“ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದಿಟ್ಟ ವೀರನಾಗಿ ಬ್ರಿಟಿಷರ ವಿರುದ್ಧ ಹೋರಾಡಿ ಭಾರತಕ್ಕೆ ಸ್ವಾತಂತ್ರ್ಯ ಬಿಡುಗಡೆ ಮಾಡಲು ನಿರಂತರವಾಗಿ ಸುಭಾಷ್ ಚಂದ್ರ ಭೋಸ್ ಅವರು ಹೋರಾಟ ಮಾಡಿದ್ದಾರೆ” ಎಂದು ಎಸ್ಸಿ ಎಸ್ಟಿ ಹಾಗೂ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷರು ಉಡಚಪ್ಪ ಮಾಳಗಿ ಹೇಳಿದರು.
ಹಾವೇರಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ,ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ(ರಿ)ವತಿಯಿಂದ ನೇತಾಜಿ ಸುಭಾಷ ಚಂದ್ರ ಭೋಸ್ ಅವರ ಜಯಂತಿಯಲ್ಲಿ ಮಾತನಾಡಿದರು.
ನೇತಾಜಿ ಸುಭಾಸ ಚಂದ್ರ ಭೋಸ್ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸಿ ಮಾತನಾಡಿದ ಅವರು, “ಸುಭಾಸ್ ಚಂದ್ರಬೋಸ್ ಅವರು ಭಾರತೀಯ ರಾಷ್ಟ್ರೀಯ ಸೇನೆಯ ಮೂಲಕ ಯುವಕರನ್ನು ಭಾರತ ಮಾತೆಯ ಸೇವೆ ಮಾಡಲು ಪ್ರೇರೆಪಿಸಿದರು. ರಾಷ್ಟ್ರ ನಿರ್ಮಾಣ ಮಾಡುವ ಇವರ ಪ್ರಯತ್ನ ಎಲ್ಲರನ್ನು ಬೆರಗುಗೊಳಿಸುವಂತದಾಗಿದೆ. ವಿದ್ಯಾರ್ಥಿಗಳು ಹಾಗೂ ಯುವಕರು ಸುಭಾಷ ಚಂದ್ರ ಭೋಸ್ ಅವರ ಜೀವನ ಪುಸ್ತಕಗಳನ್ನು ಓದುವ ಮೂಲಕ ದೇಶಪ್ರೇಮ ಬೆಳಿಸಿಕೊಳ್ಳಬೇಕು” ಎಂದರು.
“ಭೋಸ್ ಅವರ ದೇಶಪ್ರೇಮ ಎಲ್ಲರಿಗೂ ಮಾದರಿಯಾಗಿದ್ದು, ಅವರ ಜೀವನದ ಹೋರಾಟ ನಮಗೆ ಸ್ಪೂರ್ತಿಯಾಗಲಿ” ಎಂದು ಉಡಡಪ್ಪ ಮಾಳಗಿ ಹೇಳಿದರು.
ಈ ಸುದ್ದಿ ಓದಿದ್ದೀರಾ? ಗದಗ | ಪ್ರಾಮಾಣಿಕ ಮೆರೆದ ರಿತ್ತಿ ಕುಟುಂಬಕ್ಕೆ 30×40 ನಿವೇಶನ; ಲಕ್ಕುಂಡಿ ಗ್ರಾಪಂ ನಿರ್ಧಾರ
ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣನವರ, ಮಖಬೂಲ್ ಎಂ.ಕೆ, ಶೆಟ್ಟಿ ವಿಭೂತಿ, ಮಾಲತೇಶ ಯಲ್ಲಾಪುರ, ಸುಭಾಸ ಚವ್ಹಾಣ, ಗದಿಗೆಪ್ಪಗೌಡ ನೆಲೂಗಲ್, ಮೃತ್ಯುಂಜಯ ಮುಷ್ಠಿ, ಮರಿಯಪ್ಪ ನಡುವಿನಮನಿ, ಜಗದೀಶ ಹರಿಜನ, ರವಿ ದಂಡಿನ ಸೇರಿದಂತೆ ವಿವಿಧ ಸಂಘಟನೆಯ ಮುಖಂಡರು ಇದ್ದರು.





