“ಆರೋಗ್ಯ ಎಂದರೆ ದೈಹಿಕ, ಮಾನಸಿಕವಾಗಿ ಆರೋಗ್ಯದಿಂದ ಇರುವುದು.ಆರೋಗ್ಯವಂತರಾಗಿ ಇರಲು ಮುಂಜಾಗೃತೆ ಕ್ರಮವಾಗಿ ಪೌಷ್ಟಿಕ ಆಹಾರ ಸೇವನೆ ಮಾಡಬೇಕು. ಪ್ರತಿ ಹಳ್ಳಿಗಳಲ್ಲಿ ಆರೋಗ್ಯ ಜನರ ಹಕ್ಕಾಗಬೇಕು” ಎಂದು ಉಚಿತ ಕಣ್ಣಿನ ತಪಾಸಣೆ ಶಿಬಿರದಲ್ಲಿ ಲೊಯೋಲ ವಿಕಾಸ ಕೇಂದ್ರ ನಿರ್ದೇಶಕರು ಫಾದರ್ ವಿನ್ಸಂಟ್ ಜೈಸನ್ ಹೇಳಿದರು.
ಹಾನಗಲ್ಲ ತಾಲೂಕಿನ ಹುಲ್ಲತ್ತಿ ಗ್ರಾಮದಲ್ಲಿ, ಲೊಯೋಲ ವಿಕಾಸ ಕೇಂದ್ರ, ಹಾನಗಲ್ಲ ಸಮಗ್ರ ಸುಸ್ಥಿರ ಯೋಜನೆ ಅಡಿಯಲ್ಲಿ ಹಾಗೂ ಎಮ್, ಎಮ್ ಜೋಶಿ ಕಣ್ಣಿನ ಆಸ್ಪತ್ರೆ ಹುಬ್ಬಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣೆ ಮತ್ತು ಆರೋಗ್ಯ ಶಿಬಿರ ನಡೆಯಿತು.
ವೈದ್ಯಾಧಿಕಾರಿ ಡಾ|ಆನಂದ ನಾಯಕ ಮಾತನಾಡಿ, “ಆಹಾರ, ವ್ಯಾಯಾಮ ಮತ್ತು ಸ್ವಚ್ಛತೆಯ ಬಗ್ಗೆ ಉಪಯುಕ್ತ ಸಲಹೆಗಳನ್ನು ನೀಡಿದರು. ಹಾಗೂ ಇಂತಹ ಶಿಬಿರಗಳ ಸದುಪಯೋಗ ಪಡೆದುಕೊಂಡು ಆರೋಗ್ಯದ ಕಾಳಜಿ ವಹಿಸಬೇಕು” ಎಂದು ಹೇಳಿದರು.
ಈ ಶಿಬಿರದಲ್ಲಿ ತೊಂಬತ್ತಕ್ಕೂ ಹೆಚ್ಚು ಜನರು ಭಾಗವಹಿಸಿ ಶಿಬಿರದ ಸದುಪಯೊಗ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿಗಳಾದ ಡಾ//ವಿರುಪಾಕ್ಷಗೌಡ, ಎಮ್, ಎಮ್ ಜೋಶಿ ಕಣ್ಣಿನ ಆಸ್ಪತ್ರೆಯ ಸಂಯೋಜಕರಾದ ಜಾಫರಸಾಬ ಬಡ್ನಿ, ಪ್ರೇಮಾ ಪರಶುರಾಮ ಪೂಜಾರ ಅಧ್ಯಕ್ಷರು ಗ್ರಾ,ಪಂ ಹುಲ್ಲತ್ತಿ, ಹೆಚ್ ಎಸ್ ಅಪ್ಪಣ್ಣವರ ಎಸ್ ಡಿ ಎಮ್ ಸಿ ಅಧ್ಯಕ್ಷರು ಹುಲ್ಲತ್ತಿ, ಲೊಯೋಲ ಸಿಬ್ಬಂದಿಗಳಾದ ಪೀರಪ್ಪ ಶಿರ್ಶಿ, ಲೋಹಿತ ಕಾಟಣ್ಣವರ, ಮಂಜುಳಾ ನಾಗೋಜಿ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.





