ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕ ಯಲಿವಾಳ ಗ್ರಾಮದಲ್ಲಿ ನೂತನವಾಗಿ ವೀರರಾಣಿ ಕಿತ್ತೂರು ಚನ್ನಮ್ಮ ಅಭಿಮಾನಿ ಬಳಗದ ವತಿಯಿಂದ ರಾಣಿ ಚನ್ನಮ್ಮನವರ ಪುತ್ಥಳಿ ಅನಾವರಣ ಮತ್ತು ಲೋಕಾರ್ಪಣೆ ಕಾರ್ಯಕ್ರಮ ಜರುಗಿತು.
ಪರಮಪೂಜ್ಯ ಶ್ರೋ.ಬ್ರ. ಸದ್ಗುರು ಶ್ರೀ ಶಂಕರಾನಂದ ಮಹಾಸ್ವಾಮಿಗಳು ಶ್ರೀ ಸಿದ್ದಾರೂಢಮಠ ಹೋತನಹಳ್ಳಿ ಇವರು ಸಾನಿದ್ಯ ವಹಿಸಿ ಚನ್ನಮ್ಮನ ಪುಥ್ಥಳಿ ಯನ್ನು ಅನಾವರಣಗೊಳಿಸಿ ಆಶೀರ್ವಚನ ನೀಡಿದರು. ಮುಖಂಡರಾದ ಮಂಜುನಾಥ ಕುನ್ನೂರ,
ರಾಜಶೇಖರ ಕಟ್ಟೇಗೌಡ್ರ, ಪದ್ಮನಾಭ ಕುಂದಾಪುರ, ಎಮ್ ಎಸ್ ಪಾಟೀಲ ಬ್ಯಾಡಗಿ ವಿಧಾನಸಭಾ ಕ್ಷೇತ್ರ,ಮೃತುಂಜಯ ಹರಶಟ್ರ,ಚನ್ಬಬಪ್ಪ ಹಾವಣಗಿ, ಶಂಕರಪ್ಪ ಕ್ಯಾಸನಕೇರಿ,ವಿನಾಯಕ ಕುರುಬರ,ಬಸವಂತಪ್ಪ ಮೆಳ್ಳಳ್ಳಿ ವೀರನಗೌಡ ಮಾಳಗಿ,ಜಗದೀಶ ಪಾಟೀಲ,ಅಣ್ಣಪ್ಪ ರಂಗಣ್ಣನವರ,ಬಸವರಾಜ ಕೋಣತೇರ,ಶಾರವ್ವ ಹಕ್ಲವ್ವನವರ ಸೇರಿದಂತೆ ಪ್ರಮುಖರು ಚನ್ನಮ್ಮನ ಪುಥ್ಥಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಲೋಕಾರ್ಪಣಿಗೊಳಿಸಿ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಿತನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಊರಿನ ಪ್ರಮುಖರು, ಹಿರಿಯರು, ಮಹಿಳೆಯರು, ಮಕ್ಕಳು,vರೈತ ಸಂಘದ ಕಾರ್ಯಕರ್ತರು, ಮಹಿಳಾ ಸಂಘದ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು.





