ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಧ್ವನಿ ಚಂದ್ರಕಾಂತ್ ಎಸ್ ಎಸ್ ಕಾದ್ರೊಳ್ಳಿ ಬಣ ಸಂಘಟನೆ ವತಿಯಿಂದ ಪದಾಧಿಕಾರಿಗಳ ಆಯ್ಕೆ ಸಭೆಯನ್ನು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿತ್ತು.
ಸಭೆಯಲ್ಲಿ ಡಿ ಎಸ್ ಎಸ್ ಜಿಲ್ಲಾ ಅಧ್ಯಕ್ಷರು ನಾಗರಾಜ ಬಣಕಾರ ಅವರ ಅನುಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, “ತಾಲೂಕ ಘಟಕದ ಎಲ್ಲಾ ಪದಾಧಿಕಾರಿಗಳು ಕೂಡ ಗ್ರಾಮಕ್ಕೆ ಭೇಟಿ ನೀಡಿ ಸಮುದಾಯದ ಜನರಿಗೆ ಸರಕಾರಿ ಯೋಜನೆಗಳ ಬಗ್ಗೆ ಮನವರಿಕೆ ನಾಡಲು ಮುಂದಾಗಬೇಕು. ಸಮುದಾಯದ ಜನರ ಕುಂದು ಕೊರತೆಗಳನ್ನು ಅರಿಯಬೇಕು” ಎಂದರು.
ಇತ್ತೀಚೆಗೆ ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದು ,ಪ್ರತಿ ಮಕ್ಕಳಿಗೂ ಹೆಚ್ಚಿನ ಒತ್ತನು ಕೊಡಬೇಕು, ಯಾಕೆ ಅಂದರೆ ಒಂದು ಕುಟುಂಬದಲ್ಲಿ ಒಬ್ಬ ಶಿಕ್ಷಣವನ್ನು ಪಡೆದು ಉನ್ನತ ಸರ್ಕಾರಿ ಹುದ್ದೆ ಆಗಿರಬಹುದು ಅಥವಾ ಖಾಸಗಿ ಹುದ್ದೆಯಲ್ಲಿ ಇದ್ದರೆ ಆ ಕುಟುಂಬದ ಬಡತನ ನಿವಾರಣೆಯಾಗುತ್ತದೆ ಮತ್ತು ಆರ್ಥಿಕವಾಗಿ ಸಭಲರಾಗುತ್ತಾರೆ.
ಮುಂದಿನ ದಿನಗಳಲ್ಲಿ ರಾಜ್ಯಾಧ್ಯಕ್ಷರು ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡಿದ್ದು, ತಾಲ್ಲೂಕಿನಲ್ಲಿ ಅದರ ಪೂರ್ವ ಸಿದ್ಧತೆಗಳ ಬಗ್ಗೆ ಚರ್ಚೆ ಮಾಡಲಾಯಿತು.
ಸಂಘಟನೆಯ ನೂತನ ಪದಾಧಿಕಾರಿಗಳು ತಾಲೂಕ ಉಪಾಧ್ಯಕ್ಷರು ರಾಜಪ್ಪ ಡಿ ಹರಿಜನ, ತಾಲೂಕ ಗೌರವ ಅಧ್ಯಕ್ಷರು ನಾಗರಾಜ್ ಕೆಪಿ, ತಾಲೂಕ ಕಾರ್ಯದರ್ಶಿ, ಶ್ರೀಕಾಂತ್ ದೊಡ್ಮನಿ, ತಾಲೂಕ ಸಹ ಕಾರ್ಯದರ್ಶಿ ಮಾಲತೇಶ್ ಪುಟ್ಟಪ್ಪ ಹರಿಜನ, ತಾಲೂಕ ಪ್ರಧಾನ ಕಾರ್ಯದರ್ಶಿ ರಾಜು ರಾಮಪ್ಪ ಹನುಮನವರ, ತಾಲೂಕ ಕೋಶ ಅಧ್ಯಕ್ಷರು ಶ್ರೀಕಾಂತ್ ಹರಿಜನ, ತಾಲೂಕ ಸಂಘಟನಾ ಕಾರ್ಯದರ್ಶಿ ಮಲ್ಲೇಶ್ ಇಚ್ಚಂಗಿ, ಸಹ ಸಂಘಟನಾ ಕಾರ್ಯದರ್ಶಿ, ದುರ್ಗಪ್ಪ ಬ ದೊಡ್ಡಮನಿ, ತಾಲೂಕ ಖಜಾಂಚಿ ಯಾಗಿ, ನಾಗರಾಜ್ ತೋ ಹರಿಜನ, ತಾಲೂಕ ಸಲಹಾ ಸಮಿತಿ ಸದಸ್ಯರು ಪ್ರಭು ಹರಿಜನ, ಭೀಮೇಶ್ ಗಿಡ್ಡಣ್ಣನವರ, ಬಸವರಾಜ್ ಹರಿಜನ ಆಯ್ಕೆ ಮಾಡಲಾಗಿದೆ.
ಸಭೆಯಲ್ಲಿ ಡಿ ಎಸ್ ಎಸ್ ಜಿಲ್ಲಾ ಉಪಾಧ್ಯಕ್ಷರು ಚನ್ನಪ್ಪ ಡಿ ಹರಿಜನ, ಬ್ಯಾಡಗಿ ತಾಲೂಕು ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿಗಳು ಐಶ್ವರ್ಯ ಹರಿಜನ, ಬ್ಯಾಡಗಿ ತಾಲೂಕು ಅಧ್ಯಕ್ಷರು ಮಾಲತೇಶ್ ಪೂಜಾರ, ಮಹಿಳಾ ಘಟಕದ ಅಧ್ಯಕ್ಷರು, ಲಲಿತಾ ಬ ಹರಿಜನ ಉಪಸ್ಥಿತರಿದ್ದರು.





