಾಮಕೃಷ್ಣ ಹೆಗಡೆಯವರ ನಂತರ ಬಂದ ಎಲ್ಲ ಮುಖ್ಯಮಂತ್ರಿಗಳು ಕನ್ನಡಿಗರಿಗೆ ಹುಸಿ ಭರವಸೆ ನೀಡುವುದರ ಮೂಲಕ ಅನ್ಯಾಯ ಎಸಗುತ್ತಿದ್ದಾರೆ. ಚುನಾವಣಾ ಪೂರ್ವದಲ್ಲಿ ಕನ್ನಡ ಪರ ಹೇಳಿಕೆಯನ್ನು ನೀಡಿದ್ದಾರೆಯೇ ವಿನಃ ಕನ್ನಡಿಗರಿಗೆ ನ್ಯಾಯುತವಾಗಿ ಸಿಗಬೇಕಾದ ಉದ್ಯೋಗ ಕೊಡಿಸುವಲ್ಲಿ ಇಂದಿನ ಸರಕಾರ ವಿಫಲವಾಗಿವೆ” ಎಂದು ಹೇಳಿದರು.
“ಕೂಡಲೇ ತಾವು ಆಂದ್ರಸರ್ಕಾರದ ಮಾದರಿಯಲ್ಲಿ ಸ್ಥಳೀಯ ಕನ್ನಡಿಗರಿಗೆ ಅರೇ ಸರ್ಕಾರಿ/ಐಟಿಬಿಟಿ ಕಂಪನಿಗಳಲ್ಲಿ ಹಾಗೂ ಸಾರ್ವಜನಿಕ ಕ್ಷೇತ್ರಗಳಲ್ಲಿ ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ನಂತರ ಕರೆವೇ ಜಿಲ್ಲಾ ಮಹಿಳಾ ಮುಖಂಡರು ಅನುಸೂಯಾ ಸಿದ್ದಪ್ಪನವರ ಮಾತನಾಡಿ, “ಸ್ಥಳೀಯವಾಗಿ ಶೇ80 ಮೀಸಲಾತಿ ಕಲ್ಪಿಸಿ ಕನ್ನಡಿಗರಿಗೆ ಸ್ಥಳೀಯ ಕಂಪನಿಗಳಲ್ಲಿ ಉನ್ನತ ಹುದ್ದೆ ಕಲ್ಪಿಸಿಕೊಟ್ಟು ರಾಜ್ಯದಿಂದ ಹೊರ ರಾಜ್ಯಗಳಿಗೆ ಗುಳೇ ಹೋಗುವುದನ್ನು ತಪ್ಪಿಸಲು ಡಾ. ಸರೋಜಿನಿ ಮಹೇಷಿಯವರ ವರದಿ ಜಾರಿಗೊಳಿಸಲು ನಿರ್ಣಯ ಕೈಗೊಳ್ಳಬೇಕು. ಇಲ್ಲದೇ ಹೋದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ರಾಜ್ಯದ್ಯಂತರ ಬೃಹತ ಪ್ರತಿಭಟನೆ ಮಾಡಬೇಕಾಗುತ್ತದೆ” ಎಂದು ಎಚ್ಚರಿಸಿದರು.
ಈ ಸುದ್ದಿ ಒದಿದ್ದೀರಾ? ಹಾವೇರಿ | ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ; ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
ಈ ಸಂದರ್ಬದಲ್ಲಿ ಜಿಲ್ಲಾ ಮುಖಂಡರುಗಳಾದ, ಪುಟ್ಟಪ್ಪ ಹಿತ್ತಲಮನಿ, ಮಾರುತಿ ಹಾಲಗಿ, ವಿಜಯಕುಮಾರ ಎನ್..ಎಂ ಕುಮಾರ ಸುಳ್ಳನವರ, ರಿಯಾಜಅಹ್ಮದ ಲೋಹಾರ, ಮಾಲತೇಶ ಜಿ.ಕೆ, ಸುಧಾ ಪಾಟೀಲ, ರಮೇಶ ದಾಸಪ್ಪನವರ, ಗಾಳೆಪ್ಪ ಕುರುಬರ ಸದಾನಂದ ಪುಟ್ಟಪ್ಪನವರ ಸುರೇಶ ಲಚಮಣ್ಣನವರ, ಗೌರಮ್ಮ ಬೆಲ್ಲದ, ಫಕ್ಕೀರೇಶ ಕಟ್ಟಿಮನಿ, ಗುರುನಾಥ ರೆಡ್ಡಿ, ಮಂಜಪ್ಪ ಬುಳ್ಳಪ್ಪನವರ, ವಿರೇಶ ಹಲಗೇರಿ, ಹನುಮಂತ ತಂಬೂರಿಮ ನಾಗರತ್ನಾ ಪೂಜಾರ, ರೇಣುಕಾ ಮಾನೇಗಾರ, ಶಾರದಾ ಮೇಗಳಮನಿ, ಸೌಬಾಗ್ಯ ಭರಮಗಡ ನಾಗರಾಜ ಮಳಿಯಪ್ಪನವರ, ಲಕ್ಷ್ಮೀ ಗಂಗಮ್ಮನವರ, ಸೇರಿದಂತೆ ಹಲವರು ಉಪಸ್ಥಿತರಿದ್ದರು.





