ತೋಟಗಾರಿಕೆ ಇಲಾಖೆಯ ನಿವೃತ್ತ ಅಪರ ನಿರ್ದೇಶಕ ಡಾ.ಎಸ್ .ವಿ.ಹಿತ್ತಲಮನಿ ಅವರು ಕೃಷಿ ಕ್ಷೇತ್ರದ ಸಾಧನೆಗಾಗಿ ಪ್ರಸಕ್ತ ಸಾಲಿನ ರಾಜ್ಯೊತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಹಾವೇರಿ ಜಿಲ್ಲೆಯ ಮೋಟೆಬೆನ್ನೂರ ಮೂಲದ ನಿವೃತ್ತ ಕೃಷಿ ಅಧಿಕಾರಿ ಡಾ. ಎಸ್.ವಿ.ಹಿತ್ತಲಮನಿ ಅವರು ಹಾಲಿ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.
ಕೃಷಿ ವಿಷಯದಲ್ಲಿಸ್ನಾತಕೋತ್ತರ ಪದವಿ, ತೋಟಗಾರಿಕೆ ವಿಷಯದಲ್ಲಿಪಿಎಚ್ ಡಿ ಪಡೆದಿರುವ ಡಾ. ಎಸ್ .ವಿ. ಹಿತ್ತಲಮನಿ ಅವರು 1976ರಲ್ಲಿರಾಜ್ಯ ತೋಟಗಾರಿಕೆ ಇಲಾಖೆಯಲ್ಲಿಅಧಿಕಾರಿಯಾಗಿ ಸೇರಿದರು. ವಿವಿಧ ಹುದ್ದೆಗಳಿಗೆ ಪದೋನ್ನತಿಗೊಂಡ ಅವರು ಅಪರ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿ 2013ರಲ್ಲಿನಿವೃತ್ತರಾಗಿದ್ದಾರೆ.
“ನಿವೃತ್ತಿ ಬಳಿಕ 12 ವರ್ಷಗಳಿಂದ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಹೇಗೆ ತೋಟಗಾರಿಕೆ ಕೃಷಿಯನ್ನು ಲಾಭದಾಯಕ ಮಾಡಬಹುದು ಎಂದು ರಾಜ್ಯದ ಹಲವು ರೈತರಿಗೆ ಸಲಹೆ ನೀಡುತ್ತಿದ್ದಾರೆ.
ಕಡಿಮೆ ಮಳೆ ಇರುವ ಪ್ರದೇಶದಲ್ಲಿಯಾವ ಬೆಳೆ ಸೂಕ್ತ ಎಂಬ ವಿಷಯಗಳ ಕುರಿತು ಸಂಶೋಧನೆ , ಅಧ್ಯಯನ ಮಾಡುತ್ತಿದ್ದಾರೆ. ಕೃಷಿ ಕ್ಷೇತ್ರದಲ್ಲಿನ ಇವರ ಸೇವೆ ಪರಿಗಣಿಸಿ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ.
ತೋಟಗಾರಿಕೆ ಇಲಾಖೆಯಲ್ಲಿಸೇವೆ ಸಲ್ಲಿಸುವಾಗಿನಿಂದ ಈವರೆಗೆ ಡಾ.ಹಿತ್ತಲಮನಿ ಅವರು ರೈತರಿಗೆ ಉಚಿತವಾಗಿ ಸಲಹೆ, ಮಾರ್ಗದರ್ಶನ, ತರಬೇತಿ ನೀಡುತ್ತ ಬಂದಿದ್ದಾರೆ. ತೋಟಗಾರಿಕೆ ಬೆಳೆಗಳಲ್ಲಿಹೊಸ ಹೊಸ ತಳಿಗಳನ್ನು ಸಂಶೋಧಿಸಿ ಅದಕ್ಕೆ ಹೆಸರು ಸೂಚಿಸಿ, ರೈತರಿಗೆ ನೆರವಾಗಿದ್ದಾರೆ. ನೇರಳೆ, ಚಕೋತ, ಪಪ್ಪಾಯ, ಮಾವು, ಹಲಸು, ಇತರ ಹಣ್ಣುಗಳ ಹೊಸ ತಳಿಗಳ ಸಂಶೋಧನೆ ಮಾಡುವ ಮೂಲಕ ರೈತರಿಗೆ ಹೆಚ್ಚು ಇಳುವರಿ ನೀಡುವ, ಆರ್ಥಿಕವಾಗಿ ಸಹಕಾರಿಯಾಗುವ ಕೆಲಸಗಳನ್ನು ಮಾಡಿದ್ದಾರೆ.
ರೈತರ ತೋಟದಲ್ಲಿಹೋಗಿ ಪ್ರಾಯೋಗಿಕವಾಗಿ ತರಬೇತಿ ನೀಡುವ ಮೂಲಕ ತೋಟಗಾರಿಕೆ ಬೆಳೆಗಳ ಕುರಿತು ತಿಳಿವಳಿಕೆ ಮೂಡಿಸುತ್ತಿದ್ದಾರೆ. ಕೃಷಿಯಲ್ಲಿಸಂರಕ್ಷಣಾ ತಂತ್ರಗಳ ಅಳವಡಿಕೆ, ಸಾವಯವ ಕೃಷಿ, ತಂತ್ರಜ್ಞಾನ ಬಳಕೆ, ಇತರ ಅಂಶಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.





