“ಜಿಲ್ಲೆಯಲ್ಲಿ ಕರಾಟೆಗೆ ಪ್ರೋತ್ಸಾಹ ನೀಡಲು ಹಿರಿಯ ತರಬೇತಿದಾರರು ಸಿದ್ದರಿದ್ದೇವೆ. ಎಲ್ಲಾ ವಯಸ್ಸಿನವರು ಕಲಿಯಬಹುದು. ನಮ್ಮನ್ನು ನಾವು ಆತ್ಮರಕ್ಷಣೆ ನೀಡುವ ಕರಾಟೆಯನ್ನು ಸರ್ಕಾರ ಪ್ರೋತ್ಸಾಹಿಸಬೇಕಿದೆ” ಎಂದು ಕರಾಟೆ ತರಬೇತಿದಾರ ಉಡಚಪ್ಪ ಮಾಳಗಿ ಹೇಳಿದರು.
ಹಾವೇರಿ ಪಟ್ಟಣದ ಜಿಲ್ಲಾ ಕ್ರೀಡಾಂಗಣದ ಒಳಾಂಗಣದಲ್ಲಿ ಆಯೋಜಿಸಿದ ಕರಾಟೆ ಬ್ಲಾಕ್ ಬೆಲ್ಟ್, ಬ್ರೌನ್ ಬೆಲ್ಟ್, ಆರಂಜಿ, ಪಿಂಕ್ ಹಾಗೂ ವೈಟ್ ಬೆಲ್ಟ್ ಪರೀಕ್ಷೆಯಲ್ಲಿ ಉತ್ತಿರ್ಣರಾದವರಿಗೆ ಬೆಲ್ಟ್ ಸರ್ಟಿಪಿಕೆಟ್ ವಿತರಣಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
“ಎಲ್ಲಾ ಕಾಲ-ಸಂದರ್ಭಗಳಲ್ಲಿ ತಮ್ಮ ಆತ್ಮ ರಕ್ಷಣೆ ಮಾಡಿಕೊಳ್ಳಲು ಕರಾಟೆ ಸಹಕಾರಿಯಾಗಲಿದೆ.ಕರಟೆಯ ತರಬೇತಿಯನ್ನು ಆಸಕ್ತಿದಾಯಕವಾಗಿ ಕಲಿಯಲು ಕಿರಿಯ-ಹಿರಿಯರು ಮುಂದಾಗಬೇಕು.ಹೆಚ್ಚಿನ ಪ್ರೋತ್ಸಾಹ ನೀಡಲು ಸರ್ಕಾರ ಮುಂದಾಗಬೇಕು” ಎಂದರು.
ಗ್ರೈಡ್ ಮಾಸ್ಟರ್,7ನೇ ಬ್ಲಾಕ್ ಬೆಲ್ಟ್ ತರಬೇತಿದಾರರಾದ ಮಂಜುನಾಥ ಜೈನ್ ಅವರು ಕರಾಟೆ ಬ್ಲಾಕ್ ಬೆಲ್ಟ್,ಬ್ರೌನ್ ಬೆಲ್ಟ್.ಆರಂಜಿ,ಪಿಂಕ್ ಹಾಗೂ ವೈಟ್ ಬೆಲ್ಟ್ ಪರೀಕ್ಷೆಯಲ್ಲಿ ಉತ್ತಿರ್ಣರಾದವರಿಗೆ ಬೆಲ್ಟ್ ಸರ್ಟಿಪಿಕೆಟ್ ಹಾಗೂ ಬೆಲ್ಟ್ ವಿತರಣೆ ಮಾಡಿ ಮಾತನಾಡಿದ ಅವರು “ಹೆಚ್ಚಿನ ಸಂಖ್ಯೆಯಲ್ಲಿ ಕರಾಟೆ ತರಬೇತಿ ಪಡೆಯಲು ವಿದ್ಯಾರ್ಥಿಗಳು ಮುಂದೆ ಬರಬೇಕಿದೆ. ಆರೋಗ್ಯಕರ ಸಮಾಜಕ್ಕೆ ಕರಾಟೆ ಸಹಕಾರಿಯಾಗಲಿದೆ” ಎಂದರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಹರೀಶ ಮಾಳಗಿ, ಉಪಾಧ್ಯಕ್ಷರಾದ ರಾಮು ಯಳ್ಳೂರ,ಫಕ್ಕಿರೇಶ ಹರಿಜನ,ಅಹ್ಮದಶರೀಪ ತೆರಣಿ,ಕೋಚಿಂಗ್ ಮಾಸ್ಟರ್ ಮಂಜುನಾಥ ಕೆರೆಕೊಪ್ಪ,ಆಕಾಶ ಜೈನ್, ಪ್ರದೀಪ ಉಪ್ಪಾರ, ಶ್ರೀಧರ ಬ್ಯಾಡಗಿ, ಪ್ರದೀಪಕುಮಾರ ಉಪ್ಪಾರ ಕರಾಟೆ ಸಂಘದ ಪದಾಧಿಕಾರಿಗಳು,ಕರಾಟೆ ತರಬೇತಿದಾರರು ಹಾಗೂ ಕರಾಟೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.





