“ಆಧುನಿಕ ಯುಗದಲ್ಲಿ ಸಮಾಜಶಾಸ್ತ್ರೀಯ ಸಂಶೋಧನೆಯಲ್ಲಿ ಸಂಖ್ಯಾಶಾಸ್ತ್ರದ ಪಾತ್ರ ಶ್ಲಾಘನೀಯ” ಎಂದು ಪ್ರೊ. ಮಂಜುನಾಥ ಹೂಗಾರಹೇಳಿದರು.
ಹಾವೇರಿ ಪಟ್ಟಣದ ಕೆಎಲ್ಇ ಸಂಸ್ಥೆಯ ಜಿ. ಎಚ್ ಮಹಾವಿದ್ಯಾಲಯದಲ್ಲಿ ಇಂದು ಸಮಾಜಶಾಸ್ತ್ರ ವಿಭಾಗದ ವತಿಯಿಂದ ‘ಸಮಾಜ ಶಾಸ್ತ್ರೀಯ ಸಂಶೋಧನೆಯಲ್ಲಿ ಸಂಖ್ಯಾಶಾಸ್ತ್ರ’ ಎಂಬ ವಿಷಯದ ಕುರಿತು ಒಂದು ದಿನದ ವಿಶೇಷ ಉಪನ್ಯಾಸ ಕಾರ್ಯಕ್ರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗುಡಿಗೇರಿ ಸಮಾಜ ಶಾಸ್ತ್ರದ ಉಪನ್ಯಾಸಕರು ಪ್ರೊ. ಮಂಜುನಾಥ ಹೂಗಾರ ಉಪನ್ಯಾಸ ನೀಡಿದರು.
ಸಮಾಜಶಾಸ್ತ್ರ ಸಂಶೋಧನೆಯಲ್ಲಿ ಸಂಖ್ಯಾಶಾಸ್ತ್ರ ಕುರಿತು ಮಾತನಾಡುತ್ತಾ, “ಇವತ್ತಿನ ಆಧುನಿಕ ಜಗತ್ತಿನಲ್ಲಿ ಸಂಶೋಧನೆಯು ಬಹಳ ಮುಖ್ಯ. ಅದರ ಜೊತೆಗೆ ಸಂಖ್ಯಾಶಾಸ್ತ್ರವು ಬಹಳ ಉಪಯುಕ್ತ” ಎಂಬುದರ ಕುರಿತು ಉಪನ್ಯಾಸವನ್ನು ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರು ಪ್ರೊ. ಎಂ. ಎಂ. ಹೊಳ್ಳಿಯವರ, ಐಕ್ಯೂಎಸಿ ಕೋಆರ್ಡಿನೇಟರ್ ಪ್ರೊ. ರೂಪಾ ಕೋರೆ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರು ಪ್ರೊ. ಶರಣಪ್ಪ ಕದರಮಂಡಲಗಿ, ಸಮಾಜಶಾಸ್ತ್ರದ ವಿಭಾಗದ ಉಪನ್ಯಾಸಕರು ಪ್ರೊ. ಉದಯ್ ಕುಮಾರ್ ಕೆ ಉಪಸ್ಥಿತರಿದ್ದರು. ಕಾರ್ಯಕ್ರಮವು ಪ್ರಾರ್ಥನೆಯನ್ನು ವಿದ್ಯಾರ್ಥಿನಿಗಳು ಕಾವ್ಯ ಓಲೇಕಾರ ಮತ್ತು ಸಂಗಡಿಗರು. ಕುಮಾರ ದರ್ಶನ ಸ್ವಾಗತಿಸಿದರು. ವಿದ್ಯಾರ್ಥಿ ಜಗದೀಶ ಮಾಲಣ್ಣನವರ ಕಾರ್ಯಕ್ರಮವನ್ನು ನಿರೂಪಿಸಿದರು.





