ಪಶ್ಚಿಮ ಪದವೀಧರ ಮತಕ್ಷೇತ್ರದ ಚುನಾವಣೆಗೆ ಮತಪಟ್ಟಿಗೆ ಪದವೀಧರರನ್ನು ಸೇರ್ಪಡೆ ಮಾಡಿಕೊಳ್ಳಲು ಅವಧಿಯನ್ನು ವಿಸ್ತರಿಸುವಂತೆ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ರಾಜದಯ ಕಾರ್ಯದರ್ಶಿ ಬಸವರಾಜ ಪೂಜಾರ ಮನವಿ ಮಾಡಿದ್ದಾರೆ.
ಹಾವೇರಿ ಪಟ್ಟಣದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ್ ಅವರ ಮೂಲಕ ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಮುಖ್ಯ ಆಯುಕ್ತರಿಗೆ ಮನವಿ ಸಲ್ಲಿಸಿ ಮಾತನಾಡಿದರು.
“ಈಗಾಗಲೇ ಪಶ್ಚಿಮ ಪದವೀಧರ ಮತಕ್ಷೇತ್ರದ ಚುನಾವಣೆಗೆ ಮತಪಟ್ಟಿಗೆ ಪದವೀಧರನ್ನು ಸೇರ್ಪಡೆ ಮಾಡಿಕೊಳ್ಳಲು ನವಂಬರ್ 2025 ರವೆಗೆ ಇದ್ದ ಅವಧಿಯನ್ನು ಒಂದು ಬಾರಿ ಅಂದರೆ ದಿನಾಂಕ: 10.12.2025 ರವರೆಗೆ ಅವಧಿ ವಿಸ್ತರಿಸಿದ್ದೀರಿ. ಆದರೆ ಇನ್ನೂ ಹಲವಾರು ಪದವಿಧರರು ನೋಂದಣಿ ಮಾಡಿಕೊಂಡಿಲ್ಲ. ಅಲ್ಲದೇ ಈಗಾಗಲೇ ಇಲಾಖೆಯಿಂದ ಈ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ನಡೆದಿದೆಯಾದರೂ ನೋಂದಣಿಯಾಗುವವರು ಬಹಳ ಜನ ಪದವಿಧರರು ಬಾಕಿ ಇದ್ದಾರೆ” ಎಂದರು.
“ಹಾಗಾಗಿ ಪಶ್ಚಿಮ ಪದವೀಧರ ಮತಕ್ಷೇತ್ರದ ಚುನಾವಣೆಗೆ ಮತಪಟ್ಟಿಗೆ ಪದವಿಧರರನ್ನು ಸೇರ್ಪಡೆ ಮಾಡಿಕೊಳ್ಳಲು ಅಂತಿಮ ದಿನಾಂಕ: 10.12.2025ವನ್ನು ಕನಿಷ್ಠ ಒಂದು ತಿಂಗಳು ಕಾಲ ಅವಧಿ ವಿಸ್ತರಣೆ ಮಾಡಬೇಕು. ಹಾಗೂ ಈ ಅವಧಿಯಲ್ಲಿ ಪದವೀಧರರ ಮತಪಟ್ಟಿಗೆ ತಮ್ಮ ಹೆಸರನ್ನು ಪದವಿದರರು ನೋಂದಣಿ ಮಾಡಿಕೊಳ್ಳುವಂತೆ ಇಲಾಖೆಯಿಂದ ಇನ್ನಷ್ಟು ಜಾಗೃತಿ ಮೂಡಿಸುವ ಕಾರ್ಯವನ್ನು ಇಲಾಖೆಯು ಕೈಗೊಳ್ಳಬೇಕು” ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಡಿವೈಎಫ್ಐ ಮುಖಂಡರಾದ ನಾಗರಾಜ ರಿತ್ತಿಕುರಬರ, ಹಿರಿಯ ರೈತ ಮುಖಂಡರಾದ ತಿರಕಪ್ಪ ಹುಳಕೆಲ್ಲಪ್ಪನವರ ಉಪಸ್ಥಿತರಿದ್ದರು.





