ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ತಾಲೂಕು ಪಂಚಾಯತ್ ಬ್ಯಾಡಗಿ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಬ್ಯಾಡಗಿ ಗ್ರಾಮ ಸ್ವರಾಜ್ ಅಭಿಯಾನ ಕರ್ನಾಟಕ ಹಾಗೂ ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ರಾಣಿಬೆನ್ನೂರ ಇವರ ಸಂಯುಕ್ತಾಶ್ರಯದಲ್ಲಿ ಮಹಾತ್ಮಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆ ಅಡಿಯಲ್ಲಿ ಕಾಯಕ ಬಂಧುಗಳಿಗೆ ಹಾಗೂ ಮಾಸ್ಟರ್ ತರಬೇತಿದಾರರಿಗೆ ಪುನಃಶ್ಚೇತನ ತರಬೇತಿ ಕಾರ್ಯಾಗಾರ ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದ ತಾಲೂಕು ಪಂಚಾಯತ್ ಸಭಾ ಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ವನಸಿರಿ ಗ್ರಾಮೀಣ ಸಂಸ್ಥೆ ಸಂಸ್ಸುದ್ದಿನ ಬಳಿಗಾರ್ ಅವರು ಪ್ರಸ್ತಾವಿಕ ಮಾತನಾಡಿ, ಮಹಾತ್ಮ ಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗಖಾತ್ರಿಯಲ್ಲಿ 15 ಸಾವಿರ ಮೇಟ್ಸ್ ಗಳು ಇದ್ದಾರೆ. ಇದರಲ್ಲಿ 8ಸಾವಿರ ಆಕ್ಟಿವ್ ಆಗಿ ಕೆಲಸ ಮಾಡುತ್ತಿದ್ದಾರೆ. ಆಗ ಮೇಟ್ ಗಳಿಗೆ ಕೆಲಸ ಮಾಡಲು ಸಂಘರ್ಷ ಮಾಡಬೇಕಾದ ಸ್ಥಿತಿ ಇತ್ತು. ಹಿಂದಿನ ತರಬೇತಿಗಳಿಂದ ಈ ಸ್ಥಿತಿ ಈಗ ಬದಲಾಗಿದೆ. ಇಓ ಅವರು ಕ್ರಿಯಾಶೀಲ ವ್ಯಕ್ತಿಯಾಗಿದ್ದು, ಗ್ರಾಮೀಣ ದುಡಿಯುವ ಜನರಿಗೆ ಸಾಕಷ್ಟು ಕ್ರಿಯಾ ಯೋಜನೆಗಳನ್ನು ರೂಪಿಸಿದ್ದಾರೆ.
“ನರೇಗಾ ಯೋಜನೆಯಲ್ಲಿ ಮಹಿಳೆಯರ ಉದ್ಯೋಗ ಪ್ರಮಾಣ ಹೆಚ್ಚಾಗಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು” ಎಂದರು.
ಹೊಲಗಳ ಬದುವುಗಳಲ್ಲಿ ನರೇಗಾ ಮೂಲಕ ಒಡ್ದು ಹಾಕುವುದರಿಂದ ನೀರಿನ ಕೊರತೆಯನ್ನು ನಿಗಿಸುತ್ತದೆ. ಹಾಗಾಗಿ ನಾವೆಲ್ಲರೂ ನರೇಗಾ ಯೋಜನೆಯನ್ನು ಬೆಳೆಸೋಣ. ಒಗ್ಗಟ್ಟಾಗಿ ಕೆಲಸ ಮಾಡೋಣ” ಎಂದರು.
ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಮಾತನಾಡಿ, “ನರೇಗಾ ಕೆಲಸ ಆರಂಭ ಆಗಿದ್ದರಿಂದಲೂ ಕೆಲಸ ಮಾಡುತ್ತಾ ಬಂದಿದ್ದೀರಾ. ಗ್ರಾಮ ಸ್ವರಾಜ್ ಅಭಿಯಾನ ಮೂಲಕ ತರಬೇತಿ ಕೊಡುವ ಮೂಲಕ ಜವಾಬ್ದಾರಿ ಹೆಚ್ಚಾಗಿರುವುದು ಕಾಣುತ್ತಿದ್ದೇವೆ. ಈ ತರಬೇತಿಯಿಂದ ಯಾವುದೇ ಸಮಸ್ಯೆಗಳು ಈಗ ಆಗುತ್ತಿಲ್ಲ.
“ಕಾರ್ಮಿಕರಿಗೆ ಕ್ರಿಯಾಶೀಲ ಮೇಟ್ (ಕಾಯಕ ಬಂಧುಗಳಿಗೆ ಐಡಿ ಕಾರ್ಡ್ ಕೊಡಿಸುವ ಪ್ರಯತ್ನ ಮಾಡುತ್ತೀವೆ” ಎಂದು ಹೇಳಿದರು.
ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮೂಲಕ ಜಲ ಸಂಪನ್ಮೂಲ ಹೆಚ್ಚಿಸುವ ಯೋಜನೆಗಳನ್ನು ನರೇಗಾ ಮೂಲಕ ಕೆಲಸ ಮಾಡುತ್ತಿರುವುದು ಖುಷಿ ಸಂಗತಿ. ಎಲ್ಲ ಹಳ್ಳಿಗಳಲ್ಲಿ ಈ ರೀತಿ ಯೋಜನೆಗಳನ್ನು ಹಾಕಿಕೊಳ್ಳಬೇಕು” ಎಂದರು.
ಗ್ರಾಮ ಸ್ವರಾಜ್ ಅಭಿಯಾನ ರಾಜ್ಯ ಮುಖಂಡರು ಅಶೋಕ ಯಾರಗಟ್ಟಿ ಮಾತನಾಡಿ, “ರ್ನಾಟಕದಲ್ಲಿ 50 ತಾಲ್ಲೂಕು, 20 ಜಿಲ್ಲೆಗಳಲ್ಲಿ ಈ ತರಬೇತಿಗಳನ್ನು ಹಮ್ಮಿಕೊಳ್ಳಲಾಗಿದೆ. ಹಾವೇರಿ ಜಿಲ್ಲೆಯಲ್ಲಿ ರಾಣಿಬೆನ್ನೂರ, ಬ್ಯಾಡಗಿ, ಹಿರೇಕೆರೂರ ತಾಲೂಕುಗಳಲ್ಲಿ ಇರುವ ಮೆಟ್ ಗಳಿಗೆ ತರಬೇತಿ ಕೊಡಲಾಗುತ್ತಿದೆ. ಸಾಕಷ್ಟು ವಿಷಯಗಳನ್ನು ಕಲಿಯೋಕೆ ಅವಕಾಶಗಳಿವೆ. ಅಳತೆ ಸಮಸ್ಯೆಗಳು ಅಳತೆ, ಕಡಿಮೆ ಆಗುತ್ತದೆಯೋ ಇಲ್ಲವೋ ತಿಳಿಯಲು ಈ ತರಬೇತಿ ಅನುಕೂಲ ಆಗಲಿದೆ” ಎಂದರು. ಹೋಗಬೇಕು.
“ಆಕ್ಟಿವ್ ಹಾಗೂ ನ್ಯಾಯಯುತ ಕಾಯಕ ಬಂದುಗಳನ್ನು ಗುರುತಿಸಿ ಪಿಡಿಓ ಮೂಲಕ ಗುರುತಿನ ಚೀಟಿ ಕೊಡಬೇಕು” ಎಂದು ಹೇಳಿದರು.
ತರಬೇತಿಯಲ್ಲಿ ತಾಲ್ಲೂಕಿನ ವಿವಿಧ ಗ್ರಾಮದ ನರೇಗಾ ಮೇಟ್ ಗಳು ಉಪಸ್ಥಿತರಿದ್ದರು.





