ಹಾವೇರಿ ಜಿಲ್ಲೆಯ ಹಾನಗಲ್ಲ ಪಟ್ಟಣದ ರೋಶನಿ ಸಮಾಜ ಸೇವಾ ಸಂಸ್ಥೆ, ಸೇಂಟ್ ಜೋಸೆಫ್ ಕಾಲೇಜ್ ಆಫ್ ಲಾ ಬೆಂಗಳೂರು ಕಾನೂನು ಸೇವಾ ಸಮಿತಿ ಹಾನಗಲ್ ಇವರ ಸಯುಕ್ತ ಆಶ್ರಯದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮವನ್ನು ರೋಷನಿ ವ್ಯಸನ ಮುಕ್ತ ಕೇಂದ್ರ ನಾಲ್ಕರ ಕ್ರಾಸ್ ನಲ್ಲಿ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಸ್ತಾವಕವಾಗಿ ರೋಶನಿ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕಿ ಸಿಸ್ಟರ್ ಅನಿತಾ ಡಿಸೋಜ ಅವರು ಮಾತನಾಡಿ, “ನಮ್ಮ ಸಂಸ್ಥೆಯಿಂದ ಸುಮಾರು ಏಳು ನೂರು ನೂನ್ಯತೆ ಹೊಂದಿರುವ ಮಕ್ಕಳನ್ನು ಗುರುತಿಸಿ, ಅವರ ಸಾಮರ್ಥ್ಯವನ್ನು ಹೆಚ್ಚಿಸುವಂತಹ ಕೆಲಸವನ್ನು ಮಾಡಲಾಗಿದೆ” ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಂತಿ ಸದನ ಕಾನ್ವೆಂಟಿನ ಸಿಸ್ಟರ್ ಅಮಿತಾ ಮಸ್ಕರೇನಸ್ ಸುಪಿರಿಯರ್ ಅವರ ರು ಮಾತನಾಡಿ, “ಸಮಾಜದಲ್ಲಿರುವ ಪ್ರತಿಯೊಬ್ಬ ಸದಸ್ಯರನ್ನು ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಹೊಣೆಯಾಗಿದೆ. ವಿಶೇಷ ಚೇತನರನ್ನ ಸಬಲೀಕರಣ ಮಾಡುವ ಮೂಲಕ ಸಮಾಜವನ್ನು ಉತ್ತಮಪಡಿಸಬೇಕಾಗಿದೆ” ಎಂದರು.
ಜಿಲ್ಲಾ ವಿಕಲಚೇತನರ ಸಂಘದ ಅಧ್ಯಕ್ಷರು ಪುಟ್ಟಪ್ಪ ಮಲ್ಲಪ್ಪ ಜಲವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, “ರೋಶನಿ ಸಮಾಜ ಸೇವಾ ಸಂಸ್ಥೆಯ ಕಾರ್ಯಕ್ರಮಗಳನ್ನು ಅಭಿನಂದಿಸಿ, ಅನುಕಂಪದ ಬದಲಾಗಿ ವಿಶೇಷ ಚೇತನರಿಗೆ ಅವಕಾಶಗಳನ್ನು ಕೊಡಬೇಕಾಗಿದೆ” ಎಂದರು.
ಪ್ರಗತಿಪರ ಸಂಘಟನೆಯ ಅಧ್ಯಕ್ಷರು ಎನ್.ಎಂ.ಪೂಜಾರ್ ಮಾತನಾಡಿ, “ಮಕ್ಕಳಲ್ಲಿ ದೇವರನ್ನ ಕಾಣೊಣ. ಈ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಪ್ರಗತಿಪರ ಸಂಘಟನೆ ಯಾವತ್ತೂ ಕೈಜೋಡಿಸುತ್ತಿದೆ” ಎಂದು ಹೇಳಿದರು.
ಅಂಬೇಡ್ಕರ್ ಪರಿನಿರ್ವಾಹಣ ದಿನದಂದು ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಸಂಘಟನೆಯಿಂದ ಬಹುಮಾನ ವಿತರಿಸಲಾಯಿತು. ಮಕ್ಕಳ ಪಾಲಕರಾದ ರಮೇಶ್ ಹಿಂದಿನಮನಿ ಇವರನ್ನು ಸನ್ಮಾನಿಸಲಾಯಿತು. ಹಾಗೂ ಹಾನಗಲ್ ತಾಲೂಕಿನ ಇಬ್ಬರು ವಿಶೇಷ ಚೇತನ ವ್ಯಕ್ತಿಗಳು ಗುತ್ತೇಪ್ಪ ಅಜ್ಜಪ್ಪ ಅಂಬಿಗೇರ್ ಮತ್ತು ಸಂಜೀವಯ್ಯ ಮಲ್ಲಯ್ಯ ಹಿರೇಮಠ್ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಹಾನಗಲ್ ಮತ್ತು ಶಿಗ್ಗಾವ್ ತಾಲೂಕಿನ ವಿಶೇಷ ಚೇತನ ಮಕ್ಕಳು ಮತ್ತು ಅವರ ಪಾಲಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಶಿಗ್ಗಾವಿ ಮತ್ತು ಹಾನಗಲ್ಲ ತಾಲೂಕಿನ ವಿವಿಧೋದ್ದೇಶ ಕಾರ್ಯಕರ್ತರು ಶೇಕಪ್ಪ ಹುಲ್ಲತ್ತಿ, ಸಿದ್ದಪ್ಪ ಮಸಳಿ ಹಾಗೂ ಜಗದೀಶ ಘಂಟನವರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪ್ರಗತಿಪರ ಸಂಘಟನೆ ಸದಸ್ಯರು, ಜನ ವೇದಿಕೆ ಮುಖಂಡರು, ಹಳ್ಳಿ ಅಭಿವೃದ್ಧಿ ಸಮಿತಿಯ ಸದಸ್ಯರು, ಸ್ವಸಹಾಯ ಸಂಘದ ಮಹಿಳೆಯರು, ರೋಶನಿ ಸಂಸ್ಥೆಯ ಸಿಬ್ಬಂದಿಗಳು, ವಿಶೇಷ ಚೇತನ ಶಾಲಾ ಮಕ್ಕಳು ಮತ್ತು ಅವರ ಸಿಬ್ಬಂದಿ ವರ್ಗದವರು, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನಿರ್ಮಲ ಅವರು ಸರ್ವರನ್ನ ಸ್ವಾಗತಿಸಿದರು. ಎಸ್. ವಿ. ಪಾಟೀಲ್ ನಿರೂಪಿಸಿದರು. ಗೌರಮ್ಮ ವೈ. ಕೆ. ವಂದಿಸಿದರು.





