ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗ ವತಿಯಿಂದ ಯಾಲಕ್ಕಿ ಕಂಪಿನ ನಗರಿ ಹಾವೇರಿ ಪಟ್ಟಣದ ಚೌಡೇಶ್ವರಿ ವೃತ್ತದಲ್ಲಿ ಧ್ವಜ ಸ್ತಂಭದ ಬಳಿ ಕರ್ನಾಟಕ ರತ್ನ ಡಾಕ್ಟರ್ ವಿಷ್ಣುವರ್ಧನ್ ರವರ ಪುಣ್ಯ ಸ್ಮರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಬಳಗ ಜಿಲ್ಲಾಧ್ಯಕ್ಷರು ಯಲ್ಲಪ್ಪ ಮರಾಠೆ ಮಾತನಾಡಿ, “ಈಗಾಗಲೇ ನಮ್ಮ ಸಂಘಟನೆ ವತಿಯಿಂದ ಯಾಲಕ್ಕಿ ಕಂಪಿನ ನಗರ ಹಾವೇರಿ ಪಟ್ಟಣದಲ್ಲಿ ಕರ್ನಾಟಕ ರತ್ನ ವಿಷ್ಣುವರ್ಧನ್ ಅವರ ಪುತ್ತಳಿಕೆಯನ್ನು ನಿರ್ಮಿಸಲು ಸೂಕ್ತವಾದ ಸ್ಥಳವನ್ನು ಒದಗಿಸಿಕೊಡುವಂತೆ ಮಾನ್ಯ ನಗರಸಭೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದೇವೆ” ಎಂದರು.
“ಮನವಿ ಆಯುಕ್ತರು ಸ್ವೀಕರಿಸಿದ್ದು, ‘ಕರ್ನಾಟಕ ರತ್ನ ಡಾಕ್ಟರ ವಿಷ್ಣುವರ್ಧನ್ ರವರ ಪುತ್ತಳಿಕೆಯನ್ನು ನಿರ್ಮಿಸಲು ನಗರಸಭೆಯ ಸದಸ್ಯರ ಜೊತೆ ಚರ್ಚಿಸಿ ಸ್ಥಳ ಪರಿಶೀಲನೆ ಮಾಡಿ ಸೂಕ್ತ ಸ್ಥಳವನ್ನು ನೀಡಲಾಗುವುದು’ ಎಂದು ಭರವಸೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗ ಆ ಜಾಗದಲ್ಲಿ ಡಾಕ್ಟರ್ ವಿಷ್ಣುವರ್ಧನ್ ಪುತ್ತಳಿಕೆಯನ್ನು ನಿರ್ಮಿಸಲಾಗುವುದು” ಎಂದು ನುಡಿದರು.
ಈ ಸಂದರ್ಭದಲ್ಲಿ ಮಹಿಳಾ ಅಧ್ಯಕ್ಷರು ಗೀತಾಬಾಯಿ ಲಮಾಣಿ ಮಾತನಾಡಿ, “ಪಟ್ಟಣದಲ್ಲಿ ವಿಷ್ಣುವರ್ಧನ್ ಅವರ ಪುತ್ತಳಿಕೆಯನ್ನು ನಮ್ಮ ಸಂಘಟನೆಯಿಂದ ನಿರ್ಮಿಸುವ ಮುಖಾಂತರ ಅಭಿಮಾನಿಗಳ ಕನಸು ನನಸು ಮಾಡುವುದಾಗಿ” ನುಡಿದರು,
ಈ ಸಂದರ್ಭದಲ್ಲಿ ರಾಜ್ಯ ಕಾರ್ಯಧ್ಯಕ್ಷರಾದ ಯೊಸುಫ್ ಸೈಕಲಗಾರ,ಹಾವೇರಿ ತಾಲೂಕ ಅಧ್ಯಕ್ಷರಾದ ರಾಜಾಭಕ್ಷ ಮಾನೇಗಾರ, ತಾಲೂಕ ಯುವ ಘಟಕದ ಅಧ್ಯಕ್ಷರಾದ ಅನಿಲ್ ಮಾವರಕರ, ರಕ್ಷೀತಾ ಲಮಾಣಿ, ಪರಶುರಾಮ,ಮಂಜು ಮೆಗೇರಿ, ನನ್ನು, ರಮೇಶ್, ಸೇರಿದಂತೆ ಅನೇಕ ಕರವೇ ಸ್ವಾಭಿಮಾನಿ ಬಳಗ ಕಾರ್ಯಕರ್ತರು ಹಾಗೂ ವಿಷ್ಣುವರ್ಧನ ಅಭಿಮಾನಿಗಳು ಪಾಲ್ಗೊಂಡಿದ್ದರು.





