ಹಾವೇರಿ | ಭಾರತದ ಸಂಸ್ಕೃತಿಯನ್ನು ಯುವ ಪೀಳಿಗೆ ಆಚರಿಸುವ ಅಗತ್ಯವಿದೆ: ರಾಜೇಶ್ ಚೌಹಾಣ

Date:

“ಭಾರತದ ಸಂಸ್ಕೃತಿ ಸಂಸ್ಕಾರಗಳನ್ನು ಇಂದಿನ ಯುವ ಪೀಳಿಗೆ ಅನುಸರಿಸಿ ಆಚರಿಸುವ ಅಗತ್ಯವಿದೆ. ಹಿರಿಯರು ಮಕ್ಕಳಿಗೆ ಇಂತಹ ಮಾರ್ಗದರ್ಶನ ಮಾಡಬೇಕು” ಎಂದು ಕೆಡಿಪಿ ಸದಸ್ಯ ರಾಜೇಶ್ ಚೌಹಾಣ ಹೇಳಿದರು.

ಹಾವೇರಿ ಜಿಲ್ಲೆಯ ಹಾನಗಲ್ಲಿ ಪಟ್ಟಣದ ರೋಶನಿ ಸಮಾಜ ಸೇವಾ ಸಂಸ್ಥೆಯಲ್ಲಿ ಆಯೋಜಿಸಿದ ಯುವ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

“ನಮ್ಮ ಜನಪದ ಸಂಸ್ಕೃತಿಯನ್ನು ತಿಳಿಯಲು ಇಂದಿನ ಯುವಕರು ಅದರ ಮಾರ್ಗದರ್ಶನ ಹಾಗೂ  ಅದರಲ್ಲಿಯೂ ಸಾಂಸ್ಕೃತಿಕ ಪರಿಚಯವಾಗಬೇಕಾಗಿದೆ. ಅದಕ್ಕಾಗಿ ಯುವ ಜನತೆಗೆ ಇಂತ ಸ್ಪರ್ಧೆಗಳನ್ನು ನಡೆಸುವ ಮೂಲಕ ನಮ್ಮ ಜನಪದದ ಕಾಳಜಿಗೆ ಸಹಕರಿಬೇಕು” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮುಖ್ಯ ಅತಿಥಿ ಶಿಕ್ಷಕ ಜಗದೀಶ ಮಡಿವಾಳರ ಮಾತನಾಡಿ, “ಯುವಕರಿಗೆ ಹೊಸ ವೈಚಾರಿಕ ಸಾಂಸ್ಕೃತಿಕ ಚಿಂತನೆಗಳ ಪರಿಚಯವಾಗಬೇಕು. ನಮ್ಮ ದೇಶಿಯ ಕಲೆಗಳ ಅರಿವು ಮೂಡಿಸಬೇಕು. ನಮ್ಮ ಆಚರಣೆಗಳಲ್ಲಿರುವ ಸಾಂಸ್ಕೃತಿಕ ಅಂಶಗಳ ಅರಿವು ಮೂಡಿಬೇಕು. ಯುವಕರು ಉತ್ತಮ ಗುಣ ಸ್ವಭಾವಗಳನ್ನು ಅರಿತು ಆಚರಿಸಲು ಇಂತಹ ಚಟುವಟಿಕೆಗಳು ಸಹಕಾರಿ” ಎಂದರು.

ರೋಶನಿ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕಿ ಅನಿತಾ ಡಿಸೋಜ ಅಧ್ಯಕ್ಷತೆವಹಿಸಿ ಮಾತನಾಡಿ, “ನಮ್ಮ ಯುವಕರು ಬಂದ ಸಮಸ್ಯೆಗಳನ್ನು ಸನ್ನದ್ಧರಾಗಬೇಕು. ದೇಶದ ಭವಿಷ್ಯ ಯುವಕರ ಕೈಯಲ್ಲಿದೆ. ನಮ್ಮ ಸಂಸ್ಥೆ ಯುವ ಸಮುದಾಯದ ಹಿತಕ್ಕಾಗಿ ಸದಾ ಸಿದ್ಧವಿದೆ ಎಂದರು.

ವಿವಿಧಸ್ಪರ್ಧೆಗಳ ನಿರ್ಣಾಯಕರು ಡಾ.ಎನ್.ಎಫ್.ಕಮ್ಮಾರ, ಸ್ವಪ್ನ ಪವಾರ ಕಾರ್ಯ ನಿರ್ವಹಿಸಿದರು. ಲಕ್ಷ್ಮಿದೇವಿ ಯುವಕರ ಸಂಘ ಡೊಳ್ಳು ಕುಣಿತಕ್ಕೆ ಪ್ರಥಮ ಬಹುಮಾನ ಮತ್ತು ನಿಸೀಮೇಶ್ವರ ಯುವಕರ ಸಂಘ ಆಲದಕಟ್ಟಿ ದ್ವಿತೀಯ ಹಾಗೂ ಸೇವಾಲಾಲ ಬಾಳೂರ ತಂಡ ತೃತೀಯ ಸ್ಥಾನ ಹಾಗೂ ಮಾತಂಗೇಶ್ವರ ಭಜನಾ ಸಂಘ ಕಲ್ಲಾಪೂರ ಮತ್ತು ಬಾಳಂಬೀಡ ಹೆಣ್ಣು ಮಕ್ಕಳ ಡೊಳ್ಳು ಕುಣಿತ ಸಮಾಧಾನಕರ ಬಹುಮಾನ ಪಡೆದುಕೊಂಡರು.

ಬಿ.ಆರ್. ಶೆಟ್ಟರ, ಚೈತ್ರಾ ಕಂಬಾಳಿಮಠ, వరాం, ಪಾಲಾಕ್ಷಯ್ಯ ಹಿರೇಮಠ, ರಾಜೇಂದ್ರ ಈಳಿಗೇರ, ಲಕ್ಷ್ಮ ಆಲೂರ, ಜನ ವೇದಿಕೆ ಮುಖಂಡರು ಮತ್ತು ಹಳ್ಳಿ ಅಭಿನವೃದ್ಧಿ ಸಮಿತಿ ಸದಸ್ಯರು, ರೋಶನಿ ಸಂಸ್ಥೆಯ ಸಿಬ್ಬಂದಿ ವರ್ಗ ಮತ್ತು ವ್ಯಸನ ಮುಕ್ತ ಕೇಂದ್ರದಶಿಬಿರಾರ್ಥಿಗಳುಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪರಸಪ್ಪ ದಾಳೇರ, ಪ್ರಕಾಶ ನಂದಿಕೊಪ್ಪ, ಎನ್. ಎಂ ಪೂಜಾರ, ರಶೀದ್ ಆಹ್ಮದ್ ದೊಡ್ಡನಿ ಇದ್ದರು. ಮಂಜುನಾಥ ಗೌಳಿ ನಿರೂಪಿಸಿದರು. ನಿರ್ಮನಿ ಮಡಿವಾಳರ ವಂದಿಸಿದರು. ಯುವಕರು ಮತ್ತು ಲಿಂಗತ್ಯ ಅಲ್ಪಸಂಖ್ಯಾತರರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಲಂಬಾಣಿ ನೃತ್ಯ, ಭಜನಾಪದಗಳು, ಡೊಳ್ಳುಕುಣಿತ ಕಲೆಗಳಿಗೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...